ETV Bharat / state

ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ: ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರು

author img

By

Published : Apr 9, 2021, 10:49 AM IST

ಮಂಡ್ಯದ ಸರ್ಕಾರಿ ನೌಕರರ ಸಂಘದಲ್ಲಿ ವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ.

mandya
ನಿವೇಶನ ಹಂಚಿಕೆಯಲ್ಲಿ ನಡೆದ ಅವ್ಯವಹಾರ

ಮಂಡ್ಯ: ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಬಹುದೊಡ್ಡ ಅವ್ಯವಹಾರ ಪ್ರಕರಣವನ್ನು ಮಂಡ್ಯ ಪೊಲೀಸರು ಬಯಲಿಗೆಳೆದಿದ್ದಾರೆ. ಗೋಲ್‌ಮಾಲ್ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ.

ಮಂಡ್ಯದ ಸರ್ಕಾರಿ ನೌಕರರ ಸಂಘವು ತಮ್ಮ ಸದಸ್ಯರಿಗೆ ನಿವೇಶನ ನೀಡುವ ಉದ್ದೇಶದಿಂದ 2004ರಲ್ಲಿ ಗೃಹ ನಿರ್ಮಾಣ ಸಮಿತಿ ರಚಿಸಿತ್ತು. ಆ ವೇಳೆ ಸಂಘದ ಅಧ್ಯಕ್ಷರಾಗಿದ್ದ ಟಿ.ಎಚ್.ರಾಮಕೃಷ್ಣ ಗೃಹ ನಿರ್ಮಾಣ ಸಮಿತಿಗೆ ಅಧ್ಯಕ್ಷರಾಗಿದ್ದರು. ಪ್ರತಿಯೊಬ್ಬ ಸದಸ್ಯರಿಂದಲೂ ಲಕ್ಷಾಂತರ ಹಣ ಕಟ್ಟಿಸಿಕೊಂಡು, ಕೋಣನಹಳ್ಳಿ ಬಳಿ ಜಮೀನು ಖರೀದಿಸಲಾಗಿತ್ತು. ಅಷ್ಟರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಲೇಔಟ್ ಉದ್ದೇಶಿದ ಜಾಗದಲ್ಲಿ 1,02,000 ಚದರ ಅಡಿ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಇದರಿಂದ ನೌಕರರಿಗೆ ನಿವೇಶನ ಹಂಚುವ ಕಾರ್ಯಕ್ಕೆ ಗ್ರಹಣ ಹಿಡಿದಿತ್ತು. ಆದ್ರೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ 11,36,42.375 ರೂ. ಪರಿಹಾರ ಘೋಷಿಸಿತ್ತು.

ಈ ನಡುವೆ ಸರ್ಕಾರಿ ನೌಕರರ ಸಂಘಕ್ಕೆ ಮತ್ತೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದರೂ ಸಹ ಗೃಹ ನಿರ್ಮಾಣ ಸಮಿತಿಯ ಲೆಕ್ಕಪತ್ರ, ದಾಖಲೆಗಳನ್ನು ಟಿ.ಎಚ್.ರಾಮಕೃಷ್ಣ ಹಸ್ತಾಂತರಿಸಿರಲಿಲ್ಲ. ಎಲ್ಲಾ ದಾಖಲಾತಿಗಳನ್ನು ಬಳಸಿಕೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಹೊಸ ಖಾತೆ ತೆರೆದು 11,36,42.375 ರೂ. ಪರಿಹಾರದ ಹಣವನ್ನು ಜಮೆ ಮಾಡಿಸಿಕೊಂಡಿದ್ದಾರೆ.

ನಿವೇಶನ ಹಂಚಿಕೆಯಲ್ಲಿ ನಡೆದ ಅವ್ಯವಹಾರ

ನಂತರ ವೈಯಕ್ತಿಕ ಖಾತೆಗೆ 1ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಕೊಂಡು ಫಲಾನುಭವಿಗೆ ತಲುಪಬೇಕಿದ್ದ ಹಣವನ್ನು ಗೋಲ್​ಮಾಲ್ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘ ನೀಡಿದ್ದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದಲ್ಲಿ 1ಕೋಟಿ 22ಲಕ್ಷ ವಶಪಡಿಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 9ಕೋಟಿ ಹಣವನ್ನ ತಡೆಹಿಡಿಯುವಂತೆ ಮಾಡಿದ್ದಾರೆ.

ಇನ್ನು 16 ವರ್ಷದ ಹಿಂದೆಯೇ ಹಣ ಕಟ್ಟಿ ಇತ್ತ ಸೈಟೂ ಇಲ್ಲ, ಅತ್ತ ಹಣವೂ ಇಲ್ಲ ಅಂತಿದ್ದ ಸದಸ್ಯರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಶಂಭೂಗೌಡ ಇನ್ನು ಹೆಚ್ಚಿನ ಹಣ ರಿಕವರಿ ಆಗಬೇಕು ಎಂದಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಬಹುದೊಡ್ಡ ಅವ್ಯವಹಾರ ಪ್ರಕರಣ ಬಯಲಾಗಿದ್ದು, ಸದ್ಯ ತನಿಖೆ ಹಂತದಲ್ಲಿರುವ ಈ ಕೇಸ್‌ನಲ್ಲಿ ಮತ್ತಷ್ಟು ವಿಚಾರ ಬಹಿರಂಗವಾಗಬೇಕಿದೆ.

