ETV Bharat / state

ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ₹ 2 ಲಕ್ಷ ದೇಣಿಗೆ ಕೊಟ್ಟ ನಿವೃತ್ತ ಶಿಕ್ಷಕ.. - Corona Control Fund

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕ ನೂರಂದಪ್ಪ ಅವರು ಕೊರೊನಾ ಪರಿಹಾರ ನಿಧಿಗೆ 2 ಲಕ್ಷ ರೂ. ನೆರವು ನೀಡಿ ಮಾದರಿಯಾಗಿದ್ದಾರೆ.

retired teacher donate 2 lakhs
₹ 2 ಲಕ್ಷ ದೇಣಿಗೆ ಕೊಟ್ಟ ನಿವೃತ್ತ ಶಿಕ್ಷಕ
author img

By

Published : Jun 16, 2020, 9:15 PM IST

ಕೊಪ್ಪಳ : ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ನಿವೃತ್ತ ಶಿಕ್ಷಕರೊಬ್ಬರು ಇಂದು ಸಿಎಂ ಪರಿಹಾರ ನಿಧಿ​​ಗೆ ₹ 2 ಲಕ್ಷ‌ ನೀಡುವ ಮೂಲಕ ಉದಾರತೆ ಮೆರೆದರು.

ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕ ನೂರಂದಪ್ಪ ಅವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಸಂಜೆ ಎರಡು ಲಕ್ಷದ ಚೆಕ್‌ನ ಹಸ್ತಾಂತರಿಸಿದರು. ಅಲ್ಲದೆ ಕುಕನೂರಿನಲ್ಲಿರುವ ಗುರುಕುಲಕ್ಕೂ ₹1 ಲಕ್ಷ ಚೆಕ್‌ನ ಇದೇ ಸಂದರ್ಭದಲ್ಲಿ ಆ ಸಂಸ್ಥೆಯವರಿಗೆ ನೂರಂದಪ್ಪ ಅವರು ನೀಡಿದರು.

₹2 ಲಕ್ಷ ದೇಣಿಗೆ ಕೊಟ್ಟ ನಿವೃತ್ತ ಶಿಕ್ಷಕ

ಈಗಾಗಲೇ ಪಿಎಂ ಕೇರ್ಸ್​​​ಗೆ ಎರಡು ಲಕ್ಷ ರುಪಾಯಿ ದೇಣಿಗೆ ಸಲ್ಲಿಸಿರುವ ನೂರಂದಪ್ಪ ಅವರು, ಈಗ ಸಿಎಂ ಪರಿಹಾರ ನಿಧಿಗೂ 2 ಲಕ್ಷ ರೂಪಾಯಿ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ಇಂತಹ ಸೇವಾ ಮನೋಭಾವ ಹೊಂದಿರುವ ನೂರಂದಪ್ಪಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಪ್ಪಳ : ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ನಿವೃತ್ತ ಶಿಕ್ಷಕರೊಬ್ಬರು ಇಂದು ಸಿಎಂ ಪರಿಹಾರ ನಿಧಿ​​ಗೆ ₹ 2 ಲಕ್ಷ‌ ನೀಡುವ ಮೂಲಕ ಉದಾರತೆ ಮೆರೆದರು.

ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದಲ್ಲಿ ವಾಸವಾಗಿರುವ ನಿವೃತ್ತ ಶಿಕ್ಷಕ ನೂರಂದಪ್ಪ ಅವರು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಸಂಜೆ ಎರಡು ಲಕ್ಷದ ಚೆಕ್‌ನ ಹಸ್ತಾಂತರಿಸಿದರು. ಅಲ್ಲದೆ ಕುಕನೂರಿನಲ್ಲಿರುವ ಗುರುಕುಲಕ್ಕೂ ₹1 ಲಕ್ಷ ಚೆಕ್‌ನ ಇದೇ ಸಂದರ್ಭದಲ್ಲಿ ಆ ಸಂಸ್ಥೆಯವರಿಗೆ ನೂರಂದಪ್ಪ ಅವರು ನೀಡಿದರು.

₹2 ಲಕ್ಷ ದೇಣಿಗೆ ಕೊಟ್ಟ ನಿವೃತ್ತ ಶಿಕ್ಷಕ

ಈಗಾಗಲೇ ಪಿಎಂ ಕೇರ್ಸ್​​​ಗೆ ಎರಡು ಲಕ್ಷ ರುಪಾಯಿ ದೇಣಿಗೆ ಸಲ್ಲಿಸಿರುವ ನೂರಂದಪ್ಪ ಅವರು, ಈಗ ಸಿಎಂ ಪರಿಹಾರ ನಿಧಿಗೂ 2 ಲಕ್ಷ ರೂಪಾಯಿ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ಇಂತಹ ಸೇವಾ ಮನೋಭಾವ ಹೊಂದಿರುವ ನೂರಂದಪ್ಪಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.