ಮಂಡ್ಯ: ಪೊಲೀಸರ ಸಹಕಾರವಿಲ್ಲದೆ ಡ್ರಗ್ಸ್ ದಂಧೆ ನಡೆಯುವುದಿಲ್ಲ. ಪ್ರತಿ ತಾಲ್ಲೂಕು, ಜಿಲ್ಲಾಮಟ್ಟ, ಹಳ್ಳಿ-ಹಳ್ಳಿಗೂ ಕೂಡ ಡ್ರಗ್ ವಿತರಣೆಯಾಗುತ್ತಿದೆ ಎಂದು ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಮಾಧ್ಯಮದಲ್ಲಿ ಡ್ರಗ್ ದಂಧೆ ಬಗ್ಗೆ ನೋಡುತ್ತಿದ್ದೇನೆ. ಅದರಲ್ಲಿ ಬರಿ ಸಿನಿಮಾ ತಾರೆಯರು, ರಾಜಕಾರಣಿಗಳ ಬಗ್ಗೆ ಮಾತ್ರ ಬರುತ್ತಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಇಂತಹ ದೊಡ್ಡ-ದೊಡ್ಡ ನಗರಗಳಲ್ಲಿ ಮಾತ್ರ ಡ್ರಗ್ ದಂಧೆ ನಡೆಯುತ್ತಿದೆಯಾ. ಇವಾಗ ಮದ್ದೂರು, ಮಂಡ್ಯದಲ್ಲಿಲ್ವಾ? ಡ್ರಗ್ ಮಾಫಿಯಾ ಹಳ್ಳಿ-ಹಳ್ಳಿಯಲ್ಲಿದೆ ಎಂದಿದ್ದಾರೆ.
ಒಂದೆಡೆ ಪೊಲೀಸರನ್ನು ಕೊರೊನಾ ಸಮಯದಲ್ಲಿ ವಾರಿಯರ್ಸ್ ಅಂತ ಸನ್ಮಾನ ಮಾಡಿದ್ದೇವೆ. ಜನತೆ ಅವರಿಗೆ ಹೂಮಳೆ ಸುರಿದು ಗೌರವಿಸಿದ್ದಾರೆ. ಅದೇ ನಾಣ್ಯದ ಪೊಲೀಸರ ಇನ್ನೊಂದು ಮುಖ ಯಾರಿಗೂ ಗೊತ್ತಿಲ್ಲ. ಇಡೀ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿ. ಒಳ್ಳೆಯ ಕೆಲಸ ಮಾಡಿದವರನ್ನು ಹೊಗಳುತ್ತೇವೆ. ಪೊಲೀಸರ ಸಹಕಾರವಿಲ್ಲದೆ ಡ್ರಗ್ ದಂಧೆ ನಡೆಯುವುದಿಲ್ಲ.
ಪ್ರತಿ ತಾಲ್ಲೂಕು, ಜಿಲ್ಲಾಮಟ್ಟ, ಹಳ್ಳಿ-ಹಳ್ಳಿಗೂ ಕೂಡ ಡ್ರಗ್ ವಿತರಣೆಯಾಗುತ್ತಿದೆ. ಇಂತಹ ಕೊಂಡಿಯನ್ನು ಭೇದಿಸಿ. ಜನರನ್ನು ದಾರಿತಪ್ಪಿಸುವ ಸಲುವಾಗಿ ಸಿನಿಮಾ ತಾರೆಯರು, ರಾಜಕಾರಣಿಗಳು ಅಂತ ದಾರಿ ತಪ್ಪಿಸಬೇಡಿ ಎಂದು ಮನವಿ ಮಾಡಿದರು.