ETV Bharat / state

'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಮೈಸೂರು ವಿಭಾಗದ 15 ರೈಲು ನಿಲ್ದಾಣಗಳ ಅಭಿವೃದ್ಧಿ: ಡಿಆರ್​ಎಂ ಶಿಲ್ಪಿ ಅಗರ್ವಾಲ್

ಆಗಸ್ಟ್​ 6ರಂದು ರೈಲ್ವೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಲಿದ್ದಾರೆ.

author img

By

Published : Aug 4, 2023, 4:52 PM IST

DRM Shilpi Agarwal
ಡಿಆರ್​ಎಂ ಶಿಲ್ಪಿ ಅಗರ್ವಾಲ್
ಡಿಆರ್​ಎಂ ಶಿಲ್ಪಿ ಅಗರ್ವಾಲ್ ಹೇಳಿಕೆ

ಮೈಸೂರು: "ಕೇಂದ್ರ ಸರ್ಕಾರವು ಮೈಸೂರು ವಿಭಾಗದ 15 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 347 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರಿಂದ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಆಗಸ್ಟ್​ 6ರಂದು ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ" ಎಂದು ಮೈಸೂರು ರೈಲ್ವೆ ವಿಭಾಗದ ಡಿಆರ್​ಎಂ ಶಿಲ್ಪಿ ಅಗರ್ವಾಲ್ ತಿಳಿಸಿದರು.

ಇಂದು ನಗರದ ರೈಲ್ವೆ ವಿಭಾಗೀಯ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, "ಭಾರತೀಯ ರೈಲ್ವೆ ದೇಶಾದ್ಯಂತ ರೈಲು ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಅಮೃತ್‌ ಭಾರತ್ ಸ್ಟೇಷನ್ ಯೋಜನೆ ಪ್ರಾರಂಭಿಸಿದೆ. ಕರ್ನಾಟಕದಲ್ಲಿ ರೈಲು ಮೂಲಸೌಕರ್ಯ ನವೀಕರಿಸಿ ಮೇಲ್ದರ್ಜೆಗೇರಿಸಲು ಇಲಾಖೆ ಬದ್ಧವಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದಾಖಲೆಯ 7,561 ಕೋಟಿ ರೂಪಾಯಿ ಲಭಿಸಿದೆ" ಎಂದು ಮಾಹಿತಿ ನೀಡಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೆಲವು ಪ್ರಮುಖ 15 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳು ಹೀಗಿವೆ. ಚಾಮರಾಜನಗರ-CMNR, ಸಕಲೇಶಪುರ-SKLR, ಸುಬ್ರಹ್ಮಣ್ಯ ರೋಡ್-SBHR, ಬಂಟ್ವಾಳ BNTL, ಹಾಸನ-HAS, ತಿಪಟೂರು-TTR, ಅರಸಿಕೆರೆ ಜಂಕ್ಷನ್​-ASK, ಚಿಕ್ಕಮಗಳೂರು-CMGR, ತಾಳಗುಪ್ಪ-TLGP, ಸಾಗರ ಜಂಬಗಾರು-SRI, ಶಿವಮೊಗ್ಗ ಟೌನ್-SMET, ಚಿತ್ರದುರ್ಗ-CTA, ದಾವಣಗೆರೆ-DVG, ಹರಿಹರ-HRR, ರಾಣೆಬೆನ್ನೂರು-RNA.

