ETV Bharat / state

ಬಿಎಸ್​ವೈ ಸಂಪುಟ ರಚನೆ ಕುರಿತು ಹೆಚ್.‌ವಿಶ್ವನಾಥ್ ಮಾತು - The BJP government

ಪ್ರವಾಹದ ಸಂದರ್ಭದಲ್ಲಿ ರಾಜ್ಯದಲ್ಲಿ ಪೂರ್ಣಪ್ರಮಾಣದ ಸರ್ಕಾರ ಇರಬೇಕಿತ್ತು. ಆದರೂ ಆಗಸ್ಟ್​ 15ರ ನಂತರ ಸಂಪುಟ ರಚನೆಯಾಗುತ್ತದೆ ಎಂದು ಅನರ್ಹ ಶಾಸಕ ಹೆಚ್.‌ ವಿಶ್ವನಾಥ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

cabinate-formation-after-15-august
author img

By

Published : Aug 12, 2019, 3:07 PM IST

ಮೈಸೂರು: ಪ್ರವಾಹದ ಸಂದರ್ಭದಲ್ಲಿ ರಾಜ್ಯದಲ್ಲಿ ಪೂರ್ಣಪ್ರಮಾಣದ ಸರ್ಕಾರ ಇರಬೇಕಿತ್ತು. ಆದರೂ ಆಗಸ್ಟ್​ 15ರ ನಂತರ ಸಂಪುಟ ರಚನೆಯಾಗುತ್ತದೆ ಎಂದು ಅನರ್ಹ ಶಾಸಕ ಹೆಚ್.‌ವಿಶ್ವನಾಥ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇಂದು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಜ್ಯದ ಅರ್ಧಭಾಗದ ಜಿಲ್ಲೆಗಳು ಮುಳುಗಿವೆ. ಆದರೂ ಈಗ ಸಹಜ‌ ಸ್ಥಿತಿಗೆ ಬರುತ್ತಿದ್ದು, ಯಡಿಯೂರಪ್ಪ ಅವರು ಶಕ್ತಿ ಮೀರಿ ಪ್ರವಾಹದ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಪ್ರವಾಹ ಕೂಡ ಅರಿವಿಲ್ಲದೆ ಬಂದಿದ್ದು, ಹೊಸ ಸರ್ಕಾರವು ಅರಿವಿಲ್ಲದೆ ಬಂದುಬಿಟ್ಟಿದೆ. ಅದಕ್ಕಾಗಿ ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಆಗಬೇಕು, ಸ್ವಾತ್ರಂತ್ಯ ದಿನಾಚರಣೆಯ ನಂತರ ಸಂಪುಟ ರಚನೆ ಮಾಡಲಿದ್ದಾರೆ. ಇನ್ನೆರಡು ಮೂರು ದಿನ ಕಾಯಬೇಕು ಅಷ್ಟೇ ಎಂದರು.

ಸ್ವಾತ್ರಂತ್ಯ ದಿನಾಚರಣೆಯ ನಂತರ ಸಂಪುಟ ರಚನೆಯಾಗಲಿದೆ

ವಿಶ್ವನಾಥ್ ಅವರ ಮುಂದಿನ ರಾಜಕೀಯ ನಡೆ ಏನು?

ಹಿಂದೆಯೂ, ಮುಂದೆಯೂ ನನ್ನ ರಾಜಕೀಯ ನಡೆಯುತ್ತಲೇ ಇರುತ್ತದೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ರಾಜಕೀಯ ಗುರಿ. ಸಂಪುಟದಲ್ಲಿ ನಮಗೆ ಸ್ಥಾನ ನೀಡುವ ಕುರಿತು ಇರುವ ಸುದ್ದಿಗಳೆಲ್ಲಾ ಊಹಾಪೋಹಗಳು ಮತ್ತು ಉತ್ಪ್ರೇಕ್ಷೆಯ ಮಾತುಗಳಷ್ಟೇ. ಮುಂದೆ ಏನಾಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ ಎಂದು ಹಿರಿಯ ರಾಜಕಾರಣಿ ಹೆಚ್​ ವಿಶ್ವನಾಥ್​ ಹೇಳಿದ್ರು.

