ETV Bharat / state

ಮಂಡ್ಯ ಚುನಾವಣಾ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ... ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​

author img

By

Published : Oct 4, 2019, 4:57 AM IST

ಜೆಡಿಎಸ್​ ಭದ್ರಕೋಟೆಯಲ್ಲಿ ಬಿಎಸ್​ವೈ ಪುತ್ರ ವಿಜಯೇಂದ್ರ ಪ್ರಚಾರ. ಕೆ.ಆರ್​.ಪೇಟೆ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದ ಸಿಎಂ ಪುತ್ರ.

ಮಂಡ್ಯ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ..ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​


ಮಂಡ್ಯ: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್​ ಭದ್ರಕೋಟೆಯಾಗಿರುವ ಕೆ.ಆರ್.ಪೇಟೆ ಪ್ರಚಾರ ಅಖಾಡಕ್ಕೆ ಬಿಎಸ್​ವೈ ಪುತ್ರ ವಿಜಯೇಂದ್ರ ಇಳಿದಿದ್ದಾರೆ.

ಮಂಡ್ಯ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ..ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​

ಕೆ.ಆರ್​.ಪೇಟೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಒಕ್ಕಲಿಗ ವಿರೋಧಿಯಲ್ಲ, ಒಕ್ಕಲಿಗರನ್ನೇ ಸಿಎಂ ಮಾಡಿದವರು. ನಾನು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಗಲ್ಲ ಅನ್ನೋ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕುವ ಸುಳಿವು ನೀಡಿದ್ದಾರೆ.

ಕಾರ್ಯಕರ್ತರ ಸಮಾವೇಶ ಬಳಿಕ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆಸಿ, ಮಂಡ್ಯದಲ್ಲಿ ಪಕ್ಷ ಬಲಪಡಿಸಲು ಮಾಸ್ಟರ್​ ಪ್ಲಾನ್​ ರೂಪಿಸಿದ್ದಾರೆ.


ಮಂಡ್ಯ: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್​ ಭದ್ರಕೋಟೆಯಾಗಿರುವ ಕೆ.ಆರ್.ಪೇಟೆ ಪ್ರಚಾರ ಅಖಾಡಕ್ಕೆ ಬಿಎಸ್​ವೈ ಪುತ್ರ ವಿಜಯೇಂದ್ರ ಇಳಿದಿದ್ದಾರೆ.

ಮಂಡ್ಯ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ..ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​

ಕೆ.ಆರ್​.ಪೇಟೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಒಕ್ಕಲಿಗ ವಿರೋಧಿಯಲ್ಲ, ಒಕ್ಕಲಿಗರನ್ನೇ ಸಿಎಂ ಮಾಡಿದವರು. ನಾನು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಗಲ್ಲ ಅನ್ನೋ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕುವ ಸುಳಿವು ನೀಡಿದ್ದಾರೆ.

ಕಾರ್ಯಕರ್ತರ ಸಮಾವೇಶ ಬಳಿಕ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆಸಿ, ಮಂಡ್ಯದಲ್ಲಿ ಪಕ್ಷ ಬಲಪಡಿಸಲು ಮಾಸ್ಟರ್​ ಪ್ಲಾನ್​ ರೂಪಿಸಿದ್ದಾರೆ.

Intro:ಮಂಡ್ಯ: ಜಿಲ್ಲೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮೆಗಾ ಪ್ಲಾನ್ ರೂಪಿಸಿದೆ. ಅದರ ನೇತೃತ್ವವನ್ನು ಸಿಎಂ ಪುತ್ರ ವಿಜಯೇಂದ್ರ ವಹಿಸಿದ್ದಾರಂತೆ. ಉಪ ಚುನಾವಣೆಯಲ್ಲಿ ‌ಸೂಕ್ತ ಅಭ್ಯರ್ಥಿ ಹಾಕಿ ಗೆಲುವಿನ ರಣತಂತ್ರಕ್ಕೆ ಮುಂದಾಗಿದ್ದಾರೆ ಬಿಜೆಪಿ ನಾಯಕರು. ಈ ಚುನಾವಣೆಯಲ್ಲಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದ್ದಾರೆ. ಹಾಗಾದರೆ ಅದು ಹೇಗೆ ಅನ್ನೋದನ್ನ ನೀವೇ ನೋಡಿ.

ಉಪ ಚುನಾವಣೆ ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಕಣವಾಗಿದೆ. ನೆಲೆ ಇಲ್ಲದ ಜಿಲ್ಲೆಯಲ್ಲಿ ಕಮಲ ಅರಳಿಸಲು ಪ್ಲಾನ್ ಮಾಡಲಾಗಿದ್ದು, ಖುದ್ದು ಸಿಎಂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯ ಬಿಜೆಪಿಗೆ ಶಕ್ತಿ ತುಂಬಲು ಯಡಿಯೂರಪ್ಪ ಪುತ್ರ ವಿಜಯೇಂದ್ರ ಅಖಾಡಕ್ಕೆ ಧುಮುಕಿದ್ದಾರೆ. ಅಲ್ಲದೆ ಒಕ್ಕಲಿಗ ಟ್ರಂಪ್ ಕಾರ್ಡ್ ಉರುಳಿಸಿದ್ದಾರೆ. ಯಡಿಯೂರಪ್ಪ ಒಕ್ಕಲಿಗ ವಿರೋಧಿಯಲ್ಲ, ಒಕ್ಕಲಿಗರನ್ನೇ ಸಿಎಂ ಮಾಡಿದವರು ಎಂಬ ಅಝೆಂಡ ಇಟ್ಟುಕೊಂಡು ಕಣಕ್ಕೆ ಧುಮುಕಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿನ ವಿಜಯೇಂದ್ರ ಭಾಷಣವೇ ಸಾಕ್ಷಿಯಾಗಿದೆ.

ಬೈಟ್: ವಿಜಯೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ನಾನು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಗಲ್ಲ ಅನ್ನೋ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕಿ ಅವರನ್ನೇ ಗೆಲ್ಲಿಸಲು ವಿಜಯೇಂದ್ರ ಮುಂದಾಗಿದ್ದಾರೆ. ಚುನಾವಣೆ ಸಿದ್ಧತೆಯ ಪರಿಶೀಲನೆಗೆ ಮುಂದಾಗಿದ್ದು, ಇಂದು ಕಾರ್ಯಕರ್ತರ ಸಮಾವೇಶ ನಡೆಸಿ ಶಕ್ತಿ ತುಂಬಲು ಮುಂದಾದರು. ಖಾಸಗಿ ಸಮುದಾಯ ಭವನದಲ್ಲಿ ಸಭೆ ಮಾಡಿ ಚುನಾವಣೆಯ ಪ್ಲಾನ್ ರೂಪಿಸಿದರು. ಉತ್ತಮ ಅಭ್ಯರ್ಥಿ ಹಾಕಿ ಅವ್ರನ್ನು ಗೆಲ್ಲಿಸ್ತೇವೆ ಎಂಬ ಮಾತಿನೊಂದಿಗೆ ಜೆಡಿಎಸ್‌ಗೆ ಪ್ರಬಲ ಸ್ಪರ್ಧಿ ಹಾಕಲು ಬಿಜೆಪಿ ಮುಂದಾಗಿದೆ.

ಬೈಟ್: ವಿಜಯೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.

ಮಂಡ್ಯ ಭಾಗದಲ್ಲಿ ಬಿಜೆಪಿಗೆ ಸಂಘಟನೆ ಕೊರತೆ ಇದೆ. ಹೀಗಾಗಿ ಖುದ್ದು ಸಿಎಂ ಪುತ್ರನೇ ಅಖಾಡಕ್ಕೆ ದುಮುಕಿದ್ದಾರೆ. ಯಡಿಯೂರಪ್ಪ ಪುತ್ರನ ಎಂಟ್ರಿಯಿಂದ ಚುನಾವಣಾ ಕಣ ಮತ್ತಷ್ಟು ರಂಗು ಪಡೆಯುವ ಸಾಧ್ಯತೆ ಇದೆ.Body:ಯತೀಶ್ ಬಾಬು, ಮಂಡ್ಯConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.