ETV Bharat / state

ಮಕ್ಕಳ ಹೆಸರಲ್ಲಿ 1 ಸಾವಿರ ರೂ ಠೇವಣಿ: ಸರ್ಕಾರಿ ಶಾಲೆ ಉಳಿಸಲು ಕೊಪ್ಪಳದ 'ಗುರು'ಸ್ವಾಮಿಯ ಕೈಂಕರ್ಯ!

ಸರ್ಕಾರಿ ಶಾಲೆಗಳ ಉಳಿಸುವ ಪ್ರಯತ್ನಕ್ಕೆ ಇಲ್ಲೊಬ್ಬ ಶಿಕ್ಷಕರು ಮುಂದಾಗಿದ್ದು, ತಮ್ಮ ಶಾಲೆಯ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ತಲಾ 1 ಸಾವಿರ ರೂಪಾಯಿ ಠೇವಣಿ ಮಾಡಿಸಲು ಮುಂದಾಗಿದ್ದಾರೆ. ಶಾಲೆಯ ದಾಖಲಾತಿ ಹೆಚ್ಚಿಸಿ, ಸರ್ಕಾರಿ ಶಾಲೆಗಳ ಉಳಿವು ಇದರ ಸದುದ್ದೇಶ.

author img

By

Published : Jul 13, 2021, 8:11 PM IST

The Master who opened bank account for every student those who admit to 1st standard
ಸರ್ಕಾರಿ ಶಾಲೆ ಉಳಿಸಲು ಮುಂದಾದ ‘ಗುರು’

ಕೊಪ್ಪಳ: ಸರ್ಕಾರಿ ಶಾಲೆ ಅಂದ್ರೆ ಬಹಳಷ್ಟು ಪೋಷಕರು ಮೂಗು ಮುರಿದು ಖಾಸಗಿ ಶಾಲೆಗಳತ್ತ ಮುಖ ಮಾಡೋದು ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳು ಮೂಲೆಗುಂಪಾಗುತ್ತಿವೆ. ಸರ್ಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಸರ್ಕಾರವೂ ಸಹ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿರುವ ರೋಟರಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುಸ್ವಾಮಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಸರ್ಕಾರಿ ಶಾಲೆ ಉಳಿಸಲು ಮುಂದಾದ ‘ಗುರು

1ನೇ ತರಗತಿಯಿಂದ 5ನೇ ತರಗತಿಯವರೆಗೆ ಇರುವ ಈ ಸರ್ಕಾರಿ ಶಾಲೆಯಲ್ಲಿ 28 ಮಕ್ಕಳಿದ್ದಾರೆ. ವಿದ್ಯಾರ್ಥಿಗಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಏನಾದರೊಂದು ಸಹಾಯ ಮಾಡುವ ಶಿಕ್ಷಕ ಗುರುಸ್ವಾಮಿ, ಈ ಬಾರಿ ತಮ್ಮ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಲ್ಲಿ ಸಾವಿರ ರೂಪಾಯಿ ಠೇವಣಿ ಇಡುತ್ತಿದ್ದಾರೆ. ಈ ಠೇವಣಿ ಹಣ 18 ವರ್ಷಗಳ ಕಾಲ ಇರಲಿದ್ದುಬಳಿಕ ಬರುವ ಒಟ್ಟು ಹಣವನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬಹುದು.

