ETV Bharat / state

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ: ರಾಜಕೀಯ ನಾಯಕರಿಂದ ಗೆಲುವಿನ ಲೆಕ್ಕಾಚಾರ - Preparation for By-election in Mandya

ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ  ನಾಯಕರು ಗೆಲುವಿನ ಲೆಕ್ಕಾಚಾರ  ಶುರು ಮಾಡಿದ್ದು, ನೀತಿ ಸಂಹಿತೆ  ಜಾರಿಯಾಗುವ ಮೊದಲು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನುಮಾಡುತ್ತಿದ್ದಾರೆ.

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ
author img

By

Published : Nov 7, 2019, 11:33 PM IST

ಮಂಡ್ಯ: ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದು, ನೀತಿ ಸಂಹಿತೆ ಜಾರಿಯಾಗುವ ಮೊದಲು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಮಾಡುತ್ತಿದ್ದಾರೆ.

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ

ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಹರಕೆಯ ಕಾರಣ ನೀಡಿ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಒಂದು ರೌಂಡ್ ಬಾಡೂಟದ ಏರ್ಪಡಿಸಿದ್ದಾರೆ ಎನ್ನಲಾಗಿದೆ. ನಾರಾಯಣ ಗೌಡರ ಬಾಡೂಟ ಮುಗಿಯುತ್ತಿದ್ದಂತೆ ಇನ್ನೊಂದು ಕಡೆ ಜೆಡಿಎಸ್ ಟಿಕೆಟ್​ ಆಕಾಂಕ್ಷಿ ಮಾಜಿ ಸಚಿವ ಪುಟ್ಟರಾಜು, ಕೆ.ಆರ್.ಪೇಟೆ ತಾಲೂಕು ನೀತಿ ಮಂಗಲದಲ್ಲಿ ಕಾರ್ಯಕರ್ತರ ಸಭೆ ನಡೆಸಿ ನಾರಾಯಣ ಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಅಲ್ಲದೆ ಸಾಲ ಮನ್ನಾದ ಲಾಭ ಪಡೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಮಂಡ್ಯ: ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ನಾಯಕರು ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದು, ನೀತಿ ಸಂಹಿತೆ ಜಾರಿಯಾಗುವ ಮೊದಲು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಮಾಡುತ್ತಿದ್ದಾರೆ.

ಮಂಡ್ಯದಲ್ಲಿ ಉಪಚುನಾವಣೆಗೆ ಅಖಾಡ ಸಿದ್ದ

ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಹರಕೆಯ ಕಾರಣ ನೀಡಿ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಒಂದು ರೌಂಡ್ ಬಾಡೂಟದ ಏರ್ಪಡಿಸಿದ್ದಾರೆ ಎನ್ನಲಾಗಿದೆ. ನಾರಾಯಣ ಗೌಡರ ಬಾಡೂಟ ಮುಗಿಯುತ್ತಿದ್ದಂತೆ ಇನ್ನೊಂದು ಕಡೆ ಜೆಡಿಎಸ್ ಟಿಕೆಟ್​ ಆಕಾಂಕ್ಷಿ ಮಾಜಿ ಸಚಿವ ಪುಟ್ಟರಾಜು, ಕೆ.ಆರ್.ಪೇಟೆ ತಾಲೂಕು ನೀತಿ ಮಂಗಲದಲ್ಲಿ ಕಾರ್ಯಕರ್ತರ ಸಭೆ ನಡೆಸಿ ನಾರಾಯಣ ಗೌಡ ವಿರುದ್ದ ವಾಗ್ದಾಳಿ ನಡೆಸಿದರು. ಅಲ್ಲದೆ ಸಾಲ ಮನ್ನಾದ ಲಾಭ ಪಡೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

