ETV Bharat / state

ಗ್ರಾಪಂ ಮುಂದೆಯೇ ಉಪಾಧ್ಯಕ್ಷನ ಬಟ್ಟೆ ಹರಿದು ರಂಪಾಟ - ಮದ್ದೂರಿನ ವಳಗರಹಳ್ಳಿ ಗ್ರಾಮ

ಈ ವೇಳೆ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

ರಂಪಾಟ
ರಂಪಾಟ
author img

By

Published : Feb 8, 2021, 10:34 PM IST

ಮಂಡ್ಯ: ಗ್ರಾಮ ಪಂಚಾಯತ್‌ ಮುಂದೆಯೇ ಉಪಾಧ್ಯಕ್ಷನ ಬಟ್ಟೆ ಹರಿದು ರಂಪಾಟ ಮಾಡಿರುವ ಘಟನೆ ಮದ್ದೂರಿನ ವಳಗರಹಳ್ಳಿ ಗ್ರಾಮದಲ್ಲಿ ನಡೆದಿದೆ‌.

ಗ್ರಾಮದಲ್ಲಿ ಜಗದೀಶ್ ಬಣದಲ್ಲಿ ಗುರ್ತಿಸಿಕೊಂಡಿದ್ದ ಗಿರೀಶ್ ಎಂಬಾತ, ಮತದಾನದ ವೇಳೆ ಶಂಕರೇಗೌಡ ಬಣದ ಜೊತೆ ಶಾಮೀಲಾಗಿ ಉಪಾಧ್ಯಕ್ಷನಾಗಿ ಗಿರೀಶ್ ಆಯ್ಕೆಯಾಗಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಜಗದೀಶ್ ಬಣದ ಬೆಂಬಲಿಗರು ಬಟ್ಟೆ ಹರಿದು ಗಿರೀಶ್​ನನ್ನು ಎಳೆದಾಡಿದ್ದಾರೆ.

ಗ್ರಾಪಂ ಮುಂದೆಯೇ ಉಪಾಧ್ಯಕ್ಷನ ಬಟ್ಟೆ ಹರಿದು ರಂಪಾಟ..

ಘಟನೆಯಿಂದ ಸ್ಥಳದಲ್ಲಿ ಬಿಗುವಿನ‌ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಡ್ಯ: ಗ್ರಾಮ ಪಂಚಾಯತ್‌ ಮುಂದೆಯೇ ಉಪಾಧ್ಯಕ್ಷನ ಬಟ್ಟೆ ಹರಿದು ರಂಪಾಟ ಮಾಡಿರುವ ಘಟನೆ ಮದ್ದೂರಿನ ವಳಗರಹಳ್ಳಿ ಗ್ರಾಮದಲ್ಲಿ ನಡೆದಿದೆ‌.

ಗ್ರಾಮದಲ್ಲಿ ಜಗದೀಶ್ ಬಣದಲ್ಲಿ ಗುರ್ತಿಸಿಕೊಂಡಿದ್ದ ಗಿರೀಶ್ ಎಂಬಾತ, ಮತದಾನದ ವೇಳೆ ಶಂಕರೇಗೌಡ ಬಣದ ಜೊತೆ ಶಾಮೀಲಾಗಿ ಉಪಾಧ್ಯಕ್ಷನಾಗಿ ಗಿರೀಶ್ ಆಯ್ಕೆಯಾಗಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಜಗದೀಶ್ ಬಣದ ಬೆಂಬಲಿಗರು ಬಟ್ಟೆ ಹರಿದು ಗಿರೀಶ್​ನನ್ನು ಎಳೆದಾಡಿದ್ದಾರೆ.

ಗ್ರಾಪಂ ಮುಂದೆಯೇ ಉಪಾಧ್ಯಕ್ಷನ ಬಟ್ಟೆ ಹರಿದು ರಂಪಾಟ..

ಘಟನೆಯಿಂದ ಸ್ಥಳದಲ್ಲಿ ಬಿಗುವಿನ‌ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.