ETV Bharat / state

ಚಲುವರಾಯಸ್ವಾಮಿ ಮಹಿಳೆ ಮುಂದೆ ಬಿಟ್ಟು ರಾಜಕಾರಣ ಮಾಡಿದ್ದಾರೆ: ಸುರೇಶ್ ಗೌಡ ವಾಗ್ದಾಳಿ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೂಲ ಕಾಂಗ್ರೆಸಿಗರು ಮೈತ್ರಿ ಧರ್ಮ ಪಾಲಿಸಿದ್ದಾರೆ. ಆದ್ರೆ ಮಾಜಿ ಶಾಸಕ ಚಲುರಾಯಸ್ವಾಮಿ ಮಹಿಳೆಯನ್ನು ಮುಂದೆ ಬಿಟ್ಟು ಬ್ಲ್ಯಾಕ್​ಮೇಲ್​ ರಾಜಕಾರಣ ಮಾಡಿದ್ದಾರೆ. ಇಂತಹ ಬ್ಲ್ಯಾಕ್​ಮೇಲ್​ ರಾಜಕಾರಣಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡ್ತಿದಾರೆ ಮತ್ತು ಬಿಜೆಪಿ ಬೆಳೆಸುತ್ತಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್​ ಗೌಡ ಆರೋಪಿಸಿದ್ದಾರೆ.

author img

By

Published : May 2, 2019, 6:15 PM IST

Updated : May 2, 2019, 6:24 PM IST

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಮಂಡ್ಯ: ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ಚಲುವರಾಯಸ್ವಾಮಿ ರಾಜಕೀಯ ಮಾಡಿದ್ದಾರೆ. ಇವರ ಹಿಂದೆ ಯಾವುದೋ ಪ್ರಬಲ ರಾಜಕೀಯ ಶಕ್ತಿಯ ಕೈವಾಡವಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿ ಮಂಡ್ಯದಲ್ಲಿ ಮೂಲ‌ ಕಾಂಗ್ರೆಸಿಗರು ಮಾತ್ರ ಮೈತ್ರಿ ಧರ್ಮ ಪಾಲಿಸಿದ್ದಾರೆ. ಯಾರು ಇತ್ತೀಚೆಗೆ ಕಾಂಗ್ರೆಸ್​ಗೆ ವಲಸೆ ಹೋಗಿದ್ದಾರೊ ಅವರಲ್ಲಿ ಬಹುತೇಕ 80% ರಷ್ಟು ಜನರು ಮೈತ್ರಿ ಧರ್ಮ ಪಾಲಿಸಿಲ್ಲ ಎಂದು ಆರೋಪಿಸಿದರು.

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಕಾಂಗ್ರೆಸ್​ಗೆ ವಲಸೆ ಹೋದವರು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಿದ್ದಾರೆ. ಮೂಲ ಕಾಂಗ್ರೆಸಿಗರಾದ ಆತ್ಮಾನಂದ, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಹಲವರು ಶಕ್ತಿ ಮೀರಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಹೋದವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ತಿಳಿಯದ ಬ್ಲ್ಯಾಕ್​ಮೇಲ್​​ ರಾಜಕಾರಣಿಗಳು ನಮ್ಮ ಪರ ಕೆಲಸ ಮಾಡಿಲ್ಲ ಎಂದು ಶಾಸಕ ಸುರೇಶ್​ ಗೌಡ ಗುಡುಗಿದರು.

ಚಲುವರಾಯಸ್ವಾಮಿ ಮೇಲೆ ಗೂಢಚಾರಿಕೆ ಮಾಡ್ತಿರೋ ಆರೋಪ ವಿಚಾರವಾಗಿ ಇವನ್ಯಾವ ದೊಡ್ಡ ವ್ಯಕ್ತಿಯೆಂದು ಇವನ‌ ಮೇಲೆ ಗೂಢಚಾರಿಕೆ ಮಾಡಲು ಹೋಗ್ತಾರೆ ಎಂದು ಶಾಸಕ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಚಲುವರಾಯಸ್ವಾಮಿ ಇಲ್ಲಸಲ್ಲದ ಆರೋಪ ಮಾಡೋದನ್ನು ಬಿಟ್ಟು ಬೇರೆ ಕೆಲ್ಸ ನೋಡಿಕೊಳ್ಳಲಿ. ಈ ಪರಿಸ್ಥಿತಿಯಲ್ಲಿ ಜೆಡಿಎಸ್​ಗೆ ಯಾರು ಅನಿವಾರ್ಯ ಅಲ್ಲ, ಅವರಿಗೆ ನಾವು ಅನಿವಾರ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.

ಯಾರು ಏನೇ ಮಾಡಿದ್ರು ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ. ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ನಿಖಿಲ್ ಜಯ ಗಳಿಸಲಿದ್ದಾರೆ ಎಂದು ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ: ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ಚಲುವರಾಯಸ್ವಾಮಿ ರಾಜಕೀಯ ಮಾಡಿದ್ದಾರೆ. ಇವರ ಹಿಂದೆ ಯಾವುದೋ ಪ್ರಬಲ ರಾಜಕೀಯ ಶಕ್ತಿಯ ಕೈವಾಡವಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿ ಮಂಡ್ಯದಲ್ಲಿ ಮೂಲ‌ ಕಾಂಗ್ರೆಸಿಗರು ಮಾತ್ರ ಮೈತ್ರಿ ಧರ್ಮ ಪಾಲಿಸಿದ್ದಾರೆ. ಯಾರು ಇತ್ತೀಚೆಗೆ ಕಾಂಗ್ರೆಸ್​ಗೆ ವಲಸೆ ಹೋಗಿದ್ದಾರೊ ಅವರಲ್ಲಿ ಬಹುತೇಕ 80% ರಷ್ಟು ಜನರು ಮೈತ್ರಿ ಧರ್ಮ ಪಾಲಿಸಿಲ್ಲ ಎಂದು ಆರೋಪಿಸಿದರು.

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಕಾಂಗ್ರೆಸ್​ಗೆ ವಲಸೆ ಹೋದವರು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಿದ್ದಾರೆ. ಮೂಲ ಕಾಂಗ್ರೆಸಿಗರಾದ ಆತ್ಮಾನಂದ, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಹಲವರು ಶಕ್ತಿ ಮೀರಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಹೋದವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ತಿಳಿಯದ ಬ್ಲ್ಯಾಕ್​ಮೇಲ್​​ ರಾಜಕಾರಣಿಗಳು ನಮ್ಮ ಪರ ಕೆಲಸ ಮಾಡಿಲ್ಲ ಎಂದು ಶಾಸಕ ಸುರೇಶ್​ ಗೌಡ ಗುಡುಗಿದರು.

ಚಲುವರಾಯಸ್ವಾಮಿ ಮೇಲೆ ಗೂಢಚಾರಿಕೆ ಮಾಡ್ತಿರೋ ಆರೋಪ ವಿಚಾರವಾಗಿ ಇವನ್ಯಾವ ದೊಡ್ಡ ವ್ಯಕ್ತಿಯೆಂದು ಇವನ‌ ಮೇಲೆ ಗೂಢಚಾರಿಕೆ ಮಾಡಲು ಹೋಗ್ತಾರೆ ಎಂದು ಶಾಸಕ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಚಲುವರಾಯಸ್ವಾಮಿ ಇಲ್ಲಸಲ್ಲದ ಆರೋಪ ಮಾಡೋದನ್ನು ಬಿಟ್ಟು ಬೇರೆ ಕೆಲ್ಸ ನೋಡಿಕೊಳ್ಳಲಿ. ಈ ಪರಿಸ್ಥಿತಿಯಲ್ಲಿ ಜೆಡಿಎಸ್​ಗೆ ಯಾರು ಅನಿವಾರ್ಯ ಅಲ್ಲ, ಅವರಿಗೆ ನಾವು ಅನಿವಾರ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.

ಯಾರು ಏನೇ ಮಾಡಿದ್ರು ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ. ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ನಿಖಿಲ್ ಜಯ ಗಳಿಸಲಿದ್ದಾರೆ ಎಂದು ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

Intro:ಮಂಡ್ಯ: ಓರ್ವ ಹೆಂಗಸನ್ನು ಮುಂದಿಟ್ಟುಕೊಂಡು ಚಲುವರಾಯಸ್ವಾಮಿ ಶಿಂಖಡಿ ರಾಜಕೀಯ ಮಾಡಿದ್ದಾರೆ. ಇವರ ಹಿಂದೆ ಯಾವುದೋ ಪ್ರಬಲ ರಾಜಕೀಯ ಶಕ್ತಿಯ ಕೈವಾಡವಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ಮಾಡಿದರು.
ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಈ ಬಾರಿ ಮಂಡ್ಯದಲ್ಲಿ ಮೂಲ‌ ಕಾಂಗ್ರೆಸಿಗರು ಮಾತ್ರ ಮೈತ್ರಿ ಧರ್ಮ ಪಾಲಿಸಿದ್ದಾರೆ. ಯಾರು ಇತ್ತೀಚೆಗೆ ಕಾಂಗ್ರೆಸ್ ಗೆ ವಲಸೆ ಹೋಗಿದ್ದಾರೆ ಅವರಲ್ಲಿ ಬಹುತೇಕ ಶೇ ೮೦% ರಷ್ಟು ಜನ್ರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂದು ಆರೋಪ ಮಾಡಿದರು.
ಅವ್ರೆಲ್ರೂ ನಮ್ಮ ಮೈತ್ರಿ ಅಭ್ಯರ್ಥಿ ವಿರುದ್ದವಾಗಿ ಕೆಲಸ ಮಾಡಿದ್ದಾರೆ. ಮೂಲ ಕಾಂಗ್ರೆಸಿಗರಾದ ಆತ್ಮಾನಂದ ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಹಲವರು ಶಕ್ತಿ ಮೀರಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಹೋದವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ತಿಳಿಯದ ಬ್ಲಾಕ್ ಮೇಲ್ ರಾಜಕಾರಣಿಗಳು ನಮಗೆ ಮಾಡಿಲ್ಲ ಎಂದರು.
ಅವ್ರರ್ಯಾರು ಈ ಬಾರಿ ತಟಸ್ಥರಾಗಿರಲಿಲ್ಲ, ಅವ್ರು ಈ‌ ಬಾರಿ ಬಹಿರಂಗವಾಗೇ ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಹೆಂಗಸನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಇವ್ರೆಲ್ರು ಈ ಬಾರಿ ಆ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದ್ದಾರೆ‌‌‌‌‌‌ ಎಂದರು.
ಒಂದಂತು‌ ಸತ್ಯ ಇದೆರಲ್ಲದರ ಹಿಂದೆ ಯಾರದೋ ಪ್ರಬಲ ಕೈವಾಡ ವಿದೆ. ಅವ್ರು ಮಹಾನ್ ರಾಜಕೀಯ ವ್ಯಕ್ತಿಗಳು, ಹಲವಾರು ಸ್ಟಾಟರ್ಜಿ ಮಾಡಿರೋರು ಈಗ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಕಟ್ಟಿ ಬೆಳಸಲು ಹೊರಟಿದ್ದಾರೆ. ಇಂತಹ ಬ್ಲಾಕ್ಮೇಲ್ ರಾಜಕಾರಣಿಗಳನ್ನು ಪಕ್ಷಕ್ಕೆ ಕರೆತಂದು ಕಾಂಗ್ರೆಸ್ ಪಕ್ಷ ನಿರ್ನಾಮಕ್ಕೆ ಕಾರಣರಾಗಿ ಬಿಜೆಪಿ ಹುಟ್ಟಿಗೆ ಕೆಲಸ ಮಾಡಿದ್ದಾರೆ ಎಂದರು.
ಚಲುವರಾಯಸ್ವಾಮಿ ಮೇಲೆ ಗೂಡಾಚಾರಿಕೆ ಮಾಡ್ತಿರೋ ಆರೋಪ ವಿಚಾರವಾಗಿ ಇವನ್ಯಾವ ದೊಡ್ಡ ವ್ಯಕ್ತಿಯೆಂದು ಇವನ‌ ಮೇಲೆ ಗೂಡಾಚಾರಿಕೆ ಮಾಡಲು ಹೋಗ್ತಾರೆ. ಇಲ್ಲ ಸಲ್ಲದ ಆರೋಪ ಮಾಡೋದು ಬಿಟ್ಟು ಬೇರೆ ಕೆಲ್ಸ ನೋಡಿಕೊಳ್ಳಲ್ಲಿ.ಈ ಪರಿಸ್ಥಿತಿಯಲ್ಲಿ ಜೆಡಿಎಸ್ ಗೆ ಯಾರು ಅನಿವಾರ್ಯ ಅಲ್ಲ, ಅವರಿಗೆ ನಾವು ಅನಿವಾರ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಯಾರು ಏನೇ ಮಾಡಿದ್ರು ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ವಿತ. ಒಂದುವರೆ ಲಕ್ಷದ ಅಂತರದಲ್ಲಿ ನಿಖಿಲ್ ಜಯಗಳಿಸುವ ಬಗ್ಗೆ ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿ ದರು.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : May 2, 2019, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.