ಇನ್ನು ಯಡಿಯೂರಪ್ಪ ಅವರು ತಮಗಿರುವ ಸಮಾಧಾನ ಮತ್ತು ಸಹಭಾಗಿತ್ವವನ್ನು ಸರ್ವರ ಜೊತೆ ಕಾಪಾಡಿಕೊಳ್ಳಬೇಕು ಹಾಗೂ ಎಲ್ಲೂ ಉದ್ವೇಗಕ್ಕೆ ಒಳಗಾಗದೆ ಎಲ್ಲವನ್ನೂ ನಿಭಾಯಿಸುವಂತೆ ಆಗಬೇಕು ಎಂದು ಸಿಎಂಗೆ ವಿಶ್ವನಾಥ್​ ಸಲಹೆ ನೀಡಿದರು. ಅಲ್ಲದೆ, ಯಡಿಯೂರಪ್ಪ ಅವರು ಉಳಿದ ಮೂರುವರೆ ವರ್ಷಗಳ ಕಾಲ ಉತ್ತಮ ಆಡಳಿತ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು: ಪ್ರವಾಹದ ಸಂದರ್ಭದಲ್ಲಿ ರಾಜ್ಯದಲ್ಲಿ ಪೂರ್ಣಪ್ರಮಾಣದ ಸರ್ಕಾರ ಇರಬೇಕಿತ್ತು. ಆದರೂ ಆಗಸ್ಟ್​ 15ರ ನಂತರ ಸಂಪುಟ ರಚನೆಯಾಗುತ್ತದೆ ಎಂದು ಅನರ್ಹ ಶಾಸಕ ಹೆಚ್.‌ವಿಶ್ವನಾಥ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇಂದು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಜ್ಯದ ಅರ್ಧಭಾಗದ ಜಿಲ್ಲೆಗಳು ಮುಳುಗಿವೆ. ಆದರೂ ಈಗ ಸಹಜ‌ ಸ್ಥಿತಿಗೆ ಬರುತ್ತಿದ್ದು, ಯಡಿಯೂರಪ್ಪ ಅವರು ಶಕ್ತಿ ಮೀರಿ ಪ್ರವಾಹದ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಪ್ರವಾಹ ಕೂಡ ಅರಿವಿಲ್ಲದೆ ಬಂದಿದ್ದು, ಹೊಸ ಸರ್ಕಾರವು ಅರಿವಿಲ್ಲದೆ ಬಂದುಬಿಟ್ಟಿದೆ. ಅದಕ್ಕಾಗಿ ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಆಗಬೇಕು, ಸ್ವಾತ್ರಂತ್ಯ ದಿನಾಚರಣೆಯ ನಂತರ ಸಂಪುಟ ರಚನೆ ಮಾಡಲಿದ್ದಾರೆ. ಇನ್ನೆರಡು ಮೂರು ದಿನ ಕಾಯಬೇಕು ಅಷ್ಟೇ ಎಂದರು.

ಸ್ವಾತ್ರಂತ್ಯ ದಿನಾಚರಣೆಯ ನಂತರ ಸಂಪುಟ ರಚನೆಯಾಗಲಿದೆ

ವಿಶ್ವನಾಥ್ ಅವರ ಮುಂದಿನ ರಾಜಕೀಯ ನಡೆ ಏನು?

ಹಿಂದೆಯೂ, ಮುಂದೆಯೂ ನನ್ನ ರಾಜಕೀಯ ನಡೆಯುತ್ತಲೇ ಇರುತ್ತದೆ. ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ರಾಜಕೀಯ ಗುರಿ. ಸಂಪುಟದಲ್ಲಿ ನಮಗೆ ಸ್ಥಾನ ನೀಡುವ ಕುರಿತು ಇರುವ ಸುದ್ದಿಗಳೆಲ್ಲಾ ಊಹಾಪೋಹಗಳು ಮತ್ತು ಉತ್ಪ್ರೇಕ್ಷೆಯ ಮಾತುಗಳಷ್ಟೇ. ಮುಂದೆ ಏನಾಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ ಎಂದು ಹಿರಿಯ ರಾಜಕಾರಣಿ ಹೆಚ್​ ವಿಶ್ವನಾಥ್​ ಹೇಳಿದ್ರು.

ಇನ್ನು ಯಡಿಯೂರಪ್ಪ ಅವರು ತಮಗಿರುವ ಸಮಾಧಾನ ಮತ್ತು ಸಹಭಾಗಿತ್ವವನ್ನು ಸರ್ವರ ಜೊತೆ ಕಾಪಾಡಿಕೊಳ್ಳಬೇಕು ಹಾಗೂ ಎಲ್ಲೂ ಉದ್ವೇಗಕ್ಕೆ ಒಳಗಾಗದೆ ಎಲ್ಲವನ್ನೂ ನಿಭಾಯಿಸುವಂತೆ ಆಗಬೇಕು ಎಂದು ಸಿಎಂಗೆ ವಿಶ್ವನಾಥ್​ ಸಲಹೆ ನೀಡಿದರು. ಅಲ್ಲದೆ, ಯಡಿಯೂರಪ್ಪ ಅವರು ಉಳಿದ ಮೂರುವರೆ ವರ್ಷಗಳ ಕಾಲ ಉತ್ತಮ ಆಡಳಿತ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಮೈಸೂರು: ಇಂತಹ ಪ್ರವಾಹದ ಸಂದರ್ಭದಲ್ಲಿ ಪೂರ್ಣಪ್ರಮಾಣದ ಸರ್ಕಾರ ಇರಬೇಕಿತ್ತು, ಆದರೂ ೧೬ರ ನಂತರ ಸಂಪುಟ ರಚನೆಯಾಗುತ್ತದೆ ಎಂದು ಅನರ್ಹ ಶಾಕ ಹೆಚ್.‌ವಿಶ್ವನಾಥ್ ಈ ಟಿವಿ ಭಾರತ್ ಗೇ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


