ETV Bharat / state

ಧರ್ಮ ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸಬೇಕು: ವಿನಯ್‌ ಗುರೂಜಿ - ಅಹಿಂಸಾ ಪರಮೋ ಧರ್ಮ ಎಂಬುದನ್ನ ಸಾರಿರುವ ದೇಶ ಭಾರತ

ಎಲ್ಲಾ ಧರ್ಮದ ಮೂಲ ಮಾನವೀಯತೆ. ರಕ್ತ, ಶಸ್ತ್ರದಿಂದ ಶಾಂತಿ ಬಂದಿಲ್ಲ, ಶಾಸ್ತ್ರದಿಂದ ಬಂದಿರುವುದು. ಎಲ್ಲಾ ಧರ್ಮದವರು ಶಾಂತಿ ಸೌಹಾರ್ದತೆಯಿಂದ ಇರಬೇಕು ಎಂದು ಅವರು ಹೇಳಿದರು.

Vinay Guruji
ಗೌರಿಗದ್ದೆ ಆಶ್ರಮದ ಅವಧೂತ ವಿನಯ್‌ ಗುರೂಜಿ
author img

By

Published : Apr 14, 2022, 3:20 PM IST

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷದ ಬಗ್ಗೆ ಎಲ್ಲರೂ ಕುಳಿತು ಮಾತುಕತೆ ನಡೆಸಬೇಕು. ಈ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ. ಎಲ್ಲಾ ಗ್ರಂಥಗಳ ಮೂಲ ಅಹಿಂಸೆ. ಅಹಿಂಸಾ ಪರಮೋ ಧರ್ಮ ಎಂಬುದನ್ನು ಸಾರಿರುವ ದೇಶ ನಮ್ಮ ಭಾರತ ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್‌ ಗುರೂಜಿ ಹೇಳಿದರು.


ಇಂದು ಮೈಸೂರು ಮೃಗಾಲಯಕ್ಕೆ ಆಗಮಿಸಿದ ವಿನಯ್ ಗುರೂಜಿ ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ದೇವರಿಗೆ ಚಿನ್ನದ ಹುಲಿ, ಜಿಂಕೆಯನ್ನು ಕೊಡುತ್ತೇವೆ. ಆದರೆ ಬದುಕಿರುವ ಪ್ರಾಣಿಗಳಿಗೆ ಏನನ್ನೂ ನೀಡುವುದಿಲ್ಲ.‌ ಹಾಗಾಗಿ ನಮ್ಮ ಆಶ್ರಮ ಮಾದರಿಯಾಗಲಿ‌‌ ಎಂದು ಹುಲಿಯನ್ನು ದತ್ತು ಪಡೆಯುತ್ತಿದ್ದೇವೆ. ಜೊತೆಗೆ, ಮೃಗಾಲಯದ ಸಿಬ್ಬಂದಿಗೆ ದಿನಸಿ ಹಾಗೂ ತರಕಾರಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ವಿರೋಧ ನಡುವೆ ಪ್ರೇಮ ವಿವಾಹವಾದ ಜೋಡಿ.. ಈ ಮದುವೆ ಲವ್​ ಜಿಹಾದ್​ ಎಂದ ಸಿಪಿಎಂ ಕಾರ್ಯಕರ್ತ!

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷದ ಬಗ್ಗೆ ಎಲ್ಲರೂ ಕುಳಿತು ಮಾತುಕತೆ ನಡೆಸಬೇಕು. ಈ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ. ಎಲ್ಲಾ ಗ್ರಂಥಗಳ ಮೂಲ ಅಹಿಂಸೆ. ಅಹಿಂಸಾ ಪರಮೋ ಧರ್ಮ ಎಂಬುದನ್ನು ಸಾರಿರುವ ದೇಶ ನಮ್ಮ ಭಾರತ ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್‌ ಗುರೂಜಿ ಹೇಳಿದರು.


ಇಂದು ಮೈಸೂರು ಮೃಗಾಲಯಕ್ಕೆ ಆಗಮಿಸಿದ ವಿನಯ್ ಗುರೂಜಿ ಮಾಧ್ಯಮಗಳ ಜೊತೆ ಮಾತನಾಡಿದರು. ನಾವು ದೇವರಿಗೆ ಚಿನ್ನದ ಹುಲಿ, ಜಿಂಕೆಯನ್ನು ಕೊಡುತ್ತೇವೆ. ಆದರೆ ಬದುಕಿರುವ ಪ್ರಾಣಿಗಳಿಗೆ ಏನನ್ನೂ ನೀಡುವುದಿಲ್ಲ.‌ ಹಾಗಾಗಿ ನಮ್ಮ ಆಶ್ರಮ ಮಾದರಿಯಾಗಲಿ‌‌ ಎಂದು ಹುಲಿಯನ್ನು ದತ್ತು ಪಡೆಯುತ್ತಿದ್ದೇವೆ. ಜೊತೆಗೆ, ಮೃಗಾಲಯದ ಸಿಬ್ಬಂದಿಗೆ ದಿನಸಿ ಹಾಗೂ ತರಕಾರಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ವಿರೋಧ ನಡುವೆ ಪ್ರೇಮ ವಿವಾಹವಾದ ಜೋಡಿ.. ಈ ಮದುವೆ ಲವ್​ ಜಿಹಾದ್​ ಎಂದ ಸಿಪಿಎಂ ಕಾರ್ಯಕರ್ತ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.