ಕುಷ್ಟಗಿ(ಕೊಪ್ಪಳ): ಕೊರೊನಾ ವೈರಸ್ ನಿಯಂತ್ರಿಸಲು ಮೇ 25ರ ರಂಜಾನ್ ಹಬ್ಬದ ಸಂಭ್ರಮಗಳೆಲ್ಲವೂ ಮನೆಗೆ ಸೀಮಿತವಾಗಿದೆ. ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.
ಈ ಹಬ್ಬದಂದು ಮನೆಯಲ್ಲೇ ಪ್ರಾರ್ಥಿಸಲು ಮುಸ್ಲಿಂ ಬಾಂಧವರಲ್ಲಿ ಕೋರಲಾಗಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಗೆ ಈದ್ಗಾ ಮೈದಾನಕ್ಕೆ ಆಗಮಿಸದಂತೆ ಈದ್ಗಾ ಮೈದಾನದ ಕಟ್ಟೆಯ ಪ್ರಾರ್ಥನೆ ಸಲ್ಲಿಸುವ ಸ್ಥಳದಲ್ಲಿ ಮಾಹಿತಿಗಾಗಿ ಬ್ಯಾನರ್ ಹಾಕಲಾಗಿದೆ.ಈ
ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ ಎಂದು ತಿಳಿಸಲು ಅಂಜುಮಾನ್-ಏ-ಇಸ್ಲಾಂ ಪಂಚ ಕಮಿಟಿಯ ಶೇಖ ಜವ್ವಾದ ಹುಸೇನ್(ಡಾ. ಬಾಬು), ಮುರ್ತುಜಾ ಪೇಂಟರ್ ಇದ್ದರು.