ETV Bharat / state

ನಮ್ಮಲ್ಲಿ ಮೂಲ ಮತ್ತು ವಲಸಿಗರೆಂಬ ಭಿನ್ನಾಭಿಪ್ರಾಯವಿಲ್ಲ, ಅದೇನಿದ್ದರು ಕಾಂಗ್ರೆಸ್​​ನಲ್ಲಿ: ಕಟೀಲ್ ತಿರುಗೇಟು

ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು. ಕೆಲವರು ನೋವುಗಳನ್ನು ಹೇಳಿಕೊಂಡರು. ಅದನ್ನು ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬಗಹರಿಸಿದ್ದಾರೆ‌. ನಮ್ಮಲ್ಲಿ ಏನೂ ಗೊಂದಲವಿಲ್ಲ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

author img

By

Published : Jun 23, 2021, 12:53 PM IST

Statement of BJP President Nalin Kumar Kateel in Koppal
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ

ಕೊಪ್ಪಳ: ಮೂಲ ಮತ್ತು ವಲಸಿಗರು ಎಂಬ ಭಿನ್ನಾಭಿಪ್ರಾಯ ಬಿಜೆಪಿಯಲ್ಲಿ ಇಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು. ಕೆಲವರು ನೋವುಗಳನ್ನು ಹೇಳಿಕೊಂಡರು. ಅದನ್ನು ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಗಹರಿಸಿದ್ದಾರೆ‌. ಮೂಲ ಮತ್ತು ವಲಿಸಗರು ಎಂಬ ಕಿತ್ತಾಟ ಕಾಂಗ್ರೆಸ್ ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಣ್ಣ ವಲಸಿಗರು ಎಂಬ ಭಿನ್ನಾಭಿಪ್ರಾಯ ಕಾಂಗ್ರೆಸ್ ನಲ್ಲಿದೆ. ಕಾಂಗ್ರೆಸ್ ನಲ್ಲಿ ಈಗಲೇ ಮ್ಯೂಸಿಕಲ್ ಚೇರ್ ಆಟ ಶುರುವಾಗಿದೆ. ಸಿದ್ದರಾಮಣ್ಣ, ಡಿಕೆಶಿ ನಡುವೆ ಜಗಳ ಪ್ರಾರಂಭಾವಾಗಿದೆ. ಮುಖ್ಯಮಂತ್ರಿ ಸೀಟ್ ಗೆ ಟವೆಲ್ ಹಾಕುವ ಕೆಲಸ ಅಲ್ಲಿ ನಡೆದಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದರು.

ನಮ್ಮಲ್ಲಿ ಏನೂ ಗೊಂದಲವಿಲ್ಲ. ಪಕ್ಷ ಚೆನ್ನಾಗಿ ನಡೆಯುತ್ತಿದೆ‌‌. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ರಾಜೀನಾಮೆ ಕುರಿತಂತೆ ನನ್ನ ಜೊತೆ ಏನೂ ಮಾತನಾಡಿಲ್ಲ. ಆದರೆ ನಾನೇ ಅವರ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಏನೂ ಸಮಸ್ಯೆ ಇಲ್ಲ. ಏನೇ ಸಮಸ್ಯೆ ಇದ್ದು, ಪರಿಹಾರ ಮಾಡಲಾಗುತ್ತದೆ ಎಂದು ನಳಿನ್​​ ಕುಮಾರ್​ ಕಟೀಲ್ ಹೇಳಿದರು.

ಇದನ್ನೂ ಓದಿ : ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.. ಉಚಿತ ಟ್ಯಾಬ್ಲೆಟ್‌ ಪಿಸಿ ವಿತರಣಾ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಕೊಪ್ಪಳ: ಮೂಲ ಮತ್ತು ವಲಸಿಗರು ಎಂಬ ಭಿನ್ನಾಭಿಪ್ರಾಯ ಬಿಜೆಪಿಯಲ್ಲಿ ಇಲ್ಲ. ಬಿಜೆಪಿಯಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು. ಕೆಲವರು ನೋವುಗಳನ್ನು ಹೇಳಿಕೊಂಡರು. ಅದನ್ನು ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಗಹರಿಸಿದ್ದಾರೆ‌. ಮೂಲ ಮತ್ತು ವಲಿಸಗರು ಎಂಬ ಕಿತ್ತಾಟ ಕಾಂಗ್ರೆಸ್ ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಣ್ಣ ವಲಸಿಗರು ಎಂಬ ಭಿನ್ನಾಭಿಪ್ರಾಯ ಕಾಂಗ್ರೆಸ್ ನಲ್ಲಿದೆ. ಕಾಂಗ್ರೆಸ್ ನಲ್ಲಿ ಈಗಲೇ ಮ್ಯೂಸಿಕಲ್ ಚೇರ್ ಆಟ ಶುರುವಾಗಿದೆ. ಸಿದ್ದರಾಮಣ್ಣ, ಡಿಕೆಶಿ ನಡುವೆ ಜಗಳ ಪ್ರಾರಂಭಾವಾಗಿದೆ. ಮುಖ್ಯಮಂತ್ರಿ ಸೀಟ್ ಗೆ ಟವೆಲ್ ಹಾಕುವ ಕೆಲಸ ಅಲ್ಲಿ ನಡೆದಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದರು.

ನಮ್ಮಲ್ಲಿ ಏನೂ ಗೊಂದಲವಿಲ್ಲ. ಪಕ್ಷ ಚೆನ್ನಾಗಿ ನಡೆಯುತ್ತಿದೆ‌‌. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ರಾಜೀನಾಮೆ ಕುರಿತಂತೆ ನನ್ನ ಜೊತೆ ಏನೂ ಮಾತನಾಡಿಲ್ಲ. ಆದರೆ ನಾನೇ ಅವರ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಏನೂ ಸಮಸ್ಯೆ ಇಲ್ಲ. ಏನೇ ಸಮಸ್ಯೆ ಇದ್ದು, ಪರಿಹಾರ ಮಾಡಲಾಗುತ್ತದೆ ಎಂದು ನಳಿನ್​​ ಕುಮಾರ್​ ಕಟೀಲ್ ಹೇಳಿದರು.

ಇದನ್ನೂ ಓದಿ : ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.. ಉಚಿತ ಟ್ಯಾಬ್ಲೆಟ್‌ ಪಿಸಿ ವಿತರಣಾ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.