ETV Bharat / state

ಕೊರೊನಾ ಸೋಂಕದ ಕೊಪ್ಪಳದ ಗ್ರಾಮಗಳು: ಗ್ರಾಮಸ್ಥರ ಸ್ವಯಂ ನಿರ್ಬಂಧ, ಜಾಗೃತಿ ಮಾದರಿ - ಕೊಪ್ಪಳ 152 ಗ್ರಾಮಗಳಲ್ಲಿ ಕೊರೊನಾ ಸೋಂಕು ಸುಳಿದಿಲ್ಲ

ಗ್ರಾಮಸ್ಥರ ಸ್ವಯಂ ನಿರ್ಬಂಧ, ಜಾಗೃತಿ ಹಾಗು ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಂದಾಗಿ ಗ್ರಾಮವನ್ನು ಸೋಂಕು ಸ್ಪರ್ಶಿಸದಂತೆ ಮಾಡಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ಕೆಲ ಗ್ರಾಮಗಳು ಮಾದರಿಯಾಗಿವೆ.

ಕೊಪ್ಪಳ
ಕೊಪ್ಪಳ
author img

By

Published : Jun 1, 2021, 11:58 AM IST

ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದರೂ ಇಲ್ಲಿನ ಕೆಲವು ಗ್ರಾಮಗಳ ಜನರು ಮಾರಕ ಸೋಂಕಿನ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ.

ಕೊರೊನಾ ಸೋಂಕದ ಕೊಪ್ಪಳದ ಗ್ರಾಮಗಳು

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 650 ಕ್ಕೂ ಹೆಚ್ಚು ಗ್ರಾಮಗಳಿವೆ. 153 ಗ್ರಾಮ ಪಂಚಾಯತಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಸುಮಾರು 82 ಗ್ರಾಮ ಪಂಚಾಯಿತಿ ವ್ಯಾಪ್ತಿಯ 152 ಗ್ರಾಮಗಳಲ್ಲಿ ಕೊರೊನಾ ಸೋಂಕು ಸುಳಿದಿಲ್ಲ.

'ಇಲ್ಲಿ ಜನರು ಊರಿಂದ ಬೇರೆ ಊರಿಗೆ ಹೋಗಿಲ್ಲ. ಕೊರೊನಾ ಆರಂಭವಾದಾಗಿನಿಂದ ಬೇರೆ ಊರಿನ ಸಂಬಂಧಿಕರನ್ನು ಸಹ ಬರದಂತೆ ಹೇಳಿದ್ದೇವೆ. ಈಗಿನ ಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಊರಿಗೆ ಬರಬೇಡಿ ಎಂದು ಹೇಳಿದರೆ ಸಂಬಂಧಿಕರು ಬೇಜಾರಾಗೋದಿಲ್ಲ. ಹೀಗಾಗಿ ನಾವೂ ಸಹ ನಮ್ಮ ಸಂಬಂಧಿಕರ ಊರಿಗೆ ಹೋಗಿಲ್ಲ, ಅವರೂ ಸಹ ನಮ್ಮ ಊರಿಗೆ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿಸಿದ್ದೇವೆ. ನಿಯಮಗಳನ್ನು ಪಾಲಿಸುತ್ತಿದ್ದೇವೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಈವರೆಗೂ ಕೊರೊನಾ ಸೋಂಕು ಸುಳಿದಿಲ್ಲ' ಎನ್ನುತ್ತಾರೆ ಯಲಬುರ್ಗಾ ತಾಲೂಕಿನ ಬಳೂಟಗಿ ತಾಂಡಾದ ಮುತ್ತಣ್ಣ ಪಮ್ಮಾರ.

ಇದನ್ನೂ ಓದಿ: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಬರೆ.. ಏರಿಕೆ ಆಗಲಿದ್ಯಾ ಬಿಎಂಟಿಸಿ ಟಿಕೆಟ್ ದರ!?

ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದರೂ ಇಲ್ಲಿನ ಕೆಲವು ಗ್ರಾಮಗಳ ಜನರು ಮಾರಕ ಸೋಂಕಿನ ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ.

ಕೊರೊನಾ ಸೋಂಕದ ಕೊಪ್ಪಳದ ಗ್ರಾಮಗಳು

ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 650 ಕ್ಕೂ ಹೆಚ್ಚು ಗ್ರಾಮಗಳಿವೆ. 153 ಗ್ರಾಮ ಪಂಚಾಯತಿಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಸುಮಾರು 82 ಗ್ರಾಮ ಪಂಚಾಯಿತಿ ವ್ಯಾಪ್ತಿಯ 152 ಗ್ರಾಮಗಳಲ್ಲಿ ಕೊರೊನಾ ಸೋಂಕು ಸುಳಿದಿಲ್ಲ.

'ಇಲ್ಲಿ ಜನರು ಊರಿಂದ ಬೇರೆ ಊರಿಗೆ ಹೋಗಿಲ್ಲ. ಕೊರೊನಾ ಆರಂಭವಾದಾಗಿನಿಂದ ಬೇರೆ ಊರಿನ ಸಂಬಂಧಿಕರನ್ನು ಸಹ ಬರದಂತೆ ಹೇಳಿದ್ದೇವೆ. ಈಗಿನ ಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಊರಿಗೆ ಬರಬೇಡಿ ಎಂದು ಹೇಳಿದರೆ ಸಂಬಂಧಿಕರು ಬೇಜಾರಾಗೋದಿಲ್ಲ. ಹೀಗಾಗಿ ನಾವೂ ಸಹ ನಮ್ಮ ಸಂಬಂಧಿಕರ ಊರಿಗೆ ಹೋಗಿಲ್ಲ, ಅವರೂ ಸಹ ನಮ್ಮ ಊರಿಗೆ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸ್ಯಾನಿಟೈಸ್ ಮಾಡಿಸಿದ್ದೇವೆ. ನಿಯಮಗಳನ್ನು ಪಾಲಿಸುತ್ತಿದ್ದೇವೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಈವರೆಗೂ ಕೊರೊನಾ ಸೋಂಕು ಸುಳಿದಿಲ್ಲ' ಎನ್ನುತ್ತಾರೆ ಯಲಬುರ್ಗಾ ತಾಲೂಕಿನ ಬಳೂಟಗಿ ತಾಂಡಾದ ಮುತ್ತಣ್ಣ ಪಮ್ಮಾರ.

ಇದನ್ನೂ ಓದಿ: ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಬರೆ.. ಏರಿಕೆ ಆಗಲಿದ್ಯಾ ಬಿಎಂಟಿಸಿ ಟಿಕೆಟ್ ದರ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.