Body:ಇಂದು ಅನರ್ಹಗೊಂಡ ಶಾಸಕ‌ ಹೆಚ್.ವಿಶ್ವನಾಥ್ ಈ ಟಿವಿ ಭಾರತ್ ಜೊತೆ ಮಾತನಾಡಿ ‌ರಾಜ್ಯದ ಅರ್ಧಭಾಗದ ಜಿಲ್ಲೆಗಳು ಮುಳುಗಿ ಹೋಗಿವೆ. ಬಹಳ ಸಂತೋಷ ಎಂದೃ ಬರಗಾಲ ಇದ್ದ ಸಂದರ್ಭದಲ್ಲಿ ಈ ರೀತಿ ಪ್ರವಾಹ ಬಂದಿರುವುದು ಸ್ವಲ್ಪ ಅನಾನುಕೂಲವಿದೆ, ಆದರೂ ಈಗ ಸಹಜ‌ ಸ್ಥಿತಿಗೆ ಬರುತ್ತಿದ್ದು ಯಡಿಯೂರಪ್ಪ ಅವರು ಶಕ್ತಿ ಮೀರಿ ಪ್ರವಾಹದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ ಹೆಚ್.ವಿಶ್ವನಾಥ್ ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಇರಬೇಕಿತ್ತು ಪ್ರವಾಹ ಕೂಡ ಅರಿವಿಲ್ಲದೆ ಬಂದಿದ್ದು, ಹೊಸ ಸರ್ಕಾರವು ಅರಿವಿಲ್ಲದೆ ಬಂದುಬಿಟ್ಟಿದೆ ಅದಕ್ಕಾಗಿ ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಸಂಪುಟ ಆಗಬೇಕು, ನಿಮಗೆ ಗೊತ್ತಿದೆ ಅಲ್ವಾ ರಾಜಕಾರಣದಲ್ಲಿ ಬಹಳ ತಾಳ್ಮೆ ಇಂದ ಹೋಗಬೇಕು ೧೬ರ ನಂತರ ಸಂಪುಟ ರಚನೆಯಾಗುತ್ತದೆ ಇನ್ನೇರಡು ೩ ದಿನ ಕಾಯಬೇಕು ಅಷ್ಟೇ ಎಂದರು.
ಮುಂದಿನ ನನ್ನ ರಾಜಕೀಯ ನಡೆಯುತ್ತಲೇ ಇರುತ್ತದೆ ಹಿಂದೆ ಹೇಗೆ ನಡೆಯುತ್ತಿದೆಯೋ ಮುಂದೆಯೂ ಸಹ ಅದೇ ರೀತಿ ನಡೆಯುತ್ತದೆ ಎಂದ ಅವರು ತಾವು ಸಚಿವ ಸಂಪುಟ ಸೇರ್ಪಡೆ ಆಗುತ್ತೀರಾ ಎಂಬ ಪ್ರಶ್ನೆಗೆ ಅದೆಲ್ಲಾ ಸುಮ್ಮನೆ, ಊಹಾಪೋಹಗಳು, ಉತ್ಪ್ರೇಕ್ಷೆಯ ಮಾತುಗಳು ಅಷ್ಟೇ ಹಾಗಾಗಿ ನೋಡೋಣ ಏನೇನೇನು ಆಗುತ್ತದೆ ಎಂದರು.
ಇನ್ನೂ ಯಡಿಯೂರಪ್ಪ ಅವರು ಸಮಾಧನಾನ ಸಹಭಾಗಿತ್ವ ಸರ್ವರ ಜೊತೆ ಎಲ್ಲರನ್ನೂ ಕರೆದುಕೊಂಡು ಹೋಗಬೇಕು ಎಲ್ಲೂ ಉದ್ವೇಗ ಎದುರಾಗದ ರೀತಿಯಲ್ಲಿ ಎಲ್ಲವನ್ನೂ ನಿಭಾಯಿಸುವಂತೆ ಆಗಬೇಕು ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ ವಿಶ್ವನಾಥ್ ಬಿಜೆಪಿ ಸರ್ಕಾರ ಉಳಿದ ಮೂರು ವರೆ ವರ್ಷ ಯಡಿಯೂರಪ್ಪ ಉತ್ತಮ ಆಡಳಿತ ನಡೆಸುತ್ತಾರೆ ಎಂದುಕೊಂಡಿದ್ದೇನೆ ಎಂದು ಹೆಚ್. ವಿಶ್ವನಾಥ್ ಹೇಳಿಕೆ‌ನೀಡಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.