ETV Bharat / state

ಅಂಜನಾದ್ರಿಯಿಂದ ಅಯೋಧ್ಯೆಗೆ ಕಳುಹಿಸುವ ಪವಿತ್ರ ಶಿಲೆ, ಜಲ, ಮೃತ್ತಿಕೆಗೆ ವಿಶೇಷ ಪೂಜೆ

author img

By

Published : Jul 29, 2020, 4:03 PM IST

ರಾಮಬಂಟ ಹನುಮ ಜನಿಸಿದ ಅಂಜನಾದ್ರಿಯಿಂದ ಅಯೋಧ್ಯೆಗೆ ಮುಂದಿನ ದಿನಗಳಲ್ಲಿ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.

ddd
ರಾಮಮಂದಿರ ಶಿಲಾನ್ಯಾಸಕ್ಕೆ ಕಳುಹಿಸಲಾಗುತ್ತಿರುವ ಶಿಲೆ, ಜಲ ಪೂಜೆ

ಕೊಪ್ಪಳ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕಾಗಿ ಜಿಲ್ಲೆಯಿಂದ ಕಳುಹಿಸಲಾಗುತ್ತಿರುವ ಪವಿತ್ರ ಶಿಲೆ, ಜಲ ಹಾಗೂ ಮೃತ್ತಿಕೆಗೆ ಗವಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೊಪ್ಪಳದಿಂದ ರಾಮಮಂದಿರ ಶಿಲಾನ್ಯಾಸಕ್ಕೆ ಕಳುಹಿಸಲಾಗುತ್ತಿರುವ ಪವಿತ್ರ ಶಿಲೆ, ಜಲ ಹಾಗು ಮೃತ್ತಿಕೆಗೆ ಪೂಜೆ

ಶ್ರೀರಾಮಸೇನೆ ವತಿಯಿಂದ ಐತಿಹಾಸಿಕ ಅಂಜನಾದ್ರಿ ಪರ್ವತದಿಂದ ಶಿಲೆ, ಚಕ್ರತೀರ್ಥದಿಂದ ಜಲ ಹಾಗೂ ಪವಿತ್ರ ಮೃತ್ತಿಕೆಯನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.

ಈ ವೇಳೆ ಮಾತನಾಡಿದ ಮುತಾಲಿಕ್, ಪವಿತ್ರ ಕ್ಷೇತ್ರ ಅಂಜನಾದ್ರಿಯಿಂದ ತೆಗೆದುಕೊಂಡಿರುವ ಶಿಲೆ, ಜಲ ಹಾಗೂ ಮೃತ್ತಿಕೆಗೆ ಈಗಾಗಲೇ ಕೆಲವೆಡೆ ಪೂಜೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಲು ಅನುಮತಿ ದೊರಕಿಲ್ಲ. ಹೀಗಾಗಿ ಉಡುಪಿ ಶ್ರೀಗಳ ಮೂಲಕ ಅಯೋಧ್ಯೆಗೆ ತಲುಪಿಸಲಾಗುತ್ತದೆ ಎಂದರು.

ಕೊಪ್ಪಳ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರದ ಶಿಲಾನ್ಯಾಸಕ್ಕಾಗಿ ಜಿಲ್ಲೆಯಿಂದ ಕಳುಹಿಸಲಾಗುತ್ತಿರುವ ಪವಿತ್ರ ಶಿಲೆ, ಜಲ ಹಾಗೂ ಮೃತ್ತಿಕೆಗೆ ಗವಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೊಪ್ಪಳದಿಂದ ರಾಮಮಂದಿರ ಶಿಲಾನ್ಯಾಸಕ್ಕೆ ಕಳುಹಿಸಲಾಗುತ್ತಿರುವ ಪವಿತ್ರ ಶಿಲೆ, ಜಲ ಹಾಗು ಮೃತ್ತಿಕೆಗೆ ಪೂಜೆ

ಶ್ರೀರಾಮಸೇನೆ ವತಿಯಿಂದ ಐತಿಹಾಸಿಕ ಅಂಜನಾದ್ರಿ ಪರ್ವತದಿಂದ ಶಿಲೆ, ಚಕ್ರತೀರ್ಥದಿಂದ ಜಲ ಹಾಗೂ ಪವಿತ್ರ ಮೃತ್ತಿಕೆಯನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.

ಈ ವೇಳೆ ಮಾತನಾಡಿದ ಮುತಾಲಿಕ್, ಪವಿತ್ರ ಕ್ಷೇತ್ರ ಅಂಜನಾದ್ರಿಯಿಂದ ತೆಗೆದುಕೊಂಡಿರುವ ಶಿಲೆ, ಜಲ ಹಾಗೂ ಮೃತ್ತಿಕೆಗೆ ಈಗಾಗಲೇ ಕೆಲವೆಡೆ ಪೂಜೆ ಸಲ್ಲಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಯೋಧ್ಯೆಗೆ ತೆರಳಲು ಅನುಮತಿ ದೊರಕಿಲ್ಲ. ಹೀಗಾಗಿ ಉಡುಪಿ ಶ್ರೀಗಳ ಮೂಲಕ ಅಯೋಧ್ಯೆಗೆ ತಲುಪಿಸಲಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.