ETV Bharat / state

ಹೊಸ ಜನಾದೇಶ ಪಡೆಯುವುದು ಸೂಕ್ತ: ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ - undefined

ಇಂದಿನ ಸ್ಥಿತಿಯನ್ನು ನೋಡಿದ್ರೆ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯುವುದೇ ಸೂಕ್ತ ಎನಿಸುತ್ತದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ
author img

By

Published : Jul 9, 2019, 2:37 PM IST

ಮೈಸೂರು: ರಾಜೀನಾಮೆಯಲ್ಲಿ ಯಾರ ಒತ್ತಡವಿಲ್ಲದೆ ರಾಜೀನಾಮೆ ಕೊಟ್ಟಿದ್ದಾರೆಯೇ, ಸಹಿ ಶಾಸಕರದ್ದೇ ಅನ್ನೋದು ಮನವರಿಕೆಯಾದರೆ ಸ್ಪೀಕರ್​​ ರಾಜೀನಾಮೆ ಅಂಗೀಕಾರ ಮಾಡಬಹುದು ಎಂದು ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಅವರು ತಿಳಿಸಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ಸ್ಪೀಕರ್ ಇಲ್ಲದ ಕಾರಣ ಎಂಎಲ್ಎಗಳು ತಮ್ಮ ರಾಜೀನಾಮೆಯನ್ನು ಕಾರ್ಯದರ್ಶಿ ಅವರ ಕೈಯಲ್ಲಿ ಕೊಟ್ಟಿದ್ದಾರೆ. ಇದನ್ನು ಇಂದು ಸ್ಪೀಕರ್ ರಮೇಶ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ. ‌ರಾಜೀನಾಮೆಯ ಬಗ್ಗೆ ಅನುಮಾನವಿದ್ದರೆ ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ತಿಳಿಸಬಹುದು. ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯ ಅನ್ವಯ ಕ್ರಮ ಜರುಗಿಸಲು ಸಾಧ್ಯವಿಲ್ಲ, ಅವರೇನಾದರು ಬೇರೆ ಪಕ್ಷ ಸೇರಿದಾಗ ಅಥವಾ ಬೇರೆ ಪಕ್ಷದ ಕೈವಾಡದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಾಕ್ಷಿ ಇದ್ದಾಗ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬಹುದು ಮಾಜಿ ಸ್ಪೀಕರ್​ ಕೃಷ್ಣ ಹೇಳಿದ್ದಾರೆ.

ಹೊಸ ಜನಾದೇಶ ಪಡೆಯುವುದು ಸೂಕ್ತ: ಮಾಜಿ ಸ್ಪೀಕರ್​

ವೈಯಕ್ತಿಕವಾಗಿ ಹೇಳಬೇಕೆಂದರೆ ಇಂದಿನ ರಾಜಕೀಯ ಸ್ಥಿತಿ ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ. ಮೈತ್ರಿ ಪಕ್ಷಗಳು ಬುದ್ಧಿವಂತಿಕೆಯಿಂದ ಆಡಳಿತ ನಡೆಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಒಂದು ಕಾಲದಲ್ಲಿ ದೇವೇಗೌಡರ ಶಿಷ್ಯರಾಗಿದ್ದ ಸಿದ್ದರಾಮಯ್ಯ ಈ ರಾಜೀನಾಮೆಯ ಪಾತ್ರದ ಹಿಂದೆ ಇದ್ದಾರೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಏನೇ ಆದರು ಇಂದಿನ ಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಹೊಸ ಜನಾದೇಶ ಪಡೆಯುವುದು ಸೂಕ್ತ ಎನಿಸುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು: ರಾಜೀನಾಮೆಯಲ್ಲಿ ಯಾರ ಒತ್ತಡವಿಲ್ಲದೆ ರಾಜೀನಾಮೆ ಕೊಟ್ಟಿದ್ದಾರೆಯೇ, ಸಹಿ ಶಾಸಕರದ್ದೇ ಅನ್ನೋದು ಮನವರಿಕೆಯಾದರೆ ಸ್ಪೀಕರ್​​ ರಾಜೀನಾಮೆ ಅಂಗೀಕಾರ ಮಾಡಬಹುದು ಎಂದು ಮಾಜಿ ಸ್ಪೀಕರ್ ಕೆ.ಆರ್. ಪೇಟೆ ಕೃಷ್ಣ ಅವರು ತಿಳಿಸಿದ್ದಾರೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ಸ್ಪೀಕರ್ ಇಲ್ಲದ ಕಾರಣ ಎಂಎಲ್ಎಗಳು ತಮ್ಮ ರಾಜೀನಾಮೆಯನ್ನು ಕಾರ್ಯದರ್ಶಿ ಅವರ ಕೈಯಲ್ಲಿ ಕೊಟ್ಟಿದ್ದಾರೆ. ಇದನ್ನು ಇಂದು ಸ್ಪೀಕರ್ ರಮೇಶ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ. ‌ರಾಜೀನಾಮೆಯ ಬಗ್ಗೆ ಅನುಮಾನವಿದ್ದರೆ ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ತಿಳಿಸಬಹುದು. ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯ ಅನ್ವಯ ಕ್ರಮ ಜರುಗಿಸಲು ಸಾಧ್ಯವಿಲ್ಲ, ಅವರೇನಾದರು ಬೇರೆ ಪಕ್ಷ ಸೇರಿದಾಗ ಅಥವಾ ಬೇರೆ ಪಕ್ಷದ ಕೈವಾಡದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಾಕ್ಷಿ ಇದ್ದಾಗ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬಹುದು ಮಾಜಿ ಸ್ಪೀಕರ್​ ಕೃಷ್ಣ ಹೇಳಿದ್ದಾರೆ.

