ETV Bharat / state

ಅಜ್ಜಿ ಮೃತಪಟ್ಟಿದ್ದಾರೆ, ಅಮ್ಮ ಹಾಸಿಗೆ ಹಿಡಿದಿದ್ದಾರೆ: ಮಗಳು ನಿರ್ದೇಶಕನ ಜೊತೆ ಸೆಟ್‌ನಿಂದಲೇ ಪರಾರಿ!

'ತುಂಗಾಭದ್ರಾ' ಸಿನಿಮಾ ನಿರ್ದೇಶಕನೊಂದಿಗೆ ಅದೇ ಚಿತ್ರದ ನಟಿ ಲಕ್ಷ್ಮಿ ಅಲಿಯಾಸ್ ವಿಜಯಲಕ್ಷ್ಮಿ ಸೆಟ್​​ನಿಂದಲೇ ಪರಾರಿಯಾಗಿದ್ದಾರೆ.

author img

By

Published : Jan 8, 2020, 6:45 PM IST

Updated : Jan 8, 2020, 8:59 PM IST

ನಿರ್ದೇಶಕನ ಜೊತೆ ನಟಿ ಪರಾರಿ
ನಿರ್ದೇಶಕನ ಜೊತೆ ನಟಿ ಪರಾರಿ

ಮಂಡ್ಯ: 'ತುಂಗಾಭದ್ರಾ' ಸಿನಿಮಾ ನಿರ್ದೇಶಕನೊಂದಿಗೆ ಅದೇ ಚಿತ್ರದ ನಟಿ ಲಕ್ಷ್ಮಿ ಅಲಿಯಾಸ್ ವಿಜಯಲಕ್ಷ್ಮಿ ಸೆಟ್​​ನಿಂದಲೇ ಪರಾರಿಯಾಗಿದ್ದಾರೆ. ನಿರ್ದೇಶಕನ ಮೇಲೆ ಪೋಷಕರು ಆರೋಪ ಮಾಡುತ್ತಿದ್ದರೆ, ಚಿತ್ರ ನಿರ್ಮಾಪಕ ನನಗೆ ನಷ್ಟವಾಗುತ್ತಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ!

ರಾಯಚೂರಿನಲ್ಲಿ ತುಂಗಾಭದ್ರಾ ಸಿನಿಮಾ ಸೆಟ್ಟೇರಿತ್ತು. ಇತ್ತೀಚೆಗೆ ನಟಿಯ ಅಜ್ಜಿ ಮೃತಪಟ್ಟಿದ್ದಾರೆ. ತಾಯಿ ಹಾಸಿಗೆ ಹಿಡಿದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ನಟಿ ಇದ್ಯಾವುದನ್ನೂ ಲೆಕ್ಕಿಸದೆ ನಿರ್ದೇಶಕನ ಜೊತೆ ಸೆಟ್‌ನಿಂದಲೇ ಪರಾರಿಯಾಗಿದ್ದಾರೆ! ಅಜ್ಜಿ ಮೃತಪಟ್ಟರೂ, ಅವರ ಮುಖ ನೋಡಲೂ ಬರಲಿಲ್ಲ ಎಂದು ಪೋಷಕರು ಗೋಳಾಡುತ್ತಿದ್ದಾರೆ.

ನಟಿ ಪರಾರಿ

ನಟಿ ಪರಾರಿಯಾಗಿದ್ದು ನನಗೆ ತುಂಬಾ ನಷ್ಟವಾಗಿದೆ. ನೀವೇ ಹಣ ಕೊಡಬೇಕು ಎಂದು ನಿರ್ಮಾಪಕ, ನಟಿಯ ಪೋಷಕರ ಬೆನ್ನು ಬಿದ್ದಿದ್ದಾರೆ. ಆದರೆ ಪೋಷಕರು ಹೇಳುವ ಮಾತೇ ಬೇರೆಯಾಗಿದೆ. ಕಳೆದೊಂದು ವಾರದ ಹಿಂದೆ ನಿರ್ದೇಶಕರ ಜೊತೆ ಹೋಗಿದ್ದ ವಿಜಯಲಕ್ಷ್ಮಿ ಮತ್ತೆ ಮನೆಗೆ ಬಂದಿದ್ದಳು. ಆಗ ಆಕೆ ನನಗೆ ಏನಾಗಿದೆ ಅನ್ನೋದು ಗೊತ್ತಿಲ್ಲ ಎಂದು ಹೇಳುತ್ತಿದ್ದಳು. ಅಲ್ಲದೆ, ಗಂಗಾವತಿಯಲ್ಲಿ ರೂಮ್ ಮಾಡಿ ನಿರ್ದೇಶಕ ಆಂಜನಪ್ಪ ತಮ್ಮ ಮಗಳನ್ನು ಇರಿಸಿದ್ದರಂತೆ ಎಂದು ಪೋಷಕರು ಹೇಳುತ್ತಿದ್ದಾರೆ.

ಪ್ರೇಮ ಮಹಲ್, ಜವಾರಿ, ಲವ್​ ಸೇರಿದಂತೆ ಹಲವು ಚಿತ್ರಗಳಿಗೆ ಈ ಸಿನಿಮಾ ನಿರ್ಮಾಪಕ ಬಂಡವಾಳ ಹೂಡಿದ್ದರು. ಅವರಿಂದ ನಟಿ ವಿಜಯಲಕ್ಷ್ಮಿ ಮುಂಗಡವಾಗಿ ಹಣ ಪಡೆದುಕೊಂಡಿದ್ದರು. ಈಗ ನಿರ್ಮಾಪಕರು ಹಣ ನೀಡುವಂತೆ ವಿಜಯಲಕ್ಷ್ಮಿ ಪೋಷಕರನ್ನು ಕೇಳುತ್ತಿದ್ದಾರೆ. ಅತ್ತ ನಟಿಯ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿರ್ಮಾಪಕನ ಗೋಳಾಟಕ್ಕೆ ಬೇಸತ್ತು ಹೋಗಿದ್ದಾರೆ. ಇತ್ತ ನಿರ್ಮಾಪಕನೂ ಕಂಗಾಲಾಗಿ ಹೋಗಿದ್ದಾರೆ.

ನಟಿ, ನಿರ್ದೇಶಕರ ಲವ್ ಸ್ಟೋರಿ ಈಗ ಚನ್ನಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೋಷಕರು ತಮ್ಮ ಮಗಳು ಎಲ್ಲೇ ಇದ್ದರೂ ನಮ್ಮ ಜೊತೆ ಬರಲಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ನಟಿ ವಿಜಯಲಕ್ಷ್ಮಿ ಯಾವ ರೀತಿ ಉತ್ತರ ಕೊಡ್ತಾರೋ ಕಾದು ನೋಡಬೇಕಾಗಿದೆ.

ಮಂಡ್ಯ: 'ತುಂಗಾಭದ್ರಾ' ಸಿನಿಮಾ ನಿರ್ದೇಶಕನೊಂದಿಗೆ ಅದೇ ಚಿತ್ರದ ನಟಿ ಲಕ್ಷ್ಮಿ ಅಲಿಯಾಸ್ ವಿಜಯಲಕ್ಷ್ಮಿ ಸೆಟ್​​ನಿಂದಲೇ ಪರಾರಿಯಾಗಿದ್ದಾರೆ. ನಿರ್ದೇಶಕನ ಮೇಲೆ ಪೋಷಕರು ಆರೋಪ ಮಾಡುತ್ತಿದ್ದರೆ, ಚಿತ್ರ ನಿರ್ಮಾಪಕ ನನಗೆ ನಷ್ಟವಾಗುತ್ತಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ!

ರಾಯಚೂರಿನಲ್ಲಿ ತುಂಗಾಭದ್ರಾ ಸಿನಿಮಾ ಸೆಟ್ಟೇರಿತ್ತು. ಇತ್ತೀಚೆಗೆ ನಟಿಯ ಅಜ್ಜಿ ಮೃತಪಟ್ಟಿದ್ದಾರೆ. ತಾಯಿ ಹಾಸಿಗೆ ಹಿಡಿದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ನಟಿ ಇದ್ಯಾವುದನ್ನೂ ಲೆಕ್ಕಿಸದೆ ನಿರ್ದೇಶಕನ ಜೊತೆ ಸೆಟ್‌ನಿಂದಲೇ ಪರಾರಿಯಾಗಿದ್ದಾರೆ! ಅಜ್ಜಿ ಮೃತಪಟ್ಟರೂ, ಅವರ ಮುಖ ನೋಡಲೂ ಬರಲಿಲ್ಲ ಎಂದು ಪೋಷಕರು ಗೋಳಾಡುತ್ತಿದ್ದಾರೆ.

ನಟಿ ಪರಾರಿ

ನಟಿ ಪರಾರಿಯಾಗಿದ್ದು ನನಗೆ ತುಂಬಾ ನಷ್ಟವಾಗಿದೆ. ನೀವೇ ಹಣ ಕೊಡಬೇಕು ಎಂದು ನಿರ್ಮಾಪಕ, ನಟಿಯ ಪೋಷಕರ ಬೆನ್ನು ಬಿದ್ದಿದ್ದಾರೆ. ಆದರೆ ಪೋಷಕರು ಹೇಳುವ ಮಾತೇ ಬೇರೆಯಾಗಿದೆ. ಕಳೆದೊಂದು ವಾರದ ಹಿಂದೆ ನಿರ್ದೇಶಕರ ಜೊತೆ ಹೋಗಿದ್ದ ವಿಜಯಲಕ್ಷ್ಮಿ ಮತ್ತೆ ಮನೆಗೆ ಬಂದಿದ್ದಳು. ಆಗ ಆಕೆ ನನಗೆ ಏನಾಗಿದೆ ಅನ್ನೋದು ಗೊತ್ತಿಲ್ಲ ಎಂದು ಹೇಳುತ್ತಿದ್ದಳು. ಅಲ್ಲದೆ, ಗಂಗಾವತಿಯಲ್ಲಿ ರೂಮ್ ಮಾಡಿ ನಿರ್ದೇಶಕ ಆಂಜನಪ್ಪ ತಮ್ಮ ಮಗಳನ್ನು ಇರಿಸಿದ್ದರಂತೆ ಎಂದು ಪೋಷಕರು ಹೇಳುತ್ತಿದ್ದಾರೆ.

ಪ್ರೇಮ ಮಹಲ್, ಜವಾರಿ, ಲವ್​ ಸೇರಿದಂತೆ ಹಲವು ಚಿತ್ರಗಳಿಗೆ ಈ ಸಿನಿಮಾ ನಿರ್ಮಾಪಕ ಬಂಡವಾಳ ಹೂಡಿದ್ದರು. ಅವರಿಂದ ನಟಿ ವಿಜಯಲಕ್ಷ್ಮಿ ಮುಂಗಡವಾಗಿ ಹಣ ಪಡೆದುಕೊಂಡಿದ್ದರು. ಈಗ ನಿರ್ಮಾಪಕರು ಹಣ ನೀಡುವಂತೆ ವಿಜಯಲಕ್ಷ್ಮಿ ಪೋಷಕರನ್ನು ಕೇಳುತ್ತಿದ್ದಾರೆ. ಅತ್ತ ನಟಿಯ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿರ್ಮಾಪಕನ ಗೋಳಾಟಕ್ಕೆ ಬೇಸತ್ತು ಹೋಗಿದ್ದಾರೆ. ಇತ್ತ ನಿರ್ಮಾಪಕನೂ ಕಂಗಾಲಾಗಿ ಹೋಗಿದ್ದಾರೆ.

ನಟಿ, ನಿರ್ದೇಶಕರ ಲವ್ ಸ್ಟೋರಿ ಈಗ ಚನ್ನಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೋಷಕರು ತಮ್ಮ ಮಗಳು ಎಲ್ಲೇ ಇದ್ದರೂ ನಮ್ಮ ಜೊತೆ ಬರಲಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ನಟಿ ವಿಜಯಲಕ್ಷ್ಮಿ ಯಾವ ರೀತಿ ಉತ್ತರ ಕೊಡ್ತಾರೋ ಕಾದು ನೋಡಬೇಕಾಗಿದೆ.

Intro:ಮಂಡ್ಯ: ನಿರ್ದೇಶಕನೊಂದಿಗೆ ನಟಿ ಪರಾರಿಯಾದ ಘಟನೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೋಷಕರು ಈಗ ನಿರ್ದೇಶಕನ ಮೇಲೆ ಆರೋಪ ಮಾಡುತ್ತಿದ್ದರೆ, ಚಿತ್ರ ನಿರ್ಮಾಪಕ ನನಗೆ ನಷ್ಟವಾಗುತ್ತಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾನೆ. ಹಾಗಾದ್ರೆ ಯಾರು ಆ ನಟಿ ಅನ್ನೋದನನ್ನ ನೀವೇ ನೋಡಿ.
ರಾಯಚೂರಿನಲ್ಲಿ ತುಂಗಾಭದ್ರಾ ಸಿನಿಮಾ ಸೆಟ್ಟೇರಿತ್ತು. ಅದರ ನಿರ್ದೇಶಕರಾಗಿದ್ದವರು ಆಂಜನಪ್ಪ, ನಟಿಯಾಗಿದ್ದು ಮಂಡ್ಯ ಲಕ್ಷ್ಮಿ ಆಲಿಯಾಸ್ ವಿಜಯಲಕ್ಷ್ಮಿ. ಇವರೇ ಈಗ ಚಿತ್ರ ಮುಗಿಯದೇ ಇದ್ದರೂ ಸೆಟ್ ನಿಂದ ಪರಾರಿಯಾಗಿರುವ ಜೋಡಿಯಾಗಿದ್ದಾರೆ. ನಟಿ ಮಂಡ್ಯ ಲಕ್ಷ್ಮಿ ಅಜ್ಜಿ ಮೃತಪಟ್ಟಿದ್ದಾರೆ, ತಾಯಿ ಹಾಸಿಗೆ ಹಿಡಿದು ಮಂಡ್ಯದ ಮಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಆದರೂ ನಟಿ ಇದ್ಯಾವುದನ್ನು ಲೆಕ್ಕಿಸದೆ ಪರಾರಿಯಾಗಿದ್ದಾಳೆ. ಅಜ್ಜಿ ಮೃತಪಟ್ಟರೂ ಮುಖ ನೋಡಲು ಬರಲಿಲ್ಲ ಎಂದು ಪೋಷಕರು ಗೋಳಾಡುತ್ತಿದ್ದಾರೆ.
ಬೈಟ್: ಪೋಷಕರು.
ಇನ್ನು ಚಿತ್ರ ನಿರ್ಮಾಪಕರೊಬ್ಬರು ನನಗೆ ನಷ್ಟವಾಗಿದೆ ಎಂದು ಮಂಡ್ಯ ಲಕ್ಷ್ಮಿ ಪೋಷಕರು ಬೆನ್ನು ಬಿದಿದ್ದಿದ್ದಾರೆ. ಆದರೆ ಪೋಷಕರು ಹೇಳುವ ಮಾತೇ ಬೇರೆಯಾಗಿದೆ. ಕಳೆದ ಒಂದು ವಾರದ ಹಿಂದೆ ಆಂಜನಪ್ಪ ಜೊತೆ ಹೋಗಿದ್ದ ಮಂಡ್ಯ ಲಕ್ಷ್ಮಿ ಮತ್ತೆ ಮನೆಗೆ ಬಂದಿದ್ದಳು. ಆಗ ನನಗೆ ಏನು ಆಗಿದೆ ಅನ್ನೋದೋ ಗೊತ್ತಿಲ್ಲ ಎಂದು ಹೇಳುತ್ತಿದ್ದಳು. ಅಲ್ಲದೆ ಗಂಗಾವತಿಯಲ್ಲಿ ರೂಮ್ ಮಾಡಿ ಆಂಜನಪ್ಪ ಇರಿಸಿದ್ದರಂತೆ ಅಂತ ಹೇಳ್ತಾ ಇದ್ದಾರೆ.
ಬೈಟ್: ಪೋಷಕರು.
ಇತ್ತ ಪ್ರೇಮ ಮಹಲ್, ಜವಾರಿ ಲವ್ ಸೇರಿದಂತೆ ಹಲವು ಚಿತ್ರಗಳ ನಿರ್ಮಾಪಕರಿಂದ ವಿಜಯಲಕ್ಷ್ಮಿ ಆಲಿಯಾಸ್ ಮಂಡ್ಯ ಲಕ್ಷ್ಮಿ ಅಡ್ವಾಂಸ್ ಪಡೆದುಕೊಂಡಿದ್ದರು. ಈಗ ಈ ನಿರ್ಮಾಪಕರು ವಿಜಯಲಕ್ಷ್ಮಿ ಪೋಷಕರು ಬೆನ್ನು ಬಿದ್ದಿದ್ದಾರೆ. ಅತ್ತ ಮಗಳೂ ಇಲ್ಲ ಇತ್ತ ನಿರ್ಮಾಪಕರಿಗೂ ನಟಿ ಇಲ್ಲದೆ ಇಬ್ಬರೂ ಕಂಗಾಲಾಗಿದ್ದಾರೆ.
ಬೈಟ್; ನಿರ್ಮಾಪಕ.
ನಟಿ, ನಿರ್ದೇಶಕರ ಲವ್ ಸ್ಟೋರಿ ಈಗ ಚನ್ನಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೋಷಕರು ತಮ್ಮ ಮಗಳು ಎಲ್ಲೇ ಇದ್ದರು ನಮ್ಮ ಜೊತೆ ಬರಲಿ ಎಂದು ಕಣ್ಣೀೊರು ಹಾಕುತ್ತಿದ್ದಾರೆ. ಇದಕ್ಕೆ ನಟಿ ವಿಜಯಲಕ್ಷ್ಮಿ ಯಾವ ರೀತಿ ಉತ್ತರ ಕೊಡ್ತಾರೋ ಕಾದು ನೋಡಬೇಕಾಗಿದೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
Last Updated : Jan 8, 2020, 8:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.