ETV Bharat / state

ಮಂಡ್ಯ: ಹಸು ತಿವಿದು ಬಾಲಕ ಸಾವು - ಹಸು ತಿವಿದು ಬಾಲಕ ಸಾವು

ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ವೇಳೆ ಬಾಲಕನಿಗೆ ಆಕಸ್ಮಿಕವಾಗಿ ಹೊಟ್ಟೆಯ ಭಾಗಕ್ಕೆ ಹಸು ಕೊಂಬಿನಿಂದ ತಿವಿದ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ.

young boy Death in Mandya
ಹಸು ತಿವಿದು ಬಾಲಕ ಸಾವು
author img

By

Published : Jan 13, 2021, 9:56 AM IST

Updated : Jan 13, 2021, 10:02 AM IST

ಮಂಡ್ಯ: ಮನೆಯಲ್ಲಿ ಸಾಕಿದ್ದ ಹಸು ತಿವಿದು ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ. ಮಾದೇಶ್ (13) ಮೃತ ದುರ್ದೈವಿ ಬಾಲಕ. ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ವೇಳೆ ಬಾಲಕನನ್ನು ತಿವಿದಿರುವ ದುರ್ಘಟನೆ ನಡೆದಿದೆ.

ಹಸು ತಿವಿದು ಬಾಲಕ ಸಾವು

ಸುದ್ದಿಗಾರರೊಂದಿಗೆ ತಂದೆ ಕೃಷ್ಣಪ್ಪ ಮಾತನಾಡಿ, ಹಸುವನ್ನು ಸುಮಾರು ದಿನಗಳಿಂದ ಅವನೇ ಸಾಕುತ್ತಿದ್ದು, ಹುಲ್ಲನ್ನು ಎಳೆಯಲು ಹೋದಾಗ ಆಕಸ್ಮಿಕವಾಗಿ ಹೊಟ್ಟೆಯ ಭಾಗಕ್ಕೆ ತಿವಿದಿದೆ. ತಕ್ಷಣವೇ ಕೆಎಂ ದೊಡ್ಡಿ ಮಾದೇಗೌಡ ಆಸ್ಪತ್ರೆಯಲ್ಲಿ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.

ಓದಿ : ಉಜಿರೆಯಲ್ಲಿ ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ: ನಾಲ್ವರ ಮೇಲೆ ಕೇಸ್

ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಡ್ಯ: ಮನೆಯಲ್ಲಿ ಸಾಕಿದ್ದ ಹಸು ತಿವಿದು ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ. ಮಾದೇಶ್ (13) ಮೃತ ದುರ್ದೈವಿ ಬಾಲಕ. ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ವೇಳೆ ಬಾಲಕನನ್ನು ತಿವಿದಿರುವ ದುರ್ಘಟನೆ ನಡೆದಿದೆ.

ಹಸು ತಿವಿದು ಬಾಲಕ ಸಾವು

ಸುದ್ದಿಗಾರರೊಂದಿಗೆ ತಂದೆ ಕೃಷ್ಣಪ್ಪ ಮಾತನಾಡಿ, ಹಸುವನ್ನು ಸುಮಾರು ದಿನಗಳಿಂದ ಅವನೇ ಸಾಕುತ್ತಿದ್ದು, ಹುಲ್ಲನ್ನು ಎಳೆಯಲು ಹೋದಾಗ ಆಕಸ್ಮಿಕವಾಗಿ ಹೊಟ್ಟೆಯ ಭಾಗಕ್ಕೆ ತಿವಿದಿದೆ. ತಕ್ಷಣವೇ ಕೆಎಂ ದೊಡ್ಡಿ ಮಾದೇಗೌಡ ಆಸ್ಪತ್ರೆಯಲ್ಲಿ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.

ಓದಿ : ಉಜಿರೆಯಲ್ಲಿ ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ: ನಾಲ್ವರ ಮೇಲೆ ಕೇಸ್

ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated : Jan 13, 2021, 10:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.