ETV Bharat / state

ಚುನಾವಣಾ ಸಿಬ್ಬಂದಿಯಿಂದ ಸಿದ್ದರಾಮಯ್ಯ ಕಾರು ತಪಾಸಣೆ

author img

By

Published : Nov 20, 2019, 11:51 AM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರ ಕಾರು ತಡೆದ ಚೆಕ್ ಪೋಸ್ಟ್‌ ಸಿಬ್ಬಂದಿ ತಪಾಸಣೆ ಮಾಡಿದರು.

ಸಿದ್ದರಾಮಯ್ಯ ಕಾರ್ ಚೆಕ್ ಮಾಡಿದ ಚುನಾವಣೆ ಸಿಬ್ಬಂದಿ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುತ್ತಿದ್ದ ಕಾರು ತಡೆದ ಚುನಾವಣೆ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ಮಾಡಿದರು.

ಸಿದ್ದರಾಮಯ್ಯ ಕಾರ್ ಚೆಕ್ ಮಾಡಿದ ಚುನಾವಣೆ ಸಿಬ್ಬಂದಿ

ಬಿಳಿಕೆರೆ ಹೋಬಳಿ ಬಳಿಯ ಇರುವ ಮನುಗನಹಳ್ಳಿ ಚೆಕ್ ಪೋಸ್ಟ್​ನಲ್ಲಿ ಸಿದ್ದರಾಮಯ್ಯ ಅವರ ಕಾರು ತಡೆದಾಗ, "ಚೆಕ್ ಮಾಡ್ರಯ್ಯ ಬೇಗ, ಹುಡ್ಕೊಳ್ರಪ್ಪಾ ಹುಡ್ಕೊಳ್ಳಿ, ತಗೊಳ್ರಿ ಅದೇನೇನಿದೆ" ಅಂತಾ ತಮಾಷೆ ಮಾಡುತ್ತಲೇ ಚುನಾವಣಾಧಿಕಾರಿಗಳಿಗೆ ತಪಾಸಣೆಗೆ ಅನುವು ಮಾಡಿಕೊಟ್ಟರು. ಬಳಿಕ ನಿಮ್ಮ ಕರ್ತವ್ಯ ನೀವು ಮಾಡಿ ಎಂದು ಹೇಳಿ ಅಲ್ಲಿಂದ ಹೊರಟರು.

ಕಾರಿನಲ್ಲಿ ಸಿದ್ದರಾಮಯ್ಯ ಜೊತೆ ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕೂಡ ಇದ್ದರು. ಕಾರಿನ ಟ್ರಂಕ್‌ ತೆರೆಸಿ ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನಂತರ ಅದೇ ಮಾರ್ಗವಾಗಿ ಬಂದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರ ಕಾರನ್ನೂ ಚುನಾವಣಾ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುತ್ತಿದ್ದ ಕಾರು ತಡೆದ ಚುನಾವಣೆ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ಮಾಡಿದರು.

ಸಿದ್ದರಾಮಯ್ಯ ಕಾರ್ ಚೆಕ್ ಮಾಡಿದ ಚುನಾವಣೆ ಸಿಬ್ಬಂದಿ

ಬಿಳಿಕೆರೆ ಹೋಬಳಿ ಬಳಿಯ ಇರುವ ಮನುಗನಹಳ್ಳಿ ಚೆಕ್ ಪೋಸ್ಟ್​ನಲ್ಲಿ ಸಿದ್ದರಾಮಯ್ಯ ಅವರ ಕಾರು ತಡೆದಾಗ, "ಚೆಕ್ ಮಾಡ್ರಯ್ಯ ಬೇಗ, ಹುಡ್ಕೊಳ್ರಪ್ಪಾ ಹುಡ್ಕೊಳ್ಳಿ, ತಗೊಳ್ರಿ ಅದೇನೇನಿದೆ" ಅಂತಾ ತಮಾಷೆ ಮಾಡುತ್ತಲೇ ಚುನಾವಣಾಧಿಕಾರಿಗಳಿಗೆ ತಪಾಸಣೆಗೆ ಅನುವು ಮಾಡಿಕೊಟ್ಟರು. ಬಳಿಕ ನಿಮ್ಮ ಕರ್ತವ್ಯ ನೀವು ಮಾಡಿ ಎಂದು ಹೇಳಿ ಅಲ್ಲಿಂದ ಹೊರಟರು.

ಕಾರಿನಲ್ಲಿ ಸಿದ್ದರಾಮಯ್ಯ ಜೊತೆ ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಕೂಡ ಇದ್ದರು. ಕಾರಿನ ಟ್ರಂಕ್‌ ತೆರೆಸಿ ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ನಂತರ ಅದೇ ಮಾರ್ಗವಾಗಿ ಬಂದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರ ಕಾರನ್ನೂ ಚುನಾವಣಾ ಸಿಬ್ಬಂದಿ ಪರಿಶೀಲನೆ ನಡೆಸಿದರು.

Intro:ಸಿದ್ದರಾಮಯ್ಯ ಕಾರ್ ಚೆಕ್


Body:ಸಿದ್ದರಾಮಯ್ಯ ಕಾರ್ ಚೆಕ್


Conclusion:ಸಿದ್ದರಾಮಯ್ಯ ಕಾರ್ ಚೆಕ್ ಮಾಡಿದ ಚುನಾವಣೆ ಸಿಬ್ಬಂದಿ
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋಗುತ್ತಿದ್ದ ಕಾರನ್ನು ತಡೆದ ಚುನಾವಣೆ ಚೆಕ್ ಪೊಸ್ಟ್ ಅಧಿಕಾರಿಗಳು ತಪಾಸಣೆ ಮಾಡಿದರು.
ಬಿಳಿಕೆರೆ ಹೋಬಳಿ ಇರುವ ಮನುಗನಹಳ್ಳಿ ಚೆಕ್ ಪೋಸ್ಟ್ ಬಳಿ ಸಿದ್ದರಾಮಯ್ಯ ಅವರನ್ನು ಕಾರನ್ನು ತಡೆದಾಗ ಚೆಕ್ ಮಾಡ್ರಯ್ಯ ಬೇಗ, ಹುಡ್ಕು ಹುಡ್ಕು ಎಂದು ಹೇಳಿ.ನಿಮ್ಮ ಕೆಲಸ ಮಾಡಿ ಅಂದ್ರು.
ಕಾರಿನಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಇದ್ದರು.ಕಾರಿನ ಡಿಕ್ಕಿ ತೆಗಿಸಿ ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.
ಅದೇ ಮಾರ್ಗವಾಗಿ ಬಂದ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರ ಕಾರನ್ನು ಚುನಾವಣೆ ಅಧಿಕಾರಿಗಳು ಪರಿಶೀಲನೆ ನಡೆಸಿದರು...
(Exclusive)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.