ETV Bharat / state

ನಂಜನಗೂಡು ದೇವಾಲಯದ ಬಳಿ ಮಗು ಅಪಹರಣ ಪ್ರಕರಣ: ಆರೋಪಿ ಬಂಧನ, ಬಾಲಕಿ ರಕ್ಷಣೆ

author img

By

Published : Oct 5, 2020, 1:46 PM IST

ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಬಳಿ ಭಿಕ್ಷುಕಿಯ ಹೆಣ್ಣು ಮಗುವೊಂದನ್ನ ಕಿರಾತಕನೋರ್ವ ಅಕ್ಟೋಬರ್​ 1ರಂದು ಅಪಹರಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ಆರೋಪಿ ಗಂಗರಾಜುವನ್ನು ಬಂಧಿಸಿ ಬಾಲಕಿ ಕವಿತಾಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kavitha
ಮಗು ಕವಿತಾ

ಮೈಸೂರು: ನಂಜನಗೂಡಿನ ದೇವಸ್ಥಾನದ ಬಳಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

ಅಕ್ಟೋಬರ್​​ 1ರಂದು ನಂಜನಗೂಡು ದೇವಸ್ಥಾನದ ಬಳಿಯಿದ್ದ ಮೂರು ವರ್ಷದ ಕವಿತಾ ಎಂಬ ಮಗುವನ್ನು ವ್ಯಕ್ತಿವೋರ್ವ ಅಪಹರಿಸಿದ್ದ. ಮಗುವಿನ‌ ತಾಯಿ ಪಾರ್ವತಿ ಎಂಬಾಕೆ ಮೂಲತಃ ಕೆ.ಆರ್.ನಗರ ತಾಲೂಕಿನವರಾಗಿದ್ದು, ಹೊಟ್ಟೆ ಪಾಡಿಗಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಭಿಕ್ಷೆ ಬೇಡಿ ಮಗುವನ್ನು ಸಾಕುತ್ತಿದ್ದಳು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ಮಗುವನ್ನು ಅಪಹರಿಸಿಕೊಂಡು ಹೋಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಪಾರ್ವತಿ ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಗಂಗಾರಾಜು (47) ಎಂಬಾತನನ್ನು ಇಂದು ಬಂಧಿಸಿದ್ದಾರೆ.

ಭಿಕ್ಷುಕಿಯ ಎರಡನೇ ಮಗುವನ್ನೂ ಅಪಹರಿಸಿದ ಖದೀಮ: ದೂರು ದಾಖಲು

ನಂಜನಗೂಡು ಪಟ್ಟಣ ಪೊಲೀಸರು ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡ ರಚನೆ ಮಾಡಿ ತೀವ್ರವಾಗಿ ತನಿಖೆ ನಡೆಸಿದ್ದರು. ಅನುಮಾನಾಸ್ಪದವಾಗಿ ದೇವಾಲಯದ ಬಳಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ವಿಚಾರಿಸಿದಾಗ ಗಂಗಾರಾಜು ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ಕಾರ್ಯಪೃವೃತ್ತರಾದ ಪೊಲೀಸ್​​ ತಂಡ, ಹೆಚ್.ಡಿ.ಕೋಟೆ ತಾಲೂಕಿನ ಹುಣಸೆಕುಪ್ಪೆ ಗ್ರಾಮದಲ್ಲಿ ಗಂಗರಾಜು ಇರುವಿಕೆ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.

ಸದ್ಯ ಬಾಲಕಿ ಕವಿತಾಳನ್ನು ನಗರದ ಬಾಪೂಜಿ ಮಕ್ಕಳ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿ ಗಂಗಾರಾಜು ಮಗು ಅಪಹರಣ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಗಂಗರಾಜುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೈಸೂರು: ನಂಜನಗೂಡಿನ ದೇವಸ್ಥಾನದ ಬಳಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

ಅಕ್ಟೋಬರ್​​ 1ರಂದು ನಂಜನಗೂಡು ದೇವಸ್ಥಾನದ ಬಳಿಯಿದ್ದ ಮೂರು ವರ್ಷದ ಕವಿತಾ ಎಂಬ ಮಗುವನ್ನು ವ್ಯಕ್ತಿವೋರ್ವ ಅಪಹರಿಸಿದ್ದ. ಮಗುವಿನ‌ ತಾಯಿ ಪಾರ್ವತಿ ಎಂಬಾಕೆ ಮೂಲತಃ ಕೆ.ಆರ್.ನಗರ ತಾಲೂಕಿನವರಾಗಿದ್ದು, ಹೊಟ್ಟೆ ಪಾಡಿಗಾಗಿ ಶ್ರೀಕಂಠೇಶ್ವರ ದೇವಾಲಯದ ಬಳಿ ಭಿಕ್ಷೆ ಬೇಡಿ ಮಗುವನ್ನು ಸಾಕುತ್ತಿದ್ದಳು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ಮಗುವನ್ನು ಅಪಹರಿಸಿಕೊಂಡು ಹೋಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಪಾರ್ವತಿ ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಅದೇ ದಿನ ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಗಂಗಾರಾಜು (47) ಎಂಬಾತನನ್ನು ಇಂದು ಬಂಧಿಸಿದ್ದಾರೆ.

ಭಿಕ್ಷುಕಿಯ ಎರಡನೇ ಮಗುವನ್ನೂ ಅಪಹರಿಸಿದ ಖದೀಮ: ದೂರು ದಾಖಲು

ನಂಜನಗೂಡು ಪಟ್ಟಣ ಪೊಲೀಸರು ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಂಡ ರಚನೆ ಮಾಡಿ ತೀವ್ರವಾಗಿ ತನಿಖೆ ನಡೆಸಿದ್ದರು. ಅನುಮಾನಾಸ್ಪದವಾಗಿ ದೇವಾಲಯದ ಬಳಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ವಿಚಾರಿಸಿದಾಗ ಗಂಗಾರಾಜು ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ಕಾರ್ಯಪೃವೃತ್ತರಾದ ಪೊಲೀಸ್​​ ತಂಡ, ಹೆಚ್.ಡಿ.ಕೋಟೆ ತಾಲೂಕಿನ ಹುಣಸೆಕುಪ್ಪೆ ಗ್ರಾಮದಲ್ಲಿ ಗಂಗರಾಜು ಇರುವಿಕೆ ಬಗ್ಗೆ ಮಾಹಿತಿ ಪಡೆದು, ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.

ಸದ್ಯ ಬಾಲಕಿ ಕವಿತಾಳನ್ನು ನಗರದ ಬಾಪೂಜಿ ಮಕ್ಕಳ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿ ಗಂಗಾರಾಜು ಮಗು ಅಪಹರಣ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಗಂಗರಾಜುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.