ETV Bharat / state

ಮೈಸೂರು ದಸರಾಗೆ ವಿದೇಶಿ ಪ್ರವಾಸಿಗರನ್ನ ಆಕರ್ಷಿಸಲು ಮೊದಲೇ ಪ್ಲಾನ್‌ ಮಾಡಬೇಕು.. ಸಚಿವ ಸಿ ಟಿ ರವಿ

ಒಂದು ದೇಶ ಒಂದು ತೆರಿಗೆಯಂತೆ ದೇಶದಲ್ಲಿ ಎಲ್ಲಾ ವಾಹನಗಳಿಗೂ ಒಂದೇ ಪರವಾನಗಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.

author img

By

Published : Sep 28, 2019, 12:24 PM IST

ಸಿ.ಟಿ.ರವಿ

ಮೈಸೂರು: ಒಂದು ದೇಶ ಒಂದು ತೆರಿಗೆ ಹಾಗೆ ದೇಶದಲ್ಲಿ ಎಲ್ಲಾ ವಾಹನಗಳಿಗೂ ಒಂದೇ ಪರವಾನಗಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಸಚಿವ ಸಿ ಟಿ ರವಿ..

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೂ ಮುನ್ನಾ ಮಾಧ್ಯಮಗಳ ಜೊತೆ ಮಾತನಾಡಿದ ಸಿ ಟಿ ರವಿ, ದಸರಾಗೆ 1 ತಿಂಗಳು ಬಾಕಿ ಇರುವಾಗ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಕನಿಷ್ಟ 6 ತಿಂಗಳ ಮುಂಚೆಯೇ ಪ್ಲ್ಯಾನ್ ಮಾಡಿದರೆ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಬಹುದು. ವಿದೇಶಿಗರು 4 ತಿಂಗಳ ಮುಂಚೆ ವೀಸಾ ಮಾಡಿಸಿಕೊಳ್ಳಬೇಕು. ಪಕ್ಕದ ರಾಜ್ಯದವರನ್ನು ಆಕರ್ಷಿಸಲು 2 ತಿಂಗಳ ಮುಂಚೆ ಪ್ರಚಾರ ಆರಂಭಿಸಬೇಕು. ಆದರೆ, ಅದು ಸಾಧ್ಯವಿಲ್ಲ. ಆದ್ದರಿಂದ ದಸರಾ ಕೇವಲ ಮೈಸೂರು ಸುತ್ತಮುತ್ತ ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದರು.

ಸ್ಟಾರ್ ಹೋಟೆಲ್ ಟ್ಯಾಕ್ಸ್ ಶೇ.28, ಬಜೆಟ್ ಹೋಟೆಲ್ ಟ್ಯಾಕ್ಸ್ ಶೇ.18ರಷ್ಟಿದೆ. ಇದನ್ನು ಕಡಿಮೆ ಮಾಡಬೇಕೆಂದು. ರೆಸ್ಯುಲೇಷನ್ ಪಾಸ್ ಮಾಡಿದ್ದು, ಇದಕ್ಕೆ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಅಂತಾರಾಜ್ಯ ಹೆದ್ದಾರಿ ಟ್ಯಾಕ್ಸ್ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದೇವೆ. ನೀತಿ ಆಯೋಗದ ಜೊತೆ ಚರ್ಚಿಸಿ ಜಿ‌ಎಸ್​ಟಿ ರೀತಿ ಎಲ್ಲಾ ರಾಜ್ಯದಲ್ಲೂ ಒಂದೇ ರೀತಿ ಹೆದ್ದಾರಿ ತೆರಿಗೆ ವಿಧಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ದಸರಾ ಉದ್ದೇಶದಿಂದ ಮಂಡ್ಯ, ಮಡಿಕೇರಿ, ಮೈಸೂರು ಹಾಗೂ ಬೇರೆ ರಾಜ್ಯಗಳಿಗೆ ಹೋಗಲು ವಾಹನ ಶುಲ್ಕದಲ್ಲಿ ರಿಯಾಯಿತಿ ಕೊಟ್ಟಿದ್ದೇವೆ. ನಮ್ಮ ರಾಜ್ಯದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದು ರೀತಿಯ ಶುಲ್ಕ ವಿಧಿಸುವ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಮೈಸೂರು: ಒಂದು ದೇಶ ಒಂದು ತೆರಿಗೆ ಹಾಗೆ ದೇಶದಲ್ಲಿ ಎಲ್ಲಾ ವಾಹನಗಳಿಗೂ ಒಂದೇ ಪರವಾನಗಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಸಚಿವ ಸಿ ಟಿ ರವಿ..

