ETV Bharat / state

ಆರೋಪಿಯನ್ನ ಬೀದಿಯಲ್ಲಿ ತುಂಡು ತುಂಡಾಗಿ ಕತ್ತರಿಸಬೇಕು: ಶಾಸಕ ಜಮೀರ್ ಅಹ್ಮದ್​

author img

By

Published : Oct 19, 2022, 2:06 PM IST

Updated : Oct 19, 2022, 3:31 PM IST

ಮಳ್ಳವಳ್ಳಿಯಲ್ಲಿ 10 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದರು. ಬುಧವಾರ ಮೃತ ಬಾಲಕಿ ನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್​ ಭೇಟಿ ನೀಡಿ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

MLA Zameer Ahmed
ಶಾಸಕ ಜಮೀರ್ ಅಹ್ಮದ್​ ಭೇಟಿ

ಮಂಡ್ಯ: ಮಳವಳ್ಳಿಯಲ್ಲಿ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಬಾಲಕಿ ಮನೆಗೆ ಶಾಸಕ ಜಮೀರ್​ ಅಹ್ಮದ್​ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಬಾಲಕಿ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಕುಟುಂಬಸ್ಥರ ಜೊತೆ ಮಾತನಾಡಿದ ಅವರು, ಆರೋಪಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದರು. ಅಲ್ಲದೇ ನ್ಯಾಯಕ್ಕಾಗಿ ಎಂದಿಗೂ ಅವರ ಜೊತೆ ಇರುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಯನ್ನ ಬೀದಿಯಲ್ಲಿ ತುಂಡು ತುಂಡಾಗಿ ಕತ್ತರಿಸಬೇಕು. ಇಂತ ಘಟನೆ ನಡೆಯಬಾರದಿತ್ತು. ಈ ವಿಚಾರ ಕೇಳಿದರೆ ಮೈ ಜುಮ್ ಅನ್ನುತ್ತದೆ. ಇದು ಮನುಷ್ಯರು ಮಾಡುವ ಕೆಲಸ ಅಲ್ಲ. ಯಾರೋ ರಾಕ್ಷಸೆನೇ ಮಾಡಿರುವ ಕೆಲಸ ಅನಿಸುತ್ತಿದೆ. ಈ ರೀತಿ 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಮನುಷ್ಯನಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಶಾಸಕ ಜಮೀರ್ ಅಹ್ಮದ್​

ಇಂತ ರಾಕ್ಷಸನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಕೊಟ್ಟರೆ ಆಗ ಎಲ್ಲರಿಗೂ ಭಯ ಬರಲಿದೆ. ಈ ಮಗುವಿಗೆ ಆದ ರೀತಿ ಬೇರೆ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು. ಆ ಕುಟುಂಬದ ಗೋಳು ನೋಡಲು ಆಗ್ತಿಲ್ಲ. ಇಂತಹವರನ್ನ ಬೀದಿಯಲ್ಲಿ ನಿಲ್ಲಿಸಿ ಕತ್ತರಿಸಿ ತುಂಡು ತುಂಡು ಮಾಡಬೇಕು. ಈ ರೀತಿ ಕಾನೂನು ನಾವು ತರದಿದ್ದರೆ, ಇನ್ಮುಂದೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದರು.

ಇದನ್ನೂ ಓದಿ: ಮಂಡ್ಯ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ಕಾಮುಕನಿಗೆ ಕಠಿಣ ಶಿಕ್ಷೆ ಆಗಲೆಂದು ಸಿದ್ದರಾಮಯ್ಯ ಆಗ್ರಹ

ಸರ್ಕಾರಕ್ಕೆ ಮನವಿ ಮಾಡುತ್ತೇನೆ ಇಂತ ವಿಚಾರಕ್ಕೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು. ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ, ಆರೋಪಿಗೆ ಬೀದಿಯಲ್ಲಿ ಗಲ್ಲು ಶಿಕ್ಷೆ ನೀಡಬೇಕು. ಮಗು ಅಂತೂ ವಾಪಸ್ ಕೊಡಲು ನಮ್ಮಿಂದ ಸಾಧ್ಯವಿಲ್ಲ. ನನ್ನ ಕಡೆಯಿಂದ ಸಣ್ಣ ನೆರವು ಕೊಟ್ಟಿದ್ದೇನೆ. ಆ ಕುಟುಂಬಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಮರುಗಿದರು.

