ಮಂಡ್ಯ : ಬಿಜೆಪಿ ಉಪಚುನಾವಣೆಯಲ್ಲಿ ದಾಳದ ಮೇಲೆ ದಾಳ ಉರುಳಿಸುತ್ತಿದೆ. ಮತ ಭೇಟೆಗಾಗಿ ಜಾತಿ ಸಮಾವೇಶ ನಡೆಸೋ ಮೂಲಕ ಪ್ರಚಾರವನ್ನು ಚುರುಕುಗೊಳಿಸಿದೆ. ನಗರದ ಸಮುದಾಯ ಭವನದಲ್ಲಿ ಮಡಿವಾಳರ ಸಮಾವೇಶ ನಡೆಸಿ ಮತಯಾಚನೆ ಮಾಡಲಾಯಿತು.
ಸಿಎಂ ಪುತ್ರ ವಿಜಯೇಂದ್ರ, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಸೇರಿದಂತೆ ಹಲವು ಮುಖಂಡರು ಮಡಿವಾಳರ ಸಮಾವೇಶ ನಡೆಸಿ ಪ್ರಚಾರ ಮಾಡಿದರು. ಕಳೆದ ಬಾರಿ ಯಡಿಯೂರಪ್ಪ ಕ್ಷೇತ್ರಕ್ಕೆ ನೀಡಿದ ಅನುದಾನದ ವಿವರಣೆ ನೀಡಿ. ಈಗಲೂ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಎಲ್ಲಾ ಮುಖಂಡರು ಮನವಿ ಮಾಡಿದರು.
ನಾರಾಯಣಗೌಡ ಪರ ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ದಲಿತರ ಸಮಾವೇಶ ಮಾಡಿ ಪ್ರಚಾರ ಮಾಡಲಾಗಿತ್ತು. ಇಂದು ಸಹ ಮತ್ತೊಂದು ಸಮುದಾಯದ ಸಮಾವೇಶ ನಡೆಯಲಿದೆ ಎಂದು ಹೇಳಲಾಗಿದೆ.