ETV Bharat / state

ರೈಲ್ವೆ ಬ್ಯಾರಿಕೇಡ್ ದಾಟುತ್ತಿರುವ ಕಾಡಾನೆಗಳು: ವಿಡಿಯೋ ವೈರಲ್​

author img

By

Published : May 26, 2021, 10:20 PM IST

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಗ್ರಾಮ, ಬಂಡಿಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಕೊಡಗಿನ ಪ್ರದೇಶಗಳಲ್ಲಿ ಕಾಡಾನೆಗಳು ರೈಲ್ವೆ ಬ್ಯಾರಿಕೇಡ್ ಅ​ನ್ನು ದಾಟುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.​

elephant-crossing-railway-barricade-at-kushalnagar
ರೈಲ್ವೆ ಬ್ಯಾರಿಕೇಡ್ ದಾಟುತ್ತಿರುವ ಕಾಡಾನೆ

ಮೈಸೂರು: ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಕಲಾಗಿರುತ್ತದೆ. ಆದರೆ, ಇಂತಹ ರೈಲ್ವೆ ಬ್ಯಾರಿಕೇಡ್ ಅ​ನ್ನು ಕಾಡಾನೆಗಳು ಮನುಷ್ಯರಂತೆ ಸರಾಗವಾಗಿ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ರೀತಿ ದೃಶ್ಯಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ, ಬಂಡಿಪುರ ರಾಷ್ಟ್ರೀಯ ಉದ್ಯಾನ ಹಾಗೂ ಕೊಡಗಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ.

ರೈಲ್ವೆ ಬ್ಯಾರಿಕೇಡ್ ದಾಟುತ್ತಿರುವ ಕಾಡಾನೆಗಳು

ಕಾಡಾನೆಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ಕಾಡಂಚಿನ ಪಕ್ಕದಲ್ಲಿ ಆನೆ ಕಂದಕಗಳನ್ನು‌ ನಿರ್ಮಿಸಿ ಕಂದಕದ ಪಕ್ಕ ರೈಲ್ವೆ ಬ್ಯಾರಿಕೇಡ್​ಗಳನ್ನು ಹಾಕುವ ಮೂಲಕ ನಾಡಿಗೆ ಬಾರದಂತೆ ತಡೆಗೊಡೆ ಹಾಕಿದ್ದಾರೆ.

ಆದರೆ, ಬುದ್ದಿವಂತ ಕಾಡಾನೆಗಳು ಮನುಷ್ಯರಿಗಿಂತ ನಾವೇನೂ ಕಡಿಮೆ ಇಲ್ಲವೆಂಬಂತೆ ರೈಲ್ವೆ ಬ್ಯಾರಿಕೇಡ್ ಗಳನ್ನು ಚಾಣಾಕ್ಷತನದಿಂದ ದಾಟಿ ನಾಡಿಗೆ ಬಂದು ಬೆಳೆಗಳನ್ನು‌ ತಿಂದು ಮರಳಿ ಕಾಡಿಗೆ ಹೋಗುತ್ತಿವೆ. ಕುಶಾಲನಗರ ಸಮೀಪ‌ದ ಗ್ರಾಮಗಳಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಓದಿ: ಆಮ್ಲಜನಕ ಸ್ವಾವಲಂಬನೆಗಾಗಿ ನೂತನ ಕೈಗಾರಿಕಾ ಉತ್ತೇಜನ ನೀತಿ; ಶೆಟ್ಟರ್

ಮೈಸೂರು: ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಕಲಾಗಿರುತ್ತದೆ. ಆದರೆ, ಇಂತಹ ರೈಲ್ವೆ ಬ್ಯಾರಿಕೇಡ್ ಅ​ನ್ನು ಕಾಡಾನೆಗಳು ಮನುಷ್ಯರಂತೆ ಸರಾಗವಾಗಿ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ರೀತಿ ದೃಶ್ಯಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮ, ಬಂಡಿಪುರ ರಾಷ್ಟ್ರೀಯ ಉದ್ಯಾನ ಹಾಗೂ ಕೊಡಗಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ.

ರೈಲ್ವೆ ಬ್ಯಾರಿಕೇಡ್ ದಾಟುತ್ತಿರುವ ಕಾಡಾನೆಗಳು

ಕಾಡಾನೆಗಳ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ಕಾಡಂಚಿನ ಪಕ್ಕದಲ್ಲಿ ಆನೆ ಕಂದಕಗಳನ್ನು‌ ನಿರ್ಮಿಸಿ ಕಂದಕದ ಪಕ್ಕ ರೈಲ್ವೆ ಬ್ಯಾರಿಕೇಡ್​ಗಳನ್ನು ಹಾಕುವ ಮೂಲಕ ನಾಡಿಗೆ ಬಾರದಂತೆ ತಡೆಗೊಡೆ ಹಾಕಿದ್ದಾರೆ.

ಆದರೆ, ಬುದ್ದಿವಂತ ಕಾಡಾನೆಗಳು ಮನುಷ್ಯರಿಗಿಂತ ನಾವೇನೂ ಕಡಿಮೆ ಇಲ್ಲವೆಂಬಂತೆ ರೈಲ್ವೆ ಬ್ಯಾರಿಕೇಡ್ ಗಳನ್ನು ಚಾಣಾಕ್ಷತನದಿಂದ ದಾಟಿ ನಾಡಿಗೆ ಬಂದು ಬೆಳೆಗಳನ್ನು‌ ತಿಂದು ಮರಳಿ ಕಾಡಿಗೆ ಹೋಗುತ್ತಿವೆ. ಕುಶಾಲನಗರ ಸಮೀಪ‌ದ ಗ್ರಾಮಗಳಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಓದಿ: ಆಮ್ಲಜನಕ ಸ್ವಾವಲಂಬನೆಗಾಗಿ ನೂತನ ಕೈಗಾರಿಕಾ ಉತ್ತೇಜನ ನೀತಿ; ಶೆಟ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.