ETV Bharat / state

ಗಂಗಾವತಿ: ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ - ಗಂಗಾವತಿಯಲ್ಲಿ ಕಾರ್ಮಿಕರ ಪ್ರತಿಭಟನೆ

ಲಾಕ್​​ಡೌನ್​​ನಿಂದ ಸಂಕಷ್ಟಕ್ಕೆ ತುತ್ತಾಗಿರುವ ವಿವಿಧ ವಲಯಗಳ ಕಾರ್ಮಿಕರು ಸರ್ಕಾರ ತಮಗೆ ಮಾಸಿಕ 7,500 ರೂ, ನಂತೆ ಆರು ತಿಂಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಪ್ರತಿಭಟನೆ ನಡೆಸಿದ್ರು.

workers protest in gangavathi
ಪ್ರತಿಭಟನೆ
author img

By

Published : Sep 23, 2020, 8:33 PM IST

ಗಂಗಾವತಿ: ಲಾಕ್​​ಡೌನ್​ ಬಳಿಕ ಉಂಟಾದ ನಿರುದ್ಯೋಗದಿಂದ ಬೀದಿಪಾಲಾದ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಾನಾ ವಲಯದ ಶ್ರಮಿಕರು ಪ್ರತಿಭಟನೆ ನಡೆಸಿದರು.

ಶ್ರಮಿಕ ವರ್ಗದಿಂದ ಗಂಗಾವತಿಯಲ್ಲಿ ಪ್ರತಿಭಟನೆ

ನಗರದಲ್ಲಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಎಪಿಎಂಸಿ ಮುಂದೆ ಧರಣಿ ನಡೆಸಿದ್ರು. ಪ್ರತಿಭಟನೆಯಲ್ಲಿ ಎಪಿಎಂಸಿ, ಗ್ರಾಮೀಣ ಬಜಾರ್, ಮಿಲ್, ಗೋದಾಮು, ವೇರ್​​ ಹೌಸ್​​ ಟ್ರಾನ್ಸ್​ಪೋರ್ಟ್​​ ಸೇರಿದಂತೆ ನಾನಾ ವಲಯದಲ್ಲಿನ ಶ್ರಮಿಕರು ಪಾಲ್ಗೊಂಡಿದ್ದರು.

ಲಾಕ್​ಡೌನ್​​ ಬಳಿಕ ತಮ್ಮ ಜೀವನ ದುಸ್ತರವಾಗಿದ್ದು, ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಮಾಸಿಕ 7,500 ರೂ ನಂತೆ ಆರು ತಿಂಗಳ ಪರಿಹಾರ ನೀಡಬೇಕು , ಹಾಗೂ ವಸತಿ ಯೋಜನೆ ಕೂಡಲೆ ಅನುಷ್ಠಾನಕ್ಕೆ ತರಬೇಕು ಎಂಬ ಹತ್ತು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಗಂಗಾವತಿ: ಲಾಕ್​​ಡೌನ್​ ಬಳಿಕ ಉಂಟಾದ ನಿರುದ್ಯೋಗದಿಂದ ಬೀದಿಪಾಲಾದ ತಮ್ಮ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಾನಾ ವಲಯದ ಶ್ರಮಿಕರು ಪ್ರತಿಭಟನೆ ನಡೆಸಿದರು.

ಶ್ರಮಿಕ ವರ್ಗದಿಂದ ಗಂಗಾವತಿಯಲ್ಲಿ ಪ್ರತಿಭಟನೆ

ನಗರದಲ್ಲಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಎಪಿಎಂಸಿ ಮುಂದೆ ಧರಣಿ ನಡೆಸಿದ್ರು. ಪ್ರತಿಭಟನೆಯಲ್ಲಿ ಎಪಿಎಂಸಿ, ಗ್ರಾಮೀಣ ಬಜಾರ್, ಮಿಲ್, ಗೋದಾಮು, ವೇರ್​​ ಹೌಸ್​​ ಟ್ರಾನ್ಸ್​ಪೋರ್ಟ್​​ ಸೇರಿದಂತೆ ನಾನಾ ವಲಯದಲ್ಲಿನ ಶ್ರಮಿಕರು ಪಾಲ್ಗೊಂಡಿದ್ದರು.

ಲಾಕ್​ಡೌನ್​​ ಬಳಿಕ ತಮ್ಮ ಜೀವನ ದುಸ್ತರವಾಗಿದ್ದು, ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆ ಮಾಸಿಕ 7,500 ರೂ ನಂತೆ ಆರು ತಿಂಗಳ ಪರಿಹಾರ ನೀಡಬೇಕು , ಹಾಗೂ ವಸತಿ ಯೋಜನೆ ಕೂಡಲೆ ಅನುಷ್ಠಾನಕ್ಕೆ ತರಬೇಕು ಎಂಬ ಹತ್ತು ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.