ಮಂಡ್ಯ: ಸಂಘದ ಸದಸ್ಯರಿಗೆ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಬಹುದೊಡ್ಡ ಅವ್ಯವಹಾರ ಪ್ರಕರಣವನ್ನು ಮಂಡ್ಯ ಪೊಲೀಸರು ಬಯಲಿಗೆಳೆದಿದ್ದಾರೆ. ಗೋಲ್‌ಮಾಲ್ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ.

ಮಂಡ್ಯದ ಸರ್ಕಾರಿ ನೌಕರರ ಸಂಘವು ತಮ್ಮ ಸದಸ್ಯರಿಗೆ ನಿವೇಶನ ನೀಡುವ ಉದ್ದೇಶದಿಂದ 2004ರಲ್ಲಿ ಗೃಹ ನಿರ್ಮಾಣ ಸಮಿತಿ ರಚಿಸಿತ್ತು. ಆ ವೇಳೆ ಸಂಘದ ಅಧ್ಯಕ್ಷರಾಗಿದ್ದ ಟಿ.ಎಚ್.ರಾಮಕೃಷ್ಣ ಗೃಹ ನಿರ್ಮಾಣ ಸಮಿತಿಗೆ ಅಧ್ಯಕ್ಷರಾಗಿದ್ದರು. ಪ್ರತಿಯೊಬ್ಬ ಸದಸ್ಯರಿಂದಲೂ ಲಕ್ಷಾಂತರ ಹಣ ಕಟ್ಟಿಸಿಕೊಂಡು, ಕೋಣನಹಳ್ಳಿ ಬಳಿ ಜಮೀನು ಖರೀದಿಸಲಾಗಿತ್ತು. ಅಷ್ಟರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಲೇಔಟ್ ಉದ್ದೇಶಿದ ಜಾಗದಲ್ಲಿ 1,02,000 ಚದರ ಅಡಿ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಇದರಿಂದ ನೌಕರರಿಗೆ ನಿವೇಶನ ಹಂಚುವ ಕಾರ್ಯಕ್ಕೆ ಗ್ರಹಣ ಹಿಡಿದಿತ್ತು. ಆದ್ರೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ 11,36,42.375 ರೂ. ಪರಿಹಾರ ಘೋಷಿಸಿತ್ತು.

ಈ ನಡುವೆ ಸರ್ಕಾರಿ ನೌಕರರ ಸಂಘಕ್ಕೆ ಮತ್ತೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದರೂ ಸಹ ಗೃಹ ನಿರ್ಮಾಣ ಸಮಿತಿಯ ಲೆಕ್ಕಪತ್ರ, ದಾಖಲೆಗಳನ್ನು ಟಿ.ಎಚ್.ರಾಮಕೃಷ್ಣ ಹಸ್ತಾಂತರಿಸಿರಲಿಲ್ಲ. ಎಲ್ಲಾ ದಾಖಲಾತಿಗಳನ್ನು ಬಳಸಿಕೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಹೊಸ ಖಾತೆ ತೆರೆದು 11,36,42.375 ರೂ. ಪರಿಹಾರದ ಹಣವನ್ನು ಜಮೆ ಮಾಡಿಸಿಕೊಂಡಿದ್ದಾರೆ.

ನಿವೇಶನ ಹಂಚಿಕೆಯಲ್ಲಿ ನಡೆದ ಅವ್ಯವಹಾರ

ನಂತರ ವೈಯಕ್ತಿಕ ಖಾತೆಗೆ 1ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಕೊಂಡು ಫಲಾನುಭವಿಗೆ ತಲುಪಬೇಕಿದ್ದ ಹಣವನ್ನು ಗೋಲ್​ಮಾಲ್ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘ ನೀಡಿದ್ದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದಲ್ಲಿ 1ಕೋಟಿ 22ಲಕ್ಷ ವಶಪಡಿಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 9ಕೋಟಿ ಹಣವನ್ನ ತಡೆಹಿಡಿಯುವಂತೆ ಮಾಡಿದ್ದಾರೆ.

ಇನ್ನು 16 ವರ್ಷದ ಹಿಂದೆಯೇ ಹಣ ಕಟ್ಟಿ ಇತ್ತ ಸೈಟೂ ಇಲ್ಲ, ಅತ್ತ ಹಣವೂ ಇಲ್ಲ ಅಂತಿದ್ದ ಸದಸ್ಯರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಶಂಭೂಗೌಡ ಇನ್ನು ಹೆಚ್ಚಿನ ಹಣ ರಿಕವರಿ ಆಗಬೇಕು ಎಂದಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಬಹುದೊಡ್ಡ ಅವ್ಯವಹಾರ ಪ್ರಕರಣ ಬಯಲಾಗಿದ್ದು, ಸದ್ಯ ತನಿಖೆ ಹಂತದಲ್ಲಿರುವ ಈ ಕೇಸ್‌ನಲ್ಲಿ ಮತ್ತಷ್ಟು ವಿಚಾರ ಬಹಿರಂಗವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.