ಮಂಡ್ಯ: ಮಳವಳ್ಳಿಯಲ್ಲಿ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಬಾಲಕಿ ಮನೆಗೆ ಶಾಸಕ ಜಮೀರ್​ ಅಹ್ಮದ್​ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೇ ಬಾಲಕಿ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಕುಟುಂಬಸ್ಥರ ಜೊತೆ ಮಾತನಾಡಿದ ಅವರು, ಆರೋಪಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದರು. ಅಲ್ಲದೇ ನ್ಯಾಯಕ್ಕಾಗಿ ಎಂದಿಗೂ ಅವರ ಜೊತೆ ಇರುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಯನ್ನ ಬೀದಿಯಲ್ಲಿ ತುಂಡು ತುಂಡಾಗಿ ಕತ್ತರಿಸಬೇಕು. ಇಂತ ಘಟನೆ ನಡೆಯಬಾರದಿತ್ತು. ಈ ವಿಚಾರ ಕೇಳಿದರೆ ಮೈ ಜುಮ್ ಅನ್ನುತ್ತದೆ. ಇದು ಮನುಷ್ಯರು ಮಾಡುವ ಕೆಲಸ ಅಲ್ಲ. ಯಾರೋ ರಾಕ್ಷಸೆನೇ ಮಾಡಿರುವ ಕೆಲಸ ಅನಿಸುತ್ತಿದೆ. ಈ ರೀತಿ 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಮಾಡಲು ಮನುಷ್ಯನಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಶಾಸಕ ಜಮೀರ್ ಅಹ್ಮದ್​

ಇಂತ ರಾಕ್ಷಸನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಕೊಟ್ಟರೆ ಆಗ ಎಲ್ಲರಿಗೂ ಭಯ ಬರಲಿದೆ. ಈ ಮಗುವಿಗೆ ಆದ ರೀತಿ ಬೇರೆ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು. ಆ ಕುಟುಂಬದ ಗೋಳು ನೋಡಲು ಆಗ್ತಿಲ್ಲ. ಇಂತಹವರನ್ನ ಬೀದಿಯಲ್ಲಿ ನಿಲ್ಲಿಸಿ ಕತ್ತರಿಸಿ ತುಂಡು ತುಂಡು ಮಾಡಬೇಕು. ಈ ರೀತಿ ಕಾನೂನು ನಾವು ತರದಿದ್ದರೆ, ಇನ್ಮುಂದೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದರು.

ಇದನ್ನೂ ಓದಿ: ಮಂಡ್ಯ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ಕಾಮುಕನಿಗೆ ಕಠಿಣ ಶಿಕ್ಷೆ ಆಗಲೆಂದು ಸಿದ್ದರಾಮಯ್ಯ ಆಗ್ರಹ

ಸರ್ಕಾರಕ್ಕೆ ಮನವಿ ಮಾಡುತ್ತೇನೆ ಇಂತ ವಿಚಾರಕ್ಕೆ ಪ್ರತ್ಯೇಕ ಕಾನೂನು ಜಾರಿಯಾಗಬೇಕು. ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ, ಆರೋಪಿಗೆ ಬೀದಿಯಲ್ಲಿ ಗಲ್ಲು ಶಿಕ್ಷೆ ನೀಡಬೇಕು. ಮಗು ಅಂತೂ ವಾಪಸ್ ಕೊಡಲು ನಮ್ಮಿಂದ ಸಾಧ್ಯವಿಲ್ಲ. ನನ್ನ ಕಡೆಯಿಂದ ಸಣ್ಣ ನೆರವು ಕೊಟ್ಟಿದ್ದೇನೆ. ಆ ಕುಟುಂಬಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಮರುಗಿದರು.

Last Updated : Oct 19, 2022, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.