ETV Bharat / state

ಅನಧಿಕೃತವಾಗಿ ಪಂಪ್ ಆಪರೇಟರ್ ನೇಮಕ: ಪಿಡಿಒ ವೇತನ ಬಡ್ತಿ ತಡೆ ಹಿಡಿದ ಜಿಪಂ ಸಿಇಒ - PDO illegally apointed pump operator

ಅನಧಿಕೃತವಾಗಿ ಪಂಪ್​ ಆಪರೇಟರ್​ ನೇಮಕ ಮಾಡಿಕೊಂಡು ಅಕ್ರಮವೆಸಗಿದ ಪಿಡಿಒ ವಿರುದ್ಧ ಕೊಪ್ಪಳ ಜಿಲ್ಲಾ ಪಂಚಾಯತ್​ ಸಿಇಒ ಕ್ರಮ ಕೈಗೊಂಡಿದ್ದಾರೆ.

ZP CEO Holed PDO Salary increme
ಜಿಲ್ಲಾ ಪಂಚಾಯತ್ ಸಿಇಓ ರಘುನಂದನ್ ಮೂರ್ತಿ
author img

By

Published : Feb 25, 2021, 9:14 PM IST

ಕೊಪ್ಪಳ: ಅನಧಿಕೃತವಾಗಿ ಪಂಪ್ ಆಪರೇಟರ್ ನೇಮಕ ಮಾಡಿಕೊಂಡು ಹಣ ಗುಳುಂ ಮಾಡಿದ ಆರೋಪದ ಹಿನ್ನೆಲೆ ತಾಲೂಕಿನ ಹುಲಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಜ್ಜನರ್ ಪ್ರಕಾಶ್ ಅವರ 5 ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ, ಹುಲಗಿ ಗ್ರಾಮ ಪಂಚಾಯತ್​​ನಲ್ಲಿ ಕೆ.ಎಂ.ಸೋಮಯ್ಯ ಎಂಬುವರನ್ನು ಅನಧಿಕೃತವಾಗಿ ಪಿಡಿಒ ಸಜ್ಜನರ್ ಪ್ರಕಾಶ್​​ ನೇಮಕಾತಿ ಮಾಡಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಂಡು ಹಣ ಲಪಟಾಯಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ದೂರಿನ ಆಧಾರದಲ್ಲಿ ತಾಲೂಕು ಪಂಚಾಯತ್​​ ಇಒ ಪರಿಶೀಲನೆ ನಡೆಸಿದಾಗ ಆರೋಪ ಸಾಬೀತಾಗಿತ್ತು.

ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ

ಓದಿ : ಲಂಚ ಪಡೆಯುವ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ

ಈ ಹಿನ್ನೆಲೆ ಪಂಪ್ ಆಪರೇಟರ್​ಗೆ ಈವರೆಗೆ ಗ್ರಾಮ ಪಂಚಾಯತ್​ನಿಂದ ಪಾವತಿಸಲಾಗಿರುವ ಎಲ್ಲಾ ಹಣವನ್ನು ಪಿಡಿಒ ಸಜ್ಜನರ್ ಪ್ರಕಾಶರಿಂದ ವಸೂಲು ಮಾಡಿ ಸರ್ಕಾರಕ್ಕೆ ಜಮಾ‌ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಐದು ವರ್ಷದ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯಲಾಗಿದ್ದು, ಇಲಾಖೆ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಕೊಪ್ಪಳ: ಅನಧಿಕೃತವಾಗಿ ಪಂಪ್ ಆಪರೇಟರ್ ನೇಮಕ ಮಾಡಿಕೊಂಡು ಹಣ ಗುಳುಂ ಮಾಡಿದ ಆರೋಪದ ಹಿನ್ನೆಲೆ ತಾಲೂಕಿನ ಹುಲಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಜ್ಜನರ್ ಪ್ರಕಾಶ್ ಅವರ 5 ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ, ಹುಲಗಿ ಗ್ರಾಮ ಪಂಚಾಯತ್​​ನಲ್ಲಿ ಕೆ.ಎಂ.ಸೋಮಯ್ಯ ಎಂಬುವರನ್ನು ಅನಧಿಕೃತವಾಗಿ ಪಿಡಿಒ ಸಜ್ಜನರ್ ಪ್ರಕಾಶ್​​ ನೇಮಕಾತಿ ಮಾಡಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಂಡು ಹಣ ಲಪಟಾಯಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ದೂರಿನ ಆಧಾರದಲ್ಲಿ ತಾಲೂಕು ಪಂಚಾಯತ್​​ ಇಒ ಪರಿಶೀಲನೆ ನಡೆಸಿದಾಗ ಆರೋಪ ಸಾಬೀತಾಗಿತ್ತು.

ಜಿಲ್ಲಾ ಪಂಚಾಯತ್ ಸಿಇಒ ರಘುನಂದನ್ ಮೂರ್ತಿ

ಓದಿ : ಲಂಚ ಪಡೆಯುವ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗ್ರಾಮ ಲೆಕ್ಕಾಧಿಕಾರಿ

ಈ ಹಿನ್ನೆಲೆ ಪಂಪ್ ಆಪರೇಟರ್​ಗೆ ಈವರೆಗೆ ಗ್ರಾಮ ಪಂಚಾಯತ್​ನಿಂದ ಪಾವತಿಸಲಾಗಿರುವ ಎಲ್ಲಾ ಹಣವನ್ನು ಪಿಡಿಒ ಸಜ್ಜನರ್ ಪ್ರಕಾಶರಿಂದ ವಸೂಲು ಮಾಡಿ ಸರ್ಕಾರಕ್ಕೆ ಜಮಾ‌ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಐದು ವರ್ಷದ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯಲಾಗಿದ್ದು, ಇಲಾಖೆ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.