ETV Bharat / state

ದಿಢೀರ್ ಧರೆಗುರುಳಿದ ಬೃಹತ್ ಮರ: ತಪ್ಪಿದ ಭಾರಿ ಅನಾಹುತ

author img

By

Published : Jun 13, 2020, 3:06 PM IST

Updated : Jun 13, 2020, 5:18 PM IST

ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಒಂದು ಮಗು ಸೇರಿದಂತೆ ಮೂರು ಜನರು ಕ್ಷಣಾರ್ಧದಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ.

tree
tree

ಗಂಗಾವತಿ (ಕೊಪ್ಪಳ): ಗಾಳಿ, ಮಳೆ ಏನೂ ಇಲ್ಲದಿದ್ದರೂ ಸಾರ್ವಜನಿಕ ಸ್ಥಳದಲ್ಲಿರುವ ಬೃಹತ್ ಮರವೊಂದು ಧರೆಗುರುಳಿದ್ದು ಕೂದಲೆಳೆಯ ಅಂತರದಲ್ಲಿ ಅಪಾಯ ತಪ್ಪಿರುವ ಘಟನೆ ನಗರದ ನೀಲಕಂಠೇಶ್ವರ ವೃತ್ತದ ಸಮೀಪ ಸಂಭವಿಸಿದೆ.

ಧರೆಗುರುಳಿದ ಬೃಹತ್ ಮರ

ನೀಲಕಂಠೇಶ್ವರ ವೃತ್ತ ಹಾಗೂ ಪೀರಜಾದೆ ವೃತ್ತದ ಮಧ್ಯೆ ಇರುವ ಖಾಸಗಿ ನರ್ಸಿಂಗ್ ಹೋಂ ಬಳಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಒಂದು ಮಗು ಸೇರಿದಂತೆ ಮೂರು ಜನ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.

ಮರ ಉರುಳುತ್ತಿರುವಾಗ ಸಮೀಪದ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಹೀಗಾಗಿ ಮರ ಬೀಳುವ ರಭಸ ಕಡಿಮೆಯಾಗಿದ್ದು ಜನ ಅಪಾಯದಿಂದ ಪಾರಾಗಿದ್ದಾರೆ. ಇಡೀ ರಸ್ತೆಯ ಮೇಲೆ ಮರ ಉರುಳಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು.

ಗಂಗಾವತಿ (ಕೊಪ್ಪಳ): ಗಾಳಿ, ಮಳೆ ಏನೂ ಇಲ್ಲದಿದ್ದರೂ ಸಾರ್ವಜನಿಕ ಸ್ಥಳದಲ್ಲಿರುವ ಬೃಹತ್ ಮರವೊಂದು ಧರೆಗುರುಳಿದ್ದು ಕೂದಲೆಳೆಯ ಅಂತರದಲ್ಲಿ ಅಪಾಯ ತಪ್ಪಿರುವ ಘಟನೆ ನಗರದ ನೀಲಕಂಠೇಶ್ವರ ವೃತ್ತದ ಸಮೀಪ ಸಂಭವಿಸಿದೆ.

ಧರೆಗುರುಳಿದ ಬೃಹತ್ ಮರ

ನೀಲಕಂಠೇಶ್ವರ ವೃತ್ತ ಹಾಗೂ ಪೀರಜಾದೆ ವೃತ್ತದ ಮಧ್ಯೆ ಇರುವ ಖಾಸಗಿ ನರ್ಸಿಂಗ್ ಹೋಂ ಬಳಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಒಂದು ಮಗು ಸೇರಿದಂತೆ ಮೂರು ಜನ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.

ಮರ ಉರುಳುತ್ತಿರುವಾಗ ಸಮೀಪದ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಹೀಗಾಗಿ ಮರ ಬೀಳುವ ರಭಸ ಕಡಿಮೆಯಾಗಿದ್ದು ಜನ ಅಪಾಯದಿಂದ ಪಾರಾಗಿದ್ದಾರೆ. ಇಡೀ ರಸ್ತೆಯ ಮೇಲೆ ಮರ ಉರುಳಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು.

Last Updated : Jun 13, 2020, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.