ETV Bharat / state

ಪ್ರವಾಸಿ ತಾಣಗಳಿಗೆ ಬರುವವರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ದಾಯ: ಮೈಸೂರು ಡಿಸಿ

author img

By

Published : Mar 24, 2021, 3:17 PM IST

ಪ್ರವಾಸೋದ್ಯಮ ಈಗ ತಾನೇ ಚೇತರಿಕೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ತಾಣಗಳಿಗೆ ಬರುವ ಪ್ರವಾಸಿಗರು RTPCR ಕೋವಿಡ್ ವರದಿ ತರಬೇಕೆಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

DC Rohini Sindhuri
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು: ಪ್ರವಾಸೋದ್ಯಮ ಈಗ ತಾನೇ ಚೇತರಿಕೆ ಕಾಣುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕೋವಿಡ್ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ಸರ್ಕಾರಿ ಕೋವಿಡ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹೆಚ್ಚಾದರೆ ಮುಚ್ಚಿರುವ ಕೋವಿಡ್ ಕೇರ್ ಸೆಂಟರ್​​ಗಳನ್ನು ಮತ್ತೆ ತೆರೆಯಲಾಗುವುದು. ಈಗಾಗಲೇ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸುವಂತೆ ತಿಳಿಸಲಾಗಿದೆ ಎಂದರು.

ನಿರ್ಗತಿಕ ವಸತಿ ಗೃಹದಲ್ಲಿ ವಾಸವಿರುವ ವೃದ್ದರಿಗೆ ಯಾವುದೇ ಗುರುತಿನ ಚೀಟಿ ಇಲ್ಲದಿದ್ದರೂ ಎಲ್ಲಾರಿಗೂ ಪಾಲಿಕೆ ವತಿಯಿಂದ ಉಚಿತ ವಾಹನದಲ್ಲಿ ಕರೆದುಕೊಂಡು ಹೋಗಿ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಪಾಲಿಕೆ ಈಗಾಗಲೇ ಈ ಕೆಲಸ ಮಾಡುತ್ತಿದೆ.

ಕೋವಿಡ್ ಹೆಚ್ಚಾಗುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಬರುವ ಪ್ರವಾಸಿಗರು RT-PCR ಕೋವಿಡ್ ವರದಿ ತರಬೇಕು. ಜೊತೆಗೆ ನಂಜನಗೂಡಿನ ರಥೋತ್ಸವ ಸರ್ಕಾರಿ ಗೈಡ್-ಲೈನ್ಸ್​ ಪ್ರಕಾರ ನಡೆಯುತ್ತದೆ ಎಂದು ಇದೇ ವೇಳೆ ತಿಳಿಸಿದರು.

ಮೈಸೂರು: ಪ್ರವಾಸೋದ್ಯಮ ಈಗ ತಾನೇ ಚೇತರಿಕೆ ಕಾಣುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕೋವಿಡ್ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸದ್ಯ ಸರ್ಕಾರಿ ಕೋವಿಡ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹೆಚ್ಚಾದರೆ ಮುಚ್ಚಿರುವ ಕೋವಿಡ್ ಕೇರ್ ಸೆಂಟರ್​​ಗಳನ್ನು ಮತ್ತೆ ತೆರೆಯಲಾಗುವುದು. ಈಗಾಗಲೇ ಶಾಲೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ನಡೆಸುವಂತೆ ತಿಳಿಸಲಾಗಿದೆ ಎಂದರು.

ನಿರ್ಗತಿಕ ವಸತಿ ಗೃಹದಲ್ಲಿ ವಾಸವಿರುವ ವೃದ್ದರಿಗೆ ಯಾವುದೇ ಗುರುತಿನ ಚೀಟಿ ಇಲ್ಲದಿದ್ದರೂ ಎಲ್ಲಾರಿಗೂ ಪಾಲಿಕೆ ವತಿಯಿಂದ ಉಚಿತ ವಾಹನದಲ್ಲಿ ಕರೆದುಕೊಂಡು ಹೋಗಿ ಲಸಿಕೆ ನೀಡಲಾಗುತ್ತದೆ. ಇದಕ್ಕಾಗಿ ಪಾಲಿಕೆ ಈಗಾಗಲೇ ಈ ಕೆಲಸ ಮಾಡುತ್ತಿದೆ.

ಕೋವಿಡ್ ಹೆಚ್ಚಾಗುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಬರುವ ಪ್ರವಾಸಿಗರು RT-PCR ಕೋವಿಡ್ ವರದಿ ತರಬೇಕು. ಜೊತೆಗೆ ನಂಜನಗೂಡಿನ ರಥೋತ್ಸವ ಸರ್ಕಾರಿ ಗೈಡ್-ಲೈನ್ಸ್​ ಪ್ರಕಾರ ನಡೆಯುತ್ತದೆ ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.