ETV Bharat / state

ಆನೆಗೊಂದಿ ಉತ್ಸವ: ಗಾಯಕ ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್! - koppala latest news

ಆನೆಗೊಂದಿ ಉತ್ಸವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಳ್ಳುವಂತಿದ್ದು, ಅದರಲ್ಲೂ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ನೆರೆದ ಜನರನ್ನು ರಂಜಿಸಿತು. ಅದ್ರೇ ಗಾಯಕ ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ ಉಂಟಾಗಿದ್ದು, ಸ್ವತಃ ವಿಜಯ್​ಪ್ರಕಾಶ್ ಅವರೇ ಶಾಸಕರ ಮನವೊಲಿಸುವಂತಾಯಿತು.

Music program in Anegundi Fair
ಆನೆಗುಂದಿ ಉತ್ಸವದ ಸಂಗೀತ ರಸದೌತಣ...ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ !
author img

By

Published : Jan 10, 2020, 10:06 AM IST

ಕೊಪ್ಪಳ: ಆನೆಗೊಂದಿ ಉತ್ಸವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.‌ ಅದರಲ್ಲೂ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ನೆರೆದ ಜನರನ್ನು ರಂಜಿಸಿತು.

ಆನೆಗುಂದಿ ಉತ್ಸವದ ಸಂಗೀತ ರಸದೌತಣ... ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ !

ನೀನೆ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ, ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಗೂ ಅವನೇ ಶ್ರೀಮನ್ ನಾರಾಯಣ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಬಳಿಕ ಚೌಕ ಚಿತ್ರದ ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು, ತರವಲ್ಲ ತಗಿ ನಿನ್ನ ತಂಬೂರಿ ಹಾಡು ಹಾಗೂ ಅವರ ತಂಡದವರು ಹಾಡಿದ ಟಗರು ಬಂತು ಟಗರು ಹಾಡುಗಳು ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಾತ್ರಿ ಸುಮಾರು 2 ಗಂಟೆವರೆಗೂ ವಿಜಯ್ ಪ್ರಕಾಶ್​ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆನೆಗೊಂದಿ ಉತ್ಸವದ ಮೊದಲನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಬಂದವರಿಗೆ ಭರ್ಜರಿ ರಸದೌತಣ ನೀಡಿದವು.

ಆದ್ರೆ ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಡಿಸಿಪಿ ಸುನೀಲಕುಮಾರ್ ನಡುವೆ ಕಿರಿಕ್ ಕೂಡಾ ನಡೆಯಿತು. ಗಾಯಕ ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಈ ಗೊಂದಲ ಉಂಟಾಯಿತು. ಡಿಸಿ ತಾವೊಬ್ಬರೇ ವಿಜಯಪ್ರಕಾಶ್ ಅವರಿಗೆ ಸನ್ಮಾನ ಮಾಡಿದರು ಎಂಬ ವಿಷಯಕ್ಕೆ ಮುನಿಸಿಕೊಂಡ ಶಾಸಕ ಪರಣ್ಣ ಮುನವಳ್ಳಿ ಡಿಸಿ ವಿರುದ್ಧ ಅಸಮಧಾನ ಹೊರಹಾಕಿದರು. ಕೊನೆಗೆ ಗಾಯಕ ವಿಜಯಪ್ರಕಾಶ್ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಶಾಸಕರ ಮನವೊಲಿಸಿದರು.‌ ಮನವೊಲಿಕೆ ಬಳಿಕ ಶಾಸಕ ಪರಣ್ಣ ತಮ್ಮ ಬೆಂಬಲಿಗರೊಂದಿಗೆ ವೇದಿಕೆಗೆ ಬಂದು ಗಾಯಕ ವಿಜಯಪ್ರಕಾಶ್​ಗೆ ಮತ್ತೊಮ್ಮೆ ಸನ್ಮಾನಿಸಿದರು.

ಕೊಪ್ಪಳ: ಆನೆಗೊಂದಿ ಉತ್ಸವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.‌ ಅದರಲ್ಲೂ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ನೆರೆದ ಜನರನ್ನು ರಂಜಿಸಿತು.

ಆನೆಗುಂದಿ ಉತ್ಸವದ ಸಂಗೀತ ರಸದೌತಣ... ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ !

ನೀನೆ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ, ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಗೂ ಅವನೇ ಶ್ರೀಮನ್ ನಾರಾಯಣ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಬಳಿಕ ಚೌಕ ಚಿತ್ರದ ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು, ತರವಲ್ಲ ತಗಿ ನಿನ್ನ ತಂಬೂರಿ ಹಾಡು ಹಾಗೂ ಅವರ ತಂಡದವರು ಹಾಡಿದ ಟಗರು ಬಂತು ಟಗರು ಹಾಡುಗಳು ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಾತ್ರಿ ಸುಮಾರು 2 ಗಂಟೆವರೆಗೂ ವಿಜಯ್ ಪ್ರಕಾಶ್​ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆನೆಗೊಂದಿ ಉತ್ಸವದ ಮೊದಲನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಬಂದವರಿಗೆ ಭರ್ಜರಿ ರಸದೌತಣ ನೀಡಿದವು.