ಹೊಸ ಜನಾದೇಶ ಪಡೆಯುವುದು ಸೂಕ್ತ: ಮಾಜಿ ಸ್ಪೀಕರ್​

ವೈಯಕ್ತಿಕವಾಗಿ ಹೇಳಬೇಕೆಂದರೆ ಇಂದಿನ ರಾಜಕೀಯ ಸ್ಥಿತಿ ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ. ಮೈತ್ರಿ ಪಕ್ಷಗಳು ಬುದ್ಧಿವಂತಿಕೆಯಿಂದ ಆಡಳಿತ ನಡೆಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಒಂದು ಕಾಲದಲ್ಲಿ ದೇವೇಗೌಡರ ಶಿಷ್ಯರಾಗಿದ್ದ ಸಿದ್ದರಾಮಯ್ಯ ಈ ರಾಜೀನಾಮೆಯ ಪಾತ್ರದ ಹಿಂದೆ ಇದ್ದಾರೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಏನೇ ಆದರು ಇಂದಿನ ಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಹೊಸ ಜನಾದೇಶ ಪಡೆಯುವುದು ಸೂಕ್ತ ಎನಿಸುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.

Intro:ಮೈಸೂರು: ಇಂದಿನ ಸ್ಥಿತಿಯನ್ನು ನೋಡಿದರೆ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯುವುದೇ ಸೂಕ್ತ ಎನಿಸುತ್ತದೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Body:ಇಂದು ತಮ್ಮ ಮೈಸೂರು ಮನೆಯಲ್ಲಿ ಈ ಟಿವಿ ಭಾರತ್ ಜೊತೆ ಮಾತನಾಡಿ, ಇವತ್ತಿನ ಸ್ಥಿತಿಯಲ್ಲಿ ಸ್ಪೀಕರ್ ಇಲ್ಲದ ಕಾರಣದಲ್ಲಿ ಎಂಎಲ್ಎಗಳು ತಮ್ಮ ರಾಜೀನಾಮೆಯನ್ನು ಕಾರ್ಯದರ್ಶಿ ಅವರ ಕೈಯಲ್ಲಿ ಕೊಟ್ಟಿದ್ದಾರೆ ಇದನ್ನು ಇಂಉ ಸ್ಪೀಕರ್ ರಮೇಶ್ ಕುಮಾರ್ ಪರಿಶೀಲನೆ ಮಾಡುತ್ತಾರೆ. ‌ಅವರು ರಾಜೀನಾಮೆಯಲ್ಲಿ ಯಾರ ಒತ್ತಡವಿಲ್ಲದೆ ರಾಜೀನಾಮೆ ಕೊಟ್ಟಿದ್ದಾರೆಯೇ ಸಹಿ ಶಾಸಕರದ್ದೇ ಎಂದು ಮನವರಿಗೆಯಾದರೆ ರಾಜೀನಾಮೆ ಅಂಗೀಕಾರ ಮಾಡಬಹುದು.
ಅಥವಾ ರಾಜೀನಾಮೆಯ ಬಗ್ಗೆ ಅನುಮಾನವಿದ್ದರೆ ನೋಟಿಸ್ ನೀಡಿ ಖುದ್ದು ಹಾಜರಾಗುವಂತೆ ತಿಳಿಸಬಹುದು ಇದಕ್ಕೆ ಇಷ್ಟೇ ಸಮಯ ಎಂಬುದು ಇಲ್ಲ ಎಂದು ಏನು ಮಾಡುತ್ತಾರೆ ಎಂಬುವ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸ್ಪೀಕರ್ ಕೃಷ್ಣ ಈ ರಾಜೀನಾಮೆ ನೀಡಿದ ಶಾಸಕರ ಪಕ್ಷಾಂತರ ಕಾಯ್ದೆಯ ಅನ್ವಯ ಕ್ರಮ ಜರುಗಿಸಲು ಸಾಧ್ಯವಿಲ್ಲ ಅವರೇನಾದರು ಬೇರೆ ಪಕ್ಷ ಸೇರಿದಾಗ ಅಥವಾ ಇವರು ಬೇರೆ ಪಕ್ಷದ ಕೈವಾಡದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಾಕ್ಷಿ ಇದ್ದಾಗ ಮಾತ್ರ ಇವರಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಬಹುದು.

ನನ್ನ ವಯಕ್ತಿಕವಾಗಿ ಹೇಳಬೇಕೆಂದರೆ ಇಂದಿನ ರಾಜಕೀಯ ಸ್ಥಿತಿ ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ ಮೈತ್ರಿ ಪಕ್ಷಗಳು ಬುದ್ಧಿವಂತಿಕೆಯಿಂದ ಆಡಳಿತ ನಡೆಸಿದರೆ ಈ ಸ್ಥಿತಿ ಬರುತ್ತಿರಲಿಲ್ಲ.
ಒಂದು ಕಾಲದಲ್ಲಿ ದೇವೇಗೌಡರ ಶಿಷ್ಯರಾಗಿದ್ದ ಸಿದ್ದರಾಮಯ್ಯ ಈ ರಾಜೀನಾಮೆಯ ಪಾತ್ರದ ಹಿಂದೆ ಇದ್ದಾರೆ ಎಂದು ಅನುಮಾನ ವ್ಯಕ್ತವಾಗುತ್ತಿದ್ದು ಏನೇ ಆದರು ಇಂದಿನ ಸ್ಥಿತಿಯಲ್ಲಿ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಹೊಸ ಜನಾದೇಶ ಪಡೆಯುವುದು ಸೂಕ್ತ ಎನಿಸುತ್ತದೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ ಎಂದು ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಇದೇ ಸಂದರ್ಭದಲ್ಲಿ ತಿಳಿಸಿದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.