ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹುರ ಹಾಗೂ ಮಡಕೆ ಹುಂಡಿ ಗ್ರಾಮದಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆಯಾಗಿವೆ.
ಹುರ ಹಾಗೂ ಮಡಿಕೆಹುಂಡಿ ಗ್ರಾಮದ ಜಮೀನುಗಳಲ್ಲಿ ಚಿಕ್ಕಣ್ಣ ಹಾಗೂ ಸ್ನೇಹಿತರು ಈ ವಿರೂಪಗೊಂಡ ಬುದ್ಧನ ಪ್ರತಿಮೆಗಳನ್ನು ಪತ್ತೆ ಮಾಡಿದ್ದಾರೆ.

ಇನ್ನು ಕ್ರಿ.ಪೂ.ದಲ್ಲಿ ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಚಾರಕರು ಈ ಪ್ರತಿಮೆಗಳನ್ನು ಮಾಡಿರಬಹುದೆಂದು ಅಂದಾಜಿಸಲಾಗಿದೆ. ಸದ್ಯ ಸಿಕ್ಕಿರುವ ಬುದ್ಧನ ವಿರೂಪಗೊಂಡ ಮೂರ್ತಿಗಳನ್ನು ಪಾರಂಪರಿಕ ಇಲಾಖೆ ಸಂರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.