ETV Bharat / state

ನಿವೃತ್ತಿಯಾಗಿ ತವರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ ಕೋರಿದ ಮಂಡ್ಯ ಜನತೆ - ಡಿ.ಕೆ. ಸತೀಶ್​ ಎಂಬ ನಿವೃತ್ತ ಯೋಧ

ತಾಲೂಕಿನ  ಕೊತ್ತತ್ತಿ ಗ್ರಾಮದ ಡಿ.ಕೆ.ಸತೀಶ್ ಎಂಬ ಯೋಧ ಸುಮಾರು  20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸಿದರು. ವಿಚಾರ ತಿಳಿದ ಜನತೆ ನಿವೃತ್ತ ಯೋಧ ಸತೀಶ್​ರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ  ಬರಮಾಡಿಕೊಂಡರು.

retired soldier
author img

By

Published : Nov 2, 2019, 9:49 PM IST

ಮಂಡ್ಯ: ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ತವರಿಗೆ ಮರಳಿದ ಡಿ.ಕೆ.ಸತೀಶ್​ ಎಂಬ ನಿವೃತ್ತ ಯೋಧನಿಗೆ ಸಕ್ಕರೆ ನಗರಿಯ ಜನತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧನಿಗೆ ಅದ್ದೂರಿ ಸ್ವಾಗತ

ತಾಲೂಕಿನ ಕೊತ್ತತ್ತಿ ಗ್ರಾಮದ ಡಿ.ಕೆ.ಸತೀಶ್ ಎಂಬ ಯೋಧ ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸಿದರು. ವಿಚಾರ ತಿಳಿದ ಜನತೆ ನಿವೃತ್ತ ಯೋಧ ಸತೀಶ್​ರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳಿಕ ನಾಗರಿಕರ ವೇದಿಕೆ ವತಿಯಿಂದ ಬೆಳ್ಳಿ ರಥದಲ್ಲಿ ನಿವೃತ್ತ ಯೋಧ ಸತೀಶ್​ರನ್ನು ಸುಮಾರು ಕಿಲೋ ಮೀಟರ್​ವರೆಗೂ ಮೆರವಣಿಗೆ ಮಾಡಿದ್ದು, ವಿವೇಕಾನಂದ ರಸ್ತೆ, ಅಂಬೇಡ್ಕರ್ ರಸ್ತೆ, ಬನ್ನೂರು ರಸ್ತೆ ಮೂಲಕ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು. ದಾರಿಯದ್ದಕ್ಕೂ ನಾಗರಿಕರು ಸತೀಶರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತ ಸೈನಿಕನಿಗೆ ಗೌರವ ಸಲ್ಲಿಸಿದರು.

ಮಂಡ್ಯ: ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ತವರಿಗೆ ಮರಳಿದ ಡಿ.ಕೆ.ಸತೀಶ್​ ಎಂಬ ನಿವೃತ್ತ ಯೋಧನಿಗೆ ಸಕ್ಕರೆ ನಗರಿಯ ಜನತೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧನಿಗೆ ಅದ್ದೂರಿ ಸ್ವಾಗತ

ತಾಲೂಕಿನ ಕೊತ್ತತ್ತಿ ಗ್ರಾಮದ ಡಿ.ಕೆ.ಸತೀಶ್ ಎಂಬ ಯೋಧ ಸುಮಾರು 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸಿದರು. ವಿಚಾರ ತಿಳಿದ ಜನತೆ ನಿವೃತ್ತ ಯೋಧ ಸತೀಶ್​ರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.

ಬಳಿಕ ನಾಗರಿಕರ ವೇದಿಕೆ ವತಿಯಿಂದ ಬೆಳ್ಳಿ ರಥದಲ್ಲಿ ನಿವೃತ್ತ ಯೋಧ ಸತೀಶ್​ರನ್ನು ಸುಮಾರು ಕಿಲೋ ಮೀಟರ್​ವರೆಗೂ ಮೆರವಣಿಗೆ ಮಾಡಿದ್ದು, ವಿವೇಕಾನಂದ ರಸ್ತೆ, ಅಂಬೇಡ್ಕರ್ ರಸ್ತೆ, ಬನ್ನೂರು ರಸ್ತೆ ಮೂಲಕ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು. ದಾರಿಯದ್ದಕ್ಕೂ ನಾಗರಿಕರು ಸತೀಶರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸುವ ಮೂಲಕ ನಿವೃತ್ತ ಸೈನಿಕನಿಗೆ ಗೌರವ ಸಲ್ಲಿಸಿದರು.

Intro:ಮಂಡ್ಯ: ಗಡಿ ಕಾಯುವ ಸೈನಿಕರು ನಮಗೆ ದೇವರ ಸಮಾನ. ಹೀಗಾಗಿ ಸೈನಿಕರನ್ನು ದೇವರಾಗಿ ನೋಡುವ ದೊಡ್ಡ ಮನಸ್ಸುಗಳು ಬೆಳೆಯುತ್ತಿವೆ. ಇಂದು ಸಕ್ಕರೆ ನಗರಿಯಲ್ಲಿ ನಿವೃತ್ತ ಸೈನಿಕರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಮಂಡ್ಯದ ಪ್ರಮುಖ ನಗರದಲ್ಲಿ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಸ್ವಾಗತ ಕೋರಲಾಯಿತು.
ಮಂಡ್ಯ ತಾಲ್ಲೂಕು ಕೊತ್ತತ್ತಿ ಗ್ರಾಮದ ಡಿ.ಕೆ. ಸತೀಶ್ 20 ವರ್ಷಗಳ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿ ಇಂದು ತವರಿಗೆ ಆಗಮಿಸುತ್ತಿದ್ದರು. ವಿಚಾರ ತಿಳಿದ ಮಂಡ್ಯದ ನಾಗರೀಕರು ನಿವೃತ್ತ ಯೋಧ ಸತೀಶ್ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.
ಮಂಡ್ಯ ನಾಗರೀಕರ ವೇದಿಕೆ ವತಿಯಿಂದ ರೈಲ್ವೆ ನಿಲ್ದಾಣದಲ್ಲಿ ಹಾರ ಹಾಕಿ ಸ್ವಾಗತಿಸಿದ ನಾಗರೀಕರು ನಂತರ ಬೆಳ್ಳಿ ರಥದಲ್ಲಿ ಸುಮಾರು ಕಿಲೋ ಮೀಟರ್ ವರೆಗೂ ಮೆರವಣಿಗೆ ಮಾಡಿದರು. ದಾರಿಯುದ್ದಕ್ಕೂ ನಾಗರೀಕರು ನಿವೃತ್ತ ಸೈನಿಕರಿಗೆ ಅದ್ಧೂರಿ ಸ್ವಾಗತ ಕೋರಿದರು.
ನಿವೃತ್ತ ಸೈನಿಕನ ಮೆರವಣಿಗೆ ವಿವೇಕಾನಂದ ರಸ್ತೆ, ಅಂಬೇಡ್ಕರ್ ರಸ್ತೆ, ಬನ್ನೂರು ರಸ್ತೆ ಮೂಲಕ ಸ್ವ ಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು. ದಾರಿಯದ್ದಕ್ಕೂ ನಾಗರೀಕರು ಹೂವಿನ ಹಾರವನ್ನು ಹಾಕಿ ಸನ್ಮಾನಿಸಿ ಅಭಿನಂದಿಸಿರು. ಆ ಮೂಲಕ ನಿವೃತ್ತ ಸೈನಿಕನಿಗೆ ಗೌರವ ಸಲ್ಲಿಸಿದರು.
Body:yathisha babu k hConclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.