ಗುರುಸ್ವಾಮಿ ಈ ರೀತಿ ಠೇವಣಿ ಇಡುವುದಾಗಿ ಘೋಷಿಸಿದ ತಕ್ಷಣವೇ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದು, 6 ಮಂದಿ ಪೋಷಕರು ಈಗಾಗಲೇ ಮಕ್ಕಳನ್ನು ಅಡ್ಮಿಷನ್ ಮಾಡಿಸಿದ್ದಾರಂತೆ. ಅಲ್ಲದೆ ತಮ್ಮ ವೇತನದಲ್ಲಿ ಮಕ್ಕಳಿಗೆ ಅಗತ್ಯವಿರುವ ಕಿಟ್​​ಗಳನ್ನೂ ಕೊಡಿಸುತ್ತಾರಂತೆ. ಸದ್ಯ ಇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಶಿಕ್ಷಕರ ಕಾರ್ಯ ನೆನೆದು ಕೃತಜ್ಞತೆ ಅರ್ಪಿಸುತ್ತಾರೆ. ತಮ್ಮ ಕರ್ತವ್ಯ ಒಂದೆಡೆಯಾದರೆ ಸರ್ಕಾರಿ ಶಾಲೆ ಉಳಿಸುವ ಸದಾಶಯ ಮೆಚ್ಚುವಂಥದ್ದು.

ಕೊಪ್ಪಳ: ಸರ್ಕಾರಿ ಶಾಲೆ ಅಂದ್ರೆ ಬಹಳಷ್ಟು ಪೋಷಕರು ಮೂಗು ಮುರಿದು ಖಾಸಗಿ ಶಾಲೆಗಳತ್ತ ಮುಖ ಮಾಡೋದು ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ಸರ್ಕಾರಿ ಶಾಲೆಗಳು ಮೂಲೆಗುಂಪಾಗುತ್ತಿವೆ. ಸರ್ಕಾರಿ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಸರ್ಕಾರವೂ ಸಹ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿರುವ ರೋಟರಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುಸ್ವಾಮಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಸರ್ಕಾರಿ ಶಾಲೆ ಉಳಿಸಲು ಮುಂದಾದ ‘ಗುರು

1ನೇ ತರಗತಿಯಿಂದ 5ನೇ ತರಗತಿಯವರೆಗೆ ಇರುವ ಈ ಸರ್ಕಾರಿ ಶಾಲೆಯಲ್ಲಿ 28 ಮಕ್ಕಳಿದ್ದಾರೆ. ವಿದ್ಯಾರ್ಥಿಗಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಏನಾದರೊಂದು ಸಹಾಯ ಮಾಡುವ ಶಿಕ್ಷಕ ಗುರುಸ್ವಾಮಿ, ಈ ಬಾರಿ ತಮ್ಮ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಲ್ಲಿ ಸಾವಿರ ರೂಪಾಯಿ ಠೇವಣಿ ಇಡುತ್ತಿದ್ದಾರೆ. ಈ ಠೇವಣಿ ಹಣ 18 ವರ್ಷಗಳ ಕಾಲ ಇರಲಿದ್ದುಬಳಿಕ ಬರುವ ಒಟ್ಟು ಹಣವನ್ನು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬಹುದು.

ಗುರುಸ್ವಾಮಿ ಈ ರೀತಿ ಠೇವಣಿ ಇಡುವುದಾಗಿ ಘೋಷಿಸಿದ ತಕ್ಷಣವೇ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದು, 6 ಮಂದಿ ಪೋಷಕರು ಈಗಾಗಲೇ ಮಕ್ಕಳನ್ನು ಅಡ್ಮಿಷನ್ ಮಾಡಿಸಿದ್ದಾರಂತೆ. ಅಲ್ಲದೆ ತಮ್ಮ ವೇತನದಲ್ಲಿ ಮಕ್ಕಳಿಗೆ ಅಗತ್ಯವಿರುವ ಕಿಟ್​​ಗಳನ್ನೂ ಕೊಡಿಸುತ್ತಾರಂತೆ. ಸದ್ಯ ಇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು, ಶಿಕ್ಷಕರ ಕಾರ್ಯ ನೆನೆದು ಕೃತಜ್ಞತೆ ಅರ್ಪಿಸುತ್ತಾರೆ. ತಮ್ಮ ಕರ್ತವ್ಯ ಒಂದೆಡೆಯಾದರೆ ಸರ್ಕಾರಿ ಶಾಲೆ ಉಳಿಸುವ ಸದಾಶಯ ಮೆಚ್ಚುವಂಥದ್ದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.