ಆದ್ರೆ ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಡಿಸಿಪಿ ಸುನೀಲಕುಮಾರ್ ನಡುವೆ ಕಿರಿಕ್ ಕೂಡಾ ನಡೆಯಿತು. ಗಾಯಕ ವಿಜಯಪ್ರಕಾಶ್​ಗೆ ಸನ್ಮಾನ ಮಾಡುವ ವಿಚಾರದಲ್ಲಿ ಈ ಗೊಂದಲ ಉಂಟಾಯಿತು. ಡಿಸಿ ತಾವೊಬ್ಬರೇ ವಿಜಯಪ್ರಕಾಶ್ ಅವರಿಗೆ ಸನ್ಮಾನ ಮಾಡಿದರು ಎಂಬ ವಿಷಯಕ್ಕೆ ಮುನಿಸಿಕೊಂಡ ಶಾಸಕ ಪರಣ್ಣ ಮುನವಳ್ಳಿ ಡಿಸಿ ವಿರುದ್ಧ ಅಸಮಧಾನ ಹೊರಹಾಕಿದರು. ಕೊನೆಗೆ ಗಾಯಕ ವಿಜಯಪ್ರಕಾಶ್ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಶಾಸಕರ ಮನವೊಲಿಸಿದರು.‌ ಮನವೊಲಿಕೆ ಬಳಿಕ ಶಾಸಕ ಪರಣ್ಣ ತಮ್ಮ ಬೆಂಬಲಿಗರೊಂದಿಗೆ ವೇದಿಕೆಗೆ ಬಂದು ಗಾಯಕ ವಿಜಯಪ್ರಕಾಶ್​ಗೆ ಮತ್ತೊಮ್ಮೆ ಸನ್ಮಾನಿಸಿದರು.

Intro:Body:ಕೊಪ್ಪಳ:- ಆನೆಗುಂದಿ ಉತ್ಸವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.‌ ಅದರಲ್ಲೂ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ನೆರೆದ ಜನರನ್ನು ರಂಜಿಸಿತು. ವಿಜಯಪ್ರಕಾಶ್ ತಂಡದ ಸಂಗೀಯ ಕಾರ್ಯಕ್ರಮ ರಾತ್ರಿ ತಡವಾಗಿ ಆರಂಭವಾಯಿತು. ಅವರ ಸಂಗೀತ ಕಾರ್ಯಕ್ರಮ ನೋಡಲೆಂದೆ ಕಾದು ಕುಳಿತಿದ್ದ ಜನರು ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು. ನೀನೆ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ, ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಗೂ ಅವನೇ ಶ್ರೀಮನ್ ನಾರಾಯಣ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಬಳಿಕ ಚೌಕ ಚಿತ್ರದ ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು, ರವಲ್ಲ ತಗಿ ನಿನ್ನ ತಂಬೂರಿ ಹಾಡು ಹಾಗೂ ಅವರ ತಂಡದವರು ಹಾಡಿದ ಟಗರು ಬಂತು ಟಗರು ಹಾಡುಗಳು ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಾತ್ರಿ ಸುಮಾರು 2 ಗಂಟೆವರೆಗೂ ವಿಜಯ್ ಪ್ರಕಾಶ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆನೆಗೊಂದಿ ಉತ್ಸವದ ಮೊದಲನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಬಂದವರಿಗೆ ಭರ್ಜರಿ ರಸದೌತಣ ನೀಡಿದವು. ಇನ್ನು ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಡಿಸಿ ಪಿ. ಸುನೀಲಕುಮಾರ್ ನಡುವೆ ಕಿರಿಕ್ ಕೂಡಾ ನಡೆಯಿತು. ಗಾಯಕ ವಿಜಯಪ್ರಕಾಶ್ ಗೆ ಸನ್ಮಾನ ಮಾಡುವ ವಿಚಾರದಲ್ಲಿ ಕಿರಿಕ್ ಆಯಿತು. ಡಿಸಿ ತಾವೊಬ್ಬರೆ ವಿಜಯಪ್ರಕಾಶ್ ಅವರಿಗೆ ಸನ್ಮಾನ ಮಾಡಿದರು ಎಂಬ ವಿಷಯಕ್ಕೆ ಮುನಿಸಿಕೊಂಡ ಶಾಸಕ ಪರಣ್ಣ ಮುನವಳ್ಳಿ ಡಿಸಿ ವಿರುದ್ಧ ಅಸಮಧಾನ ಹೊರಹಾಕಿದರು. ಕೊನೆಗೆ ಗಾಯಕ ವಿಜಯಪ್ರಕಾಶ್ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಶಾಸಕರ ಮನವೊಲಿಸಿದರು.‌ ವಿಪಿ ಮನವೊಲಿಕೆ ಬಳಿಕ ಶಾಸಕ ಪರಣ್ಣ ತಮ್ಮ ಬೆಂಬಲಿಗರೊಂದಿಗೆ ವೇದಿಕೆಗೆ ಬಂದು ಗಾಯಕ ವಿಜಯಪ್ರಕಾಶ್ ಗೆ ಮತ್ತೊಮ್ಮೆ ಸನ್ಮಾನಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.