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೂ ಮುನ್ನಾ ಮಾಧ್ಯಮಗಳ ಜೊತೆ ಮಾತನಾಡಿದ ಸಿ ಟಿ ರವಿ, ದಸರಾಗೆ 1 ತಿಂಗಳು ಬಾಕಿ ಇರುವಾಗ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಕನಿಷ್ಟ 6 ತಿಂಗಳ ಮುಂಚೆಯೇ ಪ್ಲ್ಯಾನ್ ಮಾಡಿದರೆ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಬಹುದು. ವಿದೇಶಿಗರು 4 ತಿಂಗಳ ಮುಂಚೆ ವೀಸಾ ಮಾಡಿಸಿಕೊಳ್ಳಬೇಕು. ಪಕ್ಕದ ರಾಜ್ಯದವರನ್ನು ಆಕರ್ಷಿಸಲು 2 ತಿಂಗಳ ಮುಂಚೆ ಪ್ರಚಾರ ಆರಂಭಿಸಬೇಕು. ಆದರೆ, ಅದು ಸಾಧ್ಯವಿಲ್ಲ. ಆದ್ದರಿಂದ ದಸರಾ ಕೇವಲ ಮೈಸೂರು ಸುತ್ತಮುತ್ತ ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದರು.

ಸ್ಟಾರ್ ಹೋಟೆಲ್ ಟ್ಯಾಕ್ಸ್ ಶೇ.28, ಬಜೆಟ್ ಹೋಟೆಲ್ ಟ್ಯಾಕ್ಸ್ ಶೇ.18ರಷ್ಟಿದೆ. ಇದನ್ನು ಕಡಿಮೆ ಮಾಡಬೇಕೆಂದು. ರೆಸ್ಯುಲೇಷನ್ ಪಾಸ್ ಮಾಡಿದ್ದು, ಇದಕ್ಕೆ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಅಂತಾರಾಜ್ಯ ಹೆದ್ದಾರಿ ಟ್ಯಾಕ್ಸ್ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದೇವೆ. ನೀತಿ ಆಯೋಗದ ಜೊತೆ ಚರ್ಚಿಸಿ ಜಿ‌ಎಸ್​ಟಿ ರೀತಿ ಎಲ್ಲಾ ರಾಜ್ಯದಲ್ಲೂ ಒಂದೇ ರೀತಿ ಹೆದ್ದಾರಿ ತೆರಿಗೆ ವಿಧಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ದಸರಾ ಉದ್ದೇಶದಿಂದ ಮಂಡ್ಯ, ಮಡಿಕೇರಿ, ಮೈಸೂರು ಹಾಗೂ ಬೇರೆ ರಾಜ್ಯಗಳಿಗೆ ಹೋಗಲು ವಾಹನ ಶುಲ್ಕದಲ್ಲಿ ರಿಯಾಯಿತಿ ಕೊಟ್ಟಿದ್ದೇವೆ. ನಮ್ಮ ರಾಜ್ಯದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದು ರೀತಿಯ ಶುಲ್ಕ ವಿಧಿಸುವ ಬಗ್ಗೆ ಯೋಚಿಸಬೇಕಾಗಿದೆ ಎಂದರು.

Intro:ಮೈಸೂರು: ಜಿ.ಎಸ್.ಟಿ.ರೀತಿಯಲ್ಲೇ ಎಲ್ಲಾ ವಾಹನಗಳಿಗೂ ದೇಶದಲ್ಲಿ ಪರವಾನಿಗೆ ನೀಡಬೇಕು ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಚಿವ ಸಿ.ಟಿ.ರವಿ ಮೈಸೂರಿನಲ್ಲಿ ಹೇಳಿಕೆ ನೀಡಿದರು.


Body:ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೂ ಮುನ್ನಾ ಮಾಧ್ಯಮಗಳ ಜೊತೆ ಮಾತನಾಡಿದ ಅವರು ದಸರಾಗೆ ೧ ತಿಂಗಳು ಇರುವಾಗ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ, ಕನಿಷ್ಠ ೬ ತಿಂಗಳ ಮುಂಚೆಯೇ ಪ್ಲಾನ್ ಮಾಡಿದರೆ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಬಹುದು.
ಏಕೆಂದರೆ ಅವರು ೪ ತಿಂಗಳ ಮುಂಚೆ ವಿಸಾ ಮಾಡಿಸಿಕೊಳ್ಳಬೇಕು, ಇನ್ನೂ ಪಕ್ಕದ ರಾಜ್ಯದವರನ್ನು ಆಕರ್ಷಿಸಲು ೨ ತಿಂಗಳ ಮುಂಚೆ ಪ್ರಚಾರ ಆರಂಭಿಸಬೇಕು ಆದರೆ ಅದು ಸಾಧ್ಯವಿಲ್ಲ ಆದ್ದರಿಂದ ದಸರಾ ಕೇವಲ ಮೈಸೂರು ಸುತ್ತಾಮುತ್ತ ಜಿಲ್ಲೆಗಳಿಗೆ ಸೀಮಿತಾ ಆಗಿದೆ ಅವರು.
ಸ್ಟಾರ್ ಹೋಟೆಲ್ ಟ್ಯಾಕ್ಸ್ ೨೮%, ಬಜೆಟ್ ಹೊಟೆಲ್ ಟ್ಯಾಕ್ಸ್ ೧೮% ಇದೆ. ಇದನ್ನು ಕಡಿಮೆ ಮಾಡಬೇಕೆಂದು ರೆಸ್ಯುಲೇಷನ್ ಪಾಸ್ ಮಾಡಿದ್ದು ಇದಕ್ಕೆ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿದ್ದು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿದೆ ಎಂದ ಸಚಿವರು.
ಇನ್ನೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅಂತರಾಜ್ಯ ಹೆದ್ದಾರಿ ಟ್ಯಾಕ್ಸ್ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದು ನೀತಿ ಆಯೋಗದ ಜೊತೆ ಚರ್ಚಿಸಿ ಜಿ‌.ಎಸ್.ಟಿ ಯಂತೆ ಎಲ್ಲಾ ರಾಜ್ಯದಲ್ಲೂ ೧ ದೇ ರೀತಿ ಹೆದ್ದಾರಿ ತೆರಿಗೆ ವಿಧಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದ ಸಚಿವ ಸಿ.ಟಿ.ರವಿ.
ದಸರಾ ಉದ್ದೇಶದಿಂದ ಮಂಡ್ಯ, ಮಡಿಕೇರಿ ಮತ್ತು ಮೈಸೂರು ಹಾಗೂ ಬೇರೆ ರಾಜ್ಯಗಳಿಗೆ ಹೋಗಲು ವಾಹನ ಶುಲ್ಕದಲ್ಲಿ ರಿಯಾಯಿತಿ ಕೊಟ್ಟಿದ್ದೇವೆ ಎಂದ ಅವರು ನಮ್ಮ ರಾಜ್ಯದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ೧ ರೀತಿಯ ಶುಲ್ಕ ವಿಧಿಸುವ ಬಗ್ಗೆ ಯೋಚಿಸಬೇಕಾಗಿದೆ ಎಂದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.