"ಸುಮಾರು 347 ಕೋಟಿ ರೂಪಾಯಿ ಅನುದಾನದ ಯೋಜನೆಯಲ್ಲಿ ಪ್ರಮುಖವಾಗಿ ಸುಸ್ಥಿರತೆ, ನಿಲ್ದಾಣಕ್ಕೆ ಒತ್ತಡ ಮುಕ್ತ ಪ್ರವೇಶ ಮತ್ತು ನಿರ್ಗಮನ, ಆಧುನಿಕ ಪ್ರಯಾಣಿಕ ಸೌಕರ್ಯಗಳು, ಉಚಿತ ವೈ-ಫೈ ಸೌಲಭ್ಯ, ದಿವ್ಯಾಂಗ ವ್ಯಕ್ತಿಗಳಿಗೆ ವಿಶೇಷ ಒತ್ತು ನೀಡುವುದು. ನಿಲ್ದಾಣದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುವುದರ ಕಡೆಗೆ ಗಮನ ಕೊಡಲಾಗಿದೆ. ಯೋಜನೆಯ ಪ್ರಮುಖ ಅಂಶಗಳೆಂದರೆ ನಿಲ್ದಾಣದ ಸೌಕರ್ಯಗಳಾದ ಪ್ರವೇಶ ಭಾಗಗಳು, ಕಾಯುವ ಪ್ರದೇಶಗಳು, ಶೌಚಾಲಯಗಳು ಮತ್ತು ಅಗತ್ಯಗಳಿಗುಣವಾಗಿ ಲಿಫ್ಟ್​ಗಳು ಮತ್ತು ಎಸ್ಕಲೇಟರ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗುವುದು" ಎಂದರು‌.

ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ: ABSS ಅಡಿಯಲ್ಲಿ, ಅಸ್ತಿತ್ವದಲ್ಲಿರುವ ರೈಲು ನಿಲ್ದಾಣಗಳನ್ನು ಅವುಗಳ ಒಟ್ಟಾರೆ ಮೂಲಸೌಕರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಲು ಪುನರಾಭಿವೃದ್ಧಿಗೊಳಿಸಲಾಗುತ್ತದೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅನುಕೂಲಕ್ಕೆ ಪ್ಲಾಟ್‌ಫಾರ್ಮ್‌ಗಳು, ಕಾಯುವ ಪ್ರದೇಶಗಳು, ಟಿಕೆಟ್ ಕೌಂಟರ್​ಗಳು, ಶೌಚಾಲಯಗಳು ಮತ್ತು ಇತರ ಸೌಕರ್ಯಗಳ ನವೀಕರಣ.

ತಂತ್ರಜ್ಞಾನದ ಮೂಲಕ ಆಧುನೀಕರಣ: ಯೋಜನೆಯಡಿ ರೈಲು ನಿಲ್ದಾಣಗಳಲ್ಲಿ ಸುಧಾರಿತ ತಂತ್ರಜ್ಞಾನಗಳು, ಅಧುನಿಕ ಸಂವಹನ ವ್ಯವಸ್ಥೆಗಳು, ವೈ-ಫೈ ಸಂಪರ್ಕ, ಸ್ವಯಂಚಾಲಿತ ಟಿಕೆಟಿಂಗ್ ಮತ್ತು ವಿದ್ಯುದೀಕರಣ ಪ್ರದರ್ಶನ ಫಲಕಗಳ ಕಾರ್ಯಾಚರಣೆ ಸಮರ್ಥಗೊಳಿಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು.

ಸ್ಥಳೀಯ ಆರ್ಥಿಕತೆ, ಉದ್ಯೋಗಾವಕಾಶ ಹೆಚ್ಚಳ: ಸ್ಥಳೀಯ ಅರ್ಥಿಕತೆಯನ್ನು ಉತ್ತೇಜಿಸಲು, ನಿಲ್ದಾಣದ ಆವರಣದಲ್ಲಿ ಸ್ಥಳೀಯ ವಾಣಿಜ್ಯ ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಲಾಗುವುದು. ಮಾರಾಟ ಮಳಿಗೆಗಳ ಸಂಕೀರ್ಣಗಳು, ಹೋಟೆಲ್​ ಮತ್ತು ಇತರ ವಾಣಿಜ್ಯ ಸ್ಥಳಗಳ ಸ್ಥಾಪಿಸಿ, ಪ್ರಯಾಣಿಕರಿಗೆ ಉಪಯೋಗ ಮಾತ್ರವಲ್ಲದೆ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಕೂಡ ಸಹಾಯವಾಗುವಂತೆ ಮಾಡಲಾಗುವುದು. ಇದು ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪ್ರಸ್ತುತವಾಗಿದ್ದು, ಇದು ಎಂಜಿನಿಯರಿಂಗ್‌, ನಿರ್ವಹಣೆ, ಭದ್ರತೆ ಮತ್ತು ಅತಿಥ್ಯದಂತಹ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆ (ABSS) ಪ್ರಮುಖ ಅನುಕೂಲಗಳು: ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಯ ಸಾರಿಗೆ ಕೇಂದ್ರಗಳಾಗಿ ಪರಿವರ್ತಿಸುವುದು. ಈಗಾಗಲೇ ಇರುವ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಅಧುನೀಕರಣ ಮಾಡುವುದು. ರೈಲು ನಿಲ್ದಾಣಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ. ನಿಲ್ದಾಣದ ಆವರಣದಲ್ಲಿ ವಾಣಿಜ್ಯ ಅಭಿವೃದ್ಧಿಗೆ ಉತ್ತೇಜನ. ನಾಗರಿಕರು ಇದರಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲು, ಭಾರತೀಯ ರೈಲ್ವೆಯು ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದು, ಈ https://Indianrailways.gov.in/railwayboard/FeedBackForm/index.jsp ಲಿಂಕ್ ಮೂಲಕ ನೇರವಾಗಿ ಸಲ್ಲಿಸಬಹುದು.

ಭಾರತೀಯ ರೈಲ್ವೆ ದೇಶಾದ್ಯಂತ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಯೋಜನೆ ಪ್ರಾರಂಭಸಿದ್ದು, ರಾಜ್ಯದಲ್ಲೂ ರೈಲು ಮೂಲಸೌಕರ್ಯವನ್ನು ನವೀಕರಿಸಿ ಮೇಲ್ದರ್ಜೆಗೇರಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ. ಮೈಸೂರು ರೈಲ್ವೆ ವಿಭಾಗದ 15 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಗೊಳಿಸಲಾಗಿದೆ ಎಂದು ಶಿಲ್ಪಿ ಅಗರ್ವಾಲ್ ಮಾಹಿತಿ ನೀಡಿದರು.

ಇದನ್ನೂ ಓದಿ: ಭಾರತೀಯ ರೈಲ್ವೆ ಲಾಭದ ಮನಸ್ಥಿತಿಯಿಂದ ಹೊರಬರಲಿ; ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಿರಲಿ

ಡಿಆರ್​ಎಂ ಶಿಲ್ಪಿ ಅಗರ್ವಾಲ್ ಹೇಳಿಕೆ

ಮೈಸೂರು: "ಕೇಂದ್ರ ಸರ್ಕಾರವು ಮೈಸೂರು ವಿಭಾಗದ 15 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 347 ಕೋಟಿ ರೂಪಾಯಿ ಅನುದಾನ ನೀಡಿದೆ. ಇದರಿಂದ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಆಗಸ್ಟ್​ 6ರಂದು ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ" ಎಂದು ಮೈಸೂರು ರೈಲ್ವೆ ವಿಭಾಗದ ಡಿಆರ್​ಎಂ ಶಿಲ್ಪಿ ಅಗರ್ವಾಲ್ ತಿಳಿಸಿದರು.

ಇಂದು ನಗರದ ರೈಲ್ವೆ ವಿಭಾಗೀಯ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, "ಭಾರತೀಯ ರೈಲ್ವೆ ದೇಶಾದ್ಯಂತ ರೈಲು ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಅಮೃತ್‌ ಭಾರತ್ ಸ್ಟೇಷನ್ ಯೋಜನೆ ಪ್ರಾರಂಭಿಸಿದೆ. ಕರ್ನಾಟಕದಲ್ಲಿ ರೈಲು ಮೂಲಸೌಕರ್ಯ ನವೀಕರಿಸಿ ಮೇಲ್ದರ್ಜೆಗೇರಿಸಲು ಇಲಾಖೆ ಬದ್ಧವಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ದಾಖಲೆಯ 7,561 ಕೋಟಿ ರೂಪಾಯಿ ಲಭಿಸಿದೆ" ಎಂದು ಮಾಹಿತಿ ನೀಡಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲು ಕೆಲವು ಪ್ರಮುಖ 15 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವುಗಳು ಹೀಗಿವೆ. ಚಾಮರಾಜನಗರ-CMNR, ಸಕಲೇಶಪುರ-SKLR, ಸುಬ್ರಹ್ಮಣ್ಯ ರೋಡ್-SBHR, ಬಂಟ್ವಾಳ BNTL, ಹಾಸನ-HAS, ತಿಪಟೂರು-TTR, ಅರಸಿಕೆರೆ ಜಂಕ್ಷನ್​-ASK, ಚಿಕ್ಕಮಗಳೂರು-CMGR, ತಾಳಗುಪ್ಪ-TLGP, ಸಾಗರ ಜಂಬಗಾರು-SRI, ಶಿವಮೊಗ್ಗ ಟೌನ್-SMET, ಚಿತ್ರದುರ್ಗ-CTA, ದಾವಣಗೆರೆ-DVG, ಹರಿಹರ-HRR, ರಾಣೆಬೆನ್ನೂರು-RNA.

"ಸುಮಾರು 347 ಕೋಟಿ ರೂಪಾಯಿ ಅನುದಾನದ ಯೋಜನೆಯಲ್ಲಿ ಪ್ರಮುಖವಾಗಿ ಸುಸ್ಥಿರತೆ, ನಿಲ್ದಾಣಕ್ಕೆ ಒತ್ತಡ ಮುಕ್ತ ಪ್ರವೇಶ ಮತ್ತು ನಿರ್ಗಮನ, ಆಧುನಿಕ ಪ್ರಯಾಣಿಕ ಸೌಕರ್ಯಗಳು, ಉಚಿತ ವೈ-ಫೈ ಸೌಲಭ್ಯ, ದಿವ್ಯಾಂಗ ವ್ಯಕ್ತಿಗಳಿಗೆ ವಿಶೇಷ ಒತ್ತು ನೀಡುವುದು. ನಿಲ್ದಾಣದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುವುದರ ಕಡೆಗೆ ಗಮನ ಕೊಡಲಾಗಿದೆ. ಯೋಜನೆಯ ಪ್ರಮುಖ ಅಂಶಗಳೆಂದರೆ ನಿಲ್ದಾಣದ ಸೌಕರ್ಯಗಳಾದ ಪ್ರವೇಶ ಭಾಗಗಳು, ಕಾಯುವ ಪ್ರದೇಶಗಳು, ಶೌಚಾಲಯಗಳು ಮತ್ತು ಅಗತ್ಯಗಳಿಗುಣವಾಗಿ ಲಿಫ್ಟ್​ಗಳು ಮತ್ತು ಎಸ್ಕಲೇಟರ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗುವುದು" ಎಂದರು‌.

ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ: ABSS ಅಡಿಯಲ್ಲಿ, ಅಸ್ತಿತ್ವದಲ್ಲಿರುವ ರೈಲು ನಿಲ್ದಾಣಗಳನ್ನು ಅವುಗಳ ಒಟ್ಟಾರೆ ಮೂಲಸೌಕರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸಲು ಪುನರಾಭಿವೃದ್ಧಿಗೊಳಿಸಲಾಗುತ್ತದೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅನುಕೂಲಕ್ಕೆ ಪ್ಲಾಟ್‌ಫಾರ್ಮ್‌ಗಳು, ಕಾಯುವ ಪ್ರದೇಶಗಳು, ಟಿಕೆಟ್ ಕೌಂಟರ್​ಗಳು, ಶೌಚಾಲಯಗಳು ಮತ್ತು ಇತರ ಸೌಕರ್ಯಗಳ ನವೀಕರಣ.

ತಂತ್ರಜ್ಞಾನದ ಮೂಲಕ ಆಧುನೀಕರಣ: ಯೋಜನೆಯಡಿ ರೈಲು ನಿಲ್ದಾಣಗಳಲ್ಲಿ ಸುಧಾರಿತ ತಂತ್ರಜ್ಞಾನಗಳು, ಅಧುನಿಕ ಸಂವಹನ ವ್ಯವಸ್ಥೆಗಳು, ವೈ-ಫೈ ಸಂಪರ್ಕ, ಸ್ವಯಂಚಾಲಿತ ಟಿಕೆಟಿಂಗ್ ಮತ್ತು ವಿದ್ಯುದೀಕರಣ ಪ್ರದರ್ಶನ ಫಲಕಗಳ ಕಾರ್ಯಾಚರಣೆ ಸಮರ್ಥಗೊಳಿಸಿ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಲಾಗುವುದು.

ಸ್ಥಳೀಯ ಆರ್ಥಿಕತೆ, ಉದ್ಯೋಗಾವಕಾಶ ಹೆಚ್ಚಳ: ಸ್ಥಳೀಯ ಅರ್ಥಿಕತೆಯನ್ನು ಉತ್ತೇಜಿಸಲು, ನಿಲ್ದಾಣದ ಆವರಣದಲ್ಲಿ ಸ್ಥಳೀಯ ವಾಣಿಜ್ಯ ಅಭಿವೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಲಾಗುವುದು. ಮಾರಾಟ ಮಳಿಗೆಗಳ ಸಂಕೀರ್ಣಗಳು, ಹೋಟೆಲ್​ ಮತ್ತು ಇತರ ವಾಣಿಜ್ಯ ಸ್ಥಳಗಳ ಸ್ಥಾಪಿಸಿ, ಪ್ರಯಾಣಿಕರಿಗೆ ಉಪಯೋಗ ಮಾತ್ರವಲ್ಲದೆ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಕೂಡ ಸಹಾಯವಾಗುವಂತೆ ಮಾಡಲಾಗುವುದು. ಇದು ಸರ್ಕಾರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪ್ರಸ್ತುತವಾಗಿದ್ದು, ಇದು ಎಂಜಿನಿಯರಿಂಗ್‌, ನಿರ್ವಹಣೆ, ಭದ್ರತೆ ಮತ್ತು ಅತಿಥ್ಯದಂತಹ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆ (ABSS) ಪ್ರಮುಖ ಅನುಕೂಲಗಳು: ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಯ ಸಾರಿಗೆ ಕೇಂದ್ರಗಳಾಗಿ ಪರಿವರ್ತಿಸುವುದು. ಈಗಾಗಲೇ ಇರುವ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಅಧುನೀಕರಣ ಮಾಡುವುದು. ರೈಲು ನಿಲ್ದಾಣಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ. ನಿಲ್ದಾಣದ ಆವರಣದಲ್ಲಿ ವಾಣಿಜ್ಯ ಅಭಿವೃದ್ಧಿಗೆ ಉತ್ತೇಜನ. ನಾಗರಿಕರು ಇದರಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲು, ಭಾರತೀಯ ರೈಲ್ವೆಯು ನಿಲ್ದಾಣಗಳ ಪುನರಾಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದು, ಈ https://Indianrailways.gov.in/railwayboard/FeedBackForm/index.jsp ಲಿಂಕ್ ಮೂಲಕ ನೇರವಾಗಿ ಸಲ್ಲಿಸಬಹುದು.

ಭಾರತೀಯ ರೈಲ್ವೆ ದೇಶಾದ್ಯಂತ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಯೋಜನೆ ಪ್ರಾರಂಭಸಿದ್ದು, ರಾಜ್ಯದಲ್ಲೂ ರೈಲು ಮೂಲಸೌಕರ್ಯವನ್ನು ನವೀಕರಿಸಿ ಮೇಲ್ದರ್ಜೆಗೇರಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ. ಮೈಸೂರು ರೈಲ್ವೆ ವಿಭಾಗದ 15 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಗೊಳಿಸಲಾಗಿದೆ ಎಂದು ಶಿಲ್ಪಿ ಅಗರ್ವಾಲ್ ಮಾಹಿತಿ ನೀಡಿದರು.

ಇದನ್ನೂ ಓದಿ: ಭಾರತೀಯ ರೈಲ್ವೆ ಲಾಭದ ಮನಸ್ಥಿತಿಯಿಂದ ಹೊರಬರಲಿ; ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಿರಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.