ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದ ಇಬ್ಬರು ವ್ಯಕ್ತಿಗಳನ್ನು ಕಾನೂನು ವಿರೋಧಿ ಕೃತ್ಯ ಎಸಗಿದ ಆರೋಪದ ಮೇಲೆ ಪೊಲೀಸ್ ಇಲಾಖೆ ಗಡಿಪಾರು ಮಾಡಿದೆ.
![Police Department sentenced to deportation for those who committed illegal acts](https://etvbharatimages.akamaized.net/etvbharat/prod-images/kn-kst-01-15-gadiparu-kac10028_15012021211707_1501f_1610725627_955.jpg)
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇರೆಗೆ ಮಟ್ಕಾ ಪ್ರಕರಣ, ಸಮಾಜದ ಅಶಾಂತಿ ಕೃತ್ಯ, ಶಾಂತಿ ಭಂಗ ಸಾರ್ವಜನಿಕರಿಗೆ ಕಂಟಕಪ್ರಾಯ ಆಗಿರುವ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ತೆಗ್ಗಿನ ಓಣಿಯ ಯಮನೂರು ಮೇಘರಾಜ್ ಸಿಂಧನೂರು ಹಾಗೂ ಕಟ್ಟಿದುರಗಮ್ಮ ಗುಡಿ ಹತ್ತಿರದ ನಿವಾಸಿ ನರಸಪ್ಪ ಶಿವಪ್ಪ ನೇಕಾರ ಎಂಬುವರನ್ನು ಗಡಿಪಾರು ಮಾಡಲಾಗಿದೆ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದ್ದಾರೆ.