Intro:ಮಂಡ್ಯ: ಮಂಡ್ಯದ ಗಾಂಧಿಯ ಕ್ಷೇತ್ರದಲ್ಲಿ ಬಾಡೂಟದ್ದೇ ದರ್ಬಾರ್. ಅನರ್ಹ ಶಾಸಕರ ಸರಣಿ ಊಟದ ನಂತರ ಈಗ ಜೆಡಿಎಸ್ ನಾಯಕರೂ ಬಾಡೂಟದ ಪರುಸೆಯನ್ನು ಆರಂಭ ಮಾಡಿದ್ದಾರೆ. ಉಪ ಚುನಾವಣೆಗೆ ಇನ್ನೂ ನೀತಿ ಸಂಹಿತೆ ಜಾರಿಯಾಗದ ಹಿನ್ನೆಲೆಯಲ್ಲಿ ಅಬ್ಬರದ ಪ್ರಚಾರ ಶುರುವಾಗಿದ್ದು, ಆರೋಪ-ಪ್ರತ್ಯಾರೋಪವೂ ಜೋರಾಗಿಯೇ ನಡೆಯುತ್ತಿದೆ. ಹಾಗಾದರೆ ಎಲ್ಲೆಲ್ಲಾಊಟದ ನಡೆಯಿತು, ಏನೇನೂ ಆರೋಪ ಮಾಡಿದರು ಅನ್ನೋದು ಇಲ್ಲಿದೆ ನೋಡಿ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ ಚುನಾವಣೆ ಹೆಸರಲ್ಲಿ ಮಾತ್ರ ಕೆ.ಆರ್.ಪೇಟೆ ಕ್ಷೇತ್ರದ ಮತದಾರರಿಗೆ ಬರ್ಜರಿ ಬಾಡೂಟವಂತೂ ಸಿಕ್ತಾ ಇದೆ. ಈಗಾಗಲೇ ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಹರಕೆಯ ಕಾರಣ ನೀಡಿ ಒಂದು ರೌಂಡ್ ಬಾಡೂಟದ ಪರುಸೆಯನ್ನು ಮುಗಿಸಿದ್ದಾರೆ. ಹೋದಕಡೆಯಲ್ಲೆಲ್ಲಾ ಪ್ರಚಾರದ ಜೊತೆಗೆ ಕ್ಷೇತ್ರಕ್ಕೆ ಆದ ಮೋಸದ ಬಗ್ಗೆಯೂ ವಿವರಣೆ ನೀಡುತ್ತಾ, ಮಂಡ್ಯದ ಗಾಂಧಿ ಮಾಜಿ ಸ್ಪೀಕರ್ ಕೃಷ್ಣರ ಬಗ್ಗೆಯೂ ಅಪ ಪ್ರಚಾರ ಮಾಡಲಾಗಿತ್ತು, ನನಗೂ ಅವರ ಬಗ್ಗೆ ಕೆಟ್ಟದಾಗಿ ಹೇಳಿ ನಂಬಿಸಲಾಗಿತ್ತು. ಆದರೆ ಈಗ ಸತ್ಯ ತಿಳಿಯಿತು ಎಂದು ಕೃಷ್ಣರ ಕ್ಷಮೆಯನ್ನೂ ಕೋರುತ್ತಿದ್ದಾರೆ.

ಬೈಟ್: ಕೆ.ಸಿ. ನಾರಾಯಣಗೌಡ, ಜೆಡಿಎಸ್ ಅನರ್ಹ ಶಾಸಕ.

ಅನರ್ಹ ಶಾಸಕ ನಾರಾಯಣಗೌಡರ ಒಂದು ಸುತ್ತು ಮುಗಿಯುತ್ತಿದ್ದಂತೆ ಜೆಡಿಎಸ್ ಟಿಕೇಟ್ ಆಕಾಂಕ್ಷಿತ ಅಭ್ಯರ್ಥಿಗಳು ಊಟದ ಪರುಸೆಯನ್ನು ಇಂದಿನಿಂದ ಆರಂಭ ಮಾಡಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕಿನ ನೀತಿ ಮಂಗಲದಲ್ಲಿ ಸಾಲ ಮನ್ನಾದ ಲಾಭ ಪಡೆಯಲು ಕಾರ್ಯಕರ್ತರ ಸಭೆ ಮಾಡಿ ಮಾಹಿತಿಯನ್ನು ತಿಳಿಸಿದರು. ಇನ್ನು ಮಾಜಿ ಸಚಿವ ಪುಟ್ಟರಾಜು, ತಾವು ಕಳೆದ ಚುನಾವಣೆಯಲ್ಲಿ ನಾರಾಯಣಗೌಡರಿಗೆ ಹಣಕಾಸು ನೆರವು ನೀಡಿದ ಬಗ್ಗೆಯೂ ಮತದಾರರ ಬಳಿ ಹೇಳಿಕೊಂಡರು.

ಬೈಟ್: ಪುಟ್ಟರಾಜು, ಮಾಜಿ ಸಚಿವ.

ಚುನಾವಣೆ ನೀತಿ ಸಂಹಿತೆ ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ ಮತದಾರರನ್ನು ಸೆಳೆಯಲು ಬಾಡೂಟದ ಪರುಸೆಯೇ ಆರಂಭವಾಗಿದೆ. ಪರುಸೆಯಲ್ಲಿ ಊಟ ಮಾಡಿದ ಮತದಾರರ ಒಲವು ಯಾರ ಕಡೆ ತಿರುಗುತ್ತೋ ಕಾದು ನೋಡಬೇಕಾಗಿದೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯConclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.