ETV Bharat / state

ಚಾಮುಂಡೇಶ್ವರಿ ಆಶೀರ್ವಾದದಿಂದ ಆನೆಗಳು ಆರೋಗ್ಯವಾಗಿವೆ: ಡಿಸಿಎಫ್ ಅಲೆಕ್ಸಾಂಡರ್

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆಗಳು ತಾಯಿ ಚಾಮುಂಡಿ ಆಶೀರ್ವಾದದಿಂದ ಆರೋಗ್ಯವಾಗಿವೆ ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.

author img

By

Published : Oct 24, 2020, 12:52 PM IST

csd
ಡಿಸಿಎಫ್ ಅಲೆಗ್ಸಾಂಡರ್ ಹೇಳಿಕೆ

ಮೈಸೂರು: ಸರಳ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಆರೋಗ್ಯದಿಂದ ಇವೆ. ಯಾವುದೇ ತೊಂದರೆ ಇಲ್ಲ ಎಂದು ಡಿಸಿಎಫ್ ಅಲೆಕ್ಸಾಂಡರ್ ಹೇಳಿದ್ದಾರೆ.

ಡಿಸಿಎಫ್ ಅಲೆಗ್ಸಾಂಡರ್ ಹೇಳಿಕೆ

ಅರಮನೆಯಲ್ಲಿ ಮರದ ಅಂಬಾರಿ ತಾಲೀಮಿನ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಮರದ ಅಂಬಾರಿ ತಾಲೀಮು ನಡೆಸಿದ್ದೇವೆ. ನಗರ ಪೊಲೀಸ್​ ಕಮಿಷನರ್ ನೇತೃತ್ವದಲ್ಲಿ ಸೋಮವಾರ ಸಿಎಂ ಯಡಿಯೂರಪ್ಪ ಚಾಮುಂಡಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.

ಇಲ್ಲಿಯವರೆಗೆ ಯಾವುದೇ ನ್ಯೂನತೆ ಇಲ್ಲದೆ ಎಲ್ಲ ಕಾರ್ಯಕ್ರಮಗಳೂ ಸರಾಗವಾಗಿ ನಡೆದಿವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಕೆಲಸಗಳು ಚೆನ್ನಾಗಿ ನಡೆಯುತ್ತಿದ್ದು, ಇವತ್ತು 500 ಕೆ.ಜಿ ತೂಕ ಹಾಕದೇ ಜಂಬೂಸವಾರಿ ನಡೆಸಿದ್ದೇವೆ ಎಂದರು.

ಮೈಸೂರು: ಸರಳ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಆರೋಗ್ಯದಿಂದ ಇವೆ. ಯಾವುದೇ ತೊಂದರೆ ಇಲ್ಲ ಎಂದು ಡಿಸಿಎಫ್ ಅಲೆಕ್ಸಾಂಡರ್ ಹೇಳಿದ್ದಾರೆ.

ಡಿಸಿಎಫ್ ಅಲೆಗ್ಸಾಂಡರ್ ಹೇಳಿಕೆ

ಅರಮನೆಯಲ್ಲಿ ಮರದ ಅಂಬಾರಿ ತಾಲೀಮಿನ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಮರದ ಅಂಬಾರಿ ತಾಲೀಮು ನಡೆಸಿದ್ದೇವೆ. ನಗರ ಪೊಲೀಸ್​ ಕಮಿಷನರ್ ನೇತೃತ್ವದಲ್ಲಿ ಸೋಮವಾರ ಸಿಎಂ ಯಡಿಯೂರಪ್ಪ ಚಾಮುಂಡಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.

ಇಲ್ಲಿಯವರೆಗೆ ಯಾವುದೇ ನ್ಯೂನತೆ ಇಲ್ಲದೆ ಎಲ್ಲ ಕಾರ್ಯಕ್ರಮಗಳೂ ಸರಾಗವಾಗಿ ನಡೆದಿವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಕೆಲಸಗಳು ಚೆನ್ನಾಗಿ ನಡೆಯುತ್ತಿದ್ದು, ಇವತ್ತು 500 ಕೆ.ಜಿ ತೂಕ ಹಾಕದೇ ಜಂಬೂಸವಾರಿ ನಡೆಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.