ETV Bharat / state

ಗಂಗಾವತಿ: ನೂತನ ರೇಲ್ವೆ ಮಾರ್ಗ, ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಚಾಲನೆ

ಗಂಗಾವತಿ - ಹುಬ್ಬಳ್ಳಿ ನಡುವೆ ನೂತನ‌ ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಹಸಿರು ನಿಶಾನೆ ತೋರಿದರು.

author img

By

Published : Mar 4, 2019, 4:32 PM IST

ಸಂಸದ ಸಂಗಣ್ಣ ಕರಡಿ ಚಾಲನೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್​ನಿಂದ ಗಂಗಾವತಿವರೆಗೆ ನೂತನ ರೇಲ್ವೆ ಮಾರ್ಗ ಉದ್ಘಾಟನೆ ಹಾಗೂ ಗಂಗಾವತಿ - ಹುಬ್ಬಳ್ಳಿ ನೂತನ‌ ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಹಸಿರು ನಿಶಾನೆ ತೋರಿದರು.

ಬಳಿಕ‌ ಮಾತನಾಡಿ, ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮುನಿರಾಬಾದ್ -ಮೆಹಬೂಬನಗರ ರೇಲ್ವೆ ಯೋಜನೆಗೆ ಅಡಿಗಲ್ಲು ಹಾಕಿದರು. ಈ ಸಂದರ್ಭದಲ್ಲಿ ದೇವೇಗೌಡ ಹಾಗೂ ರಾಯರಡ್ಡಿ ಅವರನ್ನು ನಾವು ಸ್ಮರಿಸಬೇಕು. ಬಹಳ ಹಿಂದಿನಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಮಗಾರಿಯ ವೇಗಪಡಿದುಕೊಂಡು ಈಗ ಗಂಗಾವತಿವರೆಗೆ ಪೂರ್ಣಗೊಂಡು, ಇಂದಿನಿಂದ‌ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿದೆ ಎಂದರು.

ನೂತನ ರೇಲ್ವೆ ಮಾರ್ಗ ಹಾಗೂ ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಚಾಲನೆ

ಕೊಪ್ಪಳ‌ ಲೋಕಸಭಾ ವ್ಯಾಪ್ತಿಯಲ್ಲಿನ ಸಿಂಧನೂರುವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆ‌ ಪೂರ್ಣಗೊಳ್ಳಲಿದೆ. ಯೋಜನೆಗೆ ಭೂಮಿ ಕೊಟ್ಟ ರೈತರನ್ನು ನಾವು ಸ್ಮರಿಸಬೇಕು ಎಂದರು. ಇನ್ನು ಈಗ ಗಂಗಾವತಿವರೆಗೆ ರೈಲು ಆರಂಭಗೊಂಡಿರೋದು ಈ ಭಾಗದ ಜನರಿಗೆ ತುಂಬಾ ಸಂತಸ ನೀಡಿದೆ ಎಂದರು.

undefined

ಇದಕ್ಕೂ‌ ಮೊದಲು ಗಂಗಾವತಿ ರೇಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಆಗಮಿಸಿದ ಸಂಸದ ಸಂಗಣ್ಣ ಕರಡಿ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಅಭಿಮಾನಿಗಳು ಎತ್ತಿಕೊಂಡು ಅಭಿಮಾನ ವ್ಯಕ್ತಪಡಿಸಿದರು. ಇನ್ನು ಮೊದಲ ಬಾರಿಗೆ ತಮ್ಮೂರಿಗೆ ಬಂದ ರೇಲು ನೋಡಲು ಮಕ್ಕಳಾದಿಯಾಗಿ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು.

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್​ನಿಂದ ಗಂಗಾವತಿವರೆಗೆ ನೂತನ ರೇಲ್ವೆ ಮಾರ್ಗ ಉದ್ಘಾಟನೆ ಹಾಗೂ ಗಂಗಾವತಿ - ಹುಬ್ಬಳ್ಳಿ ನೂತನ‌ ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಹಸಿರು ನಿಶಾನೆ ತೋರಿದರು.

ಬಳಿಕ‌ ಮಾತನಾಡಿ, ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮುನಿರಾಬಾದ್ -ಮೆಹಬೂಬನಗರ ರೇಲ್ವೆ ಯೋಜನೆಗೆ ಅಡಿಗಲ್ಲು ಹಾಕಿದರು. ಈ ಸಂದರ್ಭದಲ್ಲಿ ದೇವೇಗೌಡ ಹಾಗೂ ರಾಯರಡ್ಡಿ ಅವರನ್ನು ನಾವು ಸ್ಮರಿಸಬೇಕು. ಬಹಳ ಹಿಂದಿನಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಮಗಾರಿಯ ವೇಗಪಡಿದುಕೊಂಡು ಈಗ ಗಂಗಾವತಿವರೆಗೆ ಪೂರ್ಣಗೊಂಡು, ಇಂದಿನಿಂದ‌ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿದೆ ಎಂದರು.

ನೂತನ ರೇಲ್ವೆ ಮಾರ್ಗ ಹಾಗೂ ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಚಾಲನೆ

ಕೊಪ್ಪಳ‌ ಲೋಕಸಭಾ ವ್ಯಾಪ್ತಿಯಲ್ಲಿನ ಸಿಂಧನೂರುವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆ‌ ಪೂರ್ಣಗೊಳ್ಳಲಿದೆ. ಯೋಜನೆಗೆ ಭೂಮಿ ಕೊಟ್ಟ ರೈತರನ್ನು ನಾವು ಸ್ಮರಿಸಬೇಕು ಎಂದರು. ಇನ್ನು ಈಗ ಗಂಗಾವತಿವರೆಗೆ ರೈಲು ಆರಂಭಗೊಂಡಿರೋದು ಈ ಭಾಗದ ಜನರಿಗೆ ತುಂಬಾ ಸಂತಸ ನೀಡಿದೆ ಎಂದರು.

undefined

ಇದಕ್ಕೂ‌ ಮೊದಲು ಗಂಗಾವತಿ ರೇಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಆಗಮಿಸಿದ ಸಂಸದ ಸಂಗಣ್ಣ ಕರಡಿ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಅಭಿಮಾನಿಗಳು ಎತ್ತಿಕೊಂಡು ಅಭಿಮಾನ ವ್ಯಕ್ತಪಡಿಸಿದರು. ಇನ್ನು ಮೊದಲ ಬಾರಿಗೆ ತಮ್ಮೂರಿಗೆ ಬಂದ ರೇಲು ನೋಡಲು ಮಕ್ಕಳಾದಿಯಾಗಿ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು.

Intro:


Body:ಕೊಪ್ಪಳ:- ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ನಿಂದ ಗಂಗಾವತಿ ವರೆಗೆ ನೂತನ ರೇಲ್ವೆ ಮಾರ್ಗ ಉದ್ಘಾಟನೆ ಹಾಗೂ ಗಂಗಾವತಿ - ಹುಬ್ಬಳ್ಳಿ ನೂತನ‌ ಪ್ಯಾಸೆಂಜರ್ ರೇಲ್ವೆಗೆ ಸಂಸದ ಸಂಗಣ್ಣ ಕರಡಿ ಅವರು ಹಸಿರು ನಿಶಾನೆ ತೋರಿಸಿದರು. ಗಂಗಾವತಿ ರೇಲ್ವೆ ನಿಲ್ದಾಣದಲ್ಲಿ ನೂತನ ರೇಲ್ವೆಗೆ ಸಂಸದರು ಹಾಗೂ ಸ್ಥಳಿಯ ಶಾಸಕರು ಹಸಿರು ನಿಶಾನೆ ತೋರಿಸಿದರು. ಬಳಿಕ‌ ಮಾತನಾಡಿದ ಸಂಸದ ಸಂಗಣ್ಣ ಕರಡಿ, ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮುನಿರಾಬಾದ್ ಮೆಹಬೂಬನಗರ ರೇಲ್ವೆ ಯೋಜನೆಗೆ ಅಡಿಗಲ್ಲು ಹಾಕಿದರು. ಈ ಸಂದರ