ETV Bharat / state

ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ!

author img

By

Published : May 7, 2022, 9:55 PM IST

Updated : May 9, 2022, 12:04 PM IST

ಮದುಮಗ ಯತೀಶ್​ನಿಗೆ ತನ್ನ ಮದುವೆ ಸುಸಂದರ್ಭದಲ್ಲಿ ತಂದೆ ಇರಬೇಕು ಎನ್ನುವ ಆಸೆ. ಆದ್ದರಿಂದ ತಮ್ಮ ತಂದೆಯ ಪ್ರತಿರೂಪದ ಮೇಣದ ಪ್ರತಿಮೆ ಮಾಡಿಸಿದ್ದಾರೆ. ಅದೇ ಪ್ರತಿಮೆಯನ್ನು ಮಂಟಪದಲ್ಲಿ ತಮ್ಮ ತಾಯಿಯ ಪಕ್ಕದಲ್ಲಿ ಕೂರಿಸಿ ಅವರ ಮುಂದೆ ಹಸೆಮಣೆ ಏರಿದ್ದಾರೆ.

Son married in front of his father statue
ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾದ ಮಗ

ಮೈಸೂರು: ಕೆಲ ಸಂಬಂಧಗಳೇ ಹಾಗೆ ಎಷ್ಟೆ ದೂರವಾದರೂ, ಸಾವನ್ನಪ್ಪಿದರೂ ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಬ್ಬ ಮದುಮಗ ಮೃತಪಟ್ಟ ತನ್ನ ತಂದೆಯ ಬಗ್ಗೆ ಅಪಾರವಾದ ಪ್ರೀತಿಯನ್ನು ಮೆರೆದಿದ್ದಾರೆ. ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಮದುಮಗ ಡಾ.ಯತೀಶ್ ತಮ್ಮ ತಂದೆಯ ಪ್ರತಿರೂಪದ ಪ್ರತಿಮೆಯ ಮುಂದೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಮೈಸೂರಿನ ಜೆಎಸ್ಎ​ಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿರುವ ಡಾ.ಯತೀಶ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಜ್ಜಂಪುರ ನಿವಾಸಿ. ಇವರ ತಂದೆ ರಮೇಶ್​​ ಕಳೆದ ವರ್ಷ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಈಗ ನಂಜನಗೂಡಿನ ಡಾ.ಅಪೂರ್ವ ಜೊತೆ ಯತೀಶ್​ ಮದುವೆಯಾಗುತ್ತಿದ್ದಾರೆ. ಶನಿವಾರ ಮದುವೆ ಆರತಕ್ಷತೆ ನಡೆದಿದ್ದು, ರವಿವಾರ ವಿವಾಹ ಸಮಾರಂಭ ಇದೆ.

ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾದ ಮಗ

ಮದುಮಗ ಯತೀಶ್​ನಿಗೆ ಇಂತಹ ಸುಸಂದರ್ಭದಲ್ಲಿ ತಮ್ಮ ತಂದೆ ಇರಬೇಕೆನ್ನುವ ಆಸೆ. ಆದ್ದರಿಂದ ತಮ್ಮ ತಂದೆಯ ಪ್ರತಿರೂಪದ ಮೇಣದ ಪ್ರತಿಮೆ ಮಾಡಿಸಿದ್ದಾರೆ. ಅದೇ ಪ್ರತಿಮೆಯನ್ನು ಮಂಟಪದಲ್ಲಿ ತಮ್ಮ ತಾಯಿಯ ಪಕ್ಕದಲ್ಲಿ ಕೂರಿಸಿದ್ದಾರೆ. ಈ ಅಪರೂಪದ ದೃಶ್ಯವನ್ನ ಕಂಡ ಬಂಧು-ಬಾಂಧವರು ಕೂಡ ಅಚ್ಚರಿಗೊಂಡಿದ್ಧಾರೆ. ಆತ ತನ್ನ ತಂದೆಯ ಮೇಲೆ ಇರಿಸಿರುವ ಪ್ರೀತಿಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ
ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ

ಇದನ್ನೂ ಓದಿ: ಟೆಟ್ರಾ ಪ್ಯಾಕ್​ಗಳಿಂದ ಗೃಹೋಪಯೋಗಿ ವಸ್ತು: ಶಿರಸಿ ನಗರಸಭೆಯಿಂದ ಮಾದರಿ ಕಾರ್ಯ

ಮೈಸೂರು: ಕೆಲ ಸಂಬಂಧಗಳೇ ಹಾಗೆ ಎಷ್ಟೆ ದೂರವಾದರೂ, ಸಾವನ್ನಪ್ಪಿದರೂ ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಬ್ಬ ಮದುಮಗ ಮೃತಪಟ್ಟ ತನ್ನ ತಂದೆಯ ಬಗ್ಗೆ ಅಪಾರವಾದ ಪ್ರೀತಿಯನ್ನು ಮೆರೆದಿದ್ದಾರೆ. ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಮದುಮಗ ಡಾ.ಯತೀಶ್ ತಮ್ಮ ತಂದೆಯ ಪ್ರತಿರೂಪದ ಪ್ರತಿಮೆಯ ಮುಂದೆ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಮೈಸೂರಿನ ಜೆಎಸ್ಎ​ಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿರುವ ಡಾ.ಯತೀಶ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಜ್ಜಂಪುರ ನಿವಾಸಿ. ಇವರ ತಂದೆ ರಮೇಶ್​​ ಕಳೆದ ವರ್ಷ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಈಗ ನಂಜನಗೂಡಿನ ಡಾ.ಅಪೂರ್ವ ಜೊತೆ ಯತೀಶ್​ ಮದುವೆಯಾಗುತ್ತಿದ್ದಾರೆ. ಶನಿವಾರ ಮದುವೆ ಆರತಕ್ಷತೆ ನಡೆದಿದ್ದು, ರವಿವಾರ ವಿವಾಹ ಸಮಾರಂಭ ಇದೆ.

ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾದ ಮಗ

ಮದುಮಗ ಯತೀಶ್​ನಿಗೆ ಇಂತಹ ಸುಸಂದರ್ಭದಲ್ಲಿ ತಮ್ಮ ತಂದೆ ಇರಬೇಕೆನ್ನುವ ಆಸೆ. ಆದ್ದರಿಂದ ತಮ್ಮ ತಂದೆಯ ಪ್ರತಿರೂಪದ ಮೇಣದ ಪ್ರತಿಮೆ ಮಾಡಿಸಿದ್ದಾರೆ. ಅದೇ ಪ್ರತಿಮೆಯನ್ನು ಮಂಟಪದಲ್ಲಿ ತಮ್ಮ ತಾಯಿಯ ಪಕ್ಕದಲ್ಲಿ ಕೂರಿಸಿದ್ದಾರೆ. ಈ ಅಪರೂಪದ ದೃಶ್ಯವನ್ನ ಕಂಡ ಬಂಧು-ಬಾಂಧವರು ಕೂಡ ಅಚ್ಚರಿಗೊಂಡಿದ್ಧಾರೆ. ಆತ ತನ್ನ ತಂದೆಯ ಮೇಲೆ ಇರಿಸಿರುವ ಪ್ರೀತಿಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ
ಮಂಟಪದಲ್ಲಿ ತಾಯಿಯ ಪಕ್ಕ ತಂದೆಯ ಮೇಣದ ಪ್ರತಿಮೆ ಕೂರಿಸಿ ಮದುವೆಯಾದ ಮಗ

ಇದನ್ನೂ ಓದಿ: ಟೆಟ್ರಾ ಪ್ಯಾಕ್​ಗಳಿಂದ ಗೃಹೋಪಯೋಗಿ ವಸ್ತು: ಶಿರಸಿ ನಗರಸಭೆಯಿಂದ ಮಾದರಿ ಕಾರ್ಯ

Last Updated : May 9, 2022, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.