ETV Bharat / state

ಹೋಳಿ ಮುಗಿಸಿದ್ದ ಯುವಕನಿಗೆ ಹೊಳೆಯಲ್ಲಿ ಕಾದಿತ್ತು ಮೃತ್ಯು

author img

By

Published : Mar 10, 2020, 8:17 PM IST

ಹೋಳಿ ಮುಗಿಸಿ ನದಿಗೆ ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲಾಗಿರುವ ದುರ್ಘಟನೆ ನಡೆದಿದೆ.

the-young-man-who-had-finished-holi-died-in-a-river-in-koppala
ಹೋಳಿ ಮುಗಿಸಿದ್ದ ಯುವಕನಿಗೆ ಹೊಳೆಯಲ್ಲಿ ಕಾದಿತ್ತು ಮೃತ್ಯು

ಕೊಪ್ಪಳ: ಹೋಳಿ ಮುಗಿಸಿ ನದಿಗೆ ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

ಹೋಳಿ ಮುಗಿಸಿದ್ದ ಯುವಕನಿಗೆ ಹೊಳೆಯಲ್ಲಿ ಕಾದಿತ್ತು ಮೃತ್ಯು

ಕಂಪ್ಲಿ ಮೂಲದ ನವೀನ್ (24) ನೀರುಪಾಲಾದ ಯುವಕ.

ಚಿಕ್ಕಜಂತಕಲ್ ಗ್ರಾಮದ ತುಂಗಭದ್ರಾ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ನವೀನ್ ತನ್ನ ಸ್ನೇಹಿತರೊಂದಿಗೆ ತೆರಳಿದ್ದಾನೆ. ಈ ವೇಳೆ ಈಜು ಬಾರದೆ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರಿಂದ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ಥಳೀಯರ ನೆರವಿನಿಂದ ನವೀನ್ ಶವ ಹೊರ ತೆಗೆಯಲಾಗಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟ‌ನೆ ನಡೆದಿದೆ.

ಕೊಪ್ಪಳ: ಹೋಳಿ ಮುಗಿಸಿ ನದಿಗೆ ಸ್ನಾನ ಮಾಡಲು ಹೋಗಿದ್ದ ಯುವಕ ನೀರು ಪಾಲಾಗಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

ಹೋಳಿ ಮುಗಿಸಿದ್ದ ಯುವಕನಿಗೆ ಹೊಳೆಯಲ್ಲಿ ಕಾದಿತ್ತು ಮೃತ್ಯು

ಕಂಪ್ಲಿ ಮೂಲದ ನವೀನ್ (24) ನೀರುಪಾಲಾದ ಯುವಕ.

ಚಿಕ್ಕಜಂತಕಲ್ ಗ್ರಾಮದ ತುಂಗಭದ್ರಾ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ನವೀನ್ ತನ್ನ ಸ್ನೇಹಿತರೊಂದಿಗೆ ತೆರಳಿದ್ದಾನೆ. ಈ ವೇಳೆ ಈಜು ಬಾರದೆ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರಿಂದ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ಥಳೀಯರ ನೆರವಿನಿಂದ ನವೀನ್ ಶವ ಹೊರ ತೆಗೆಯಲಾಗಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟ‌ನೆ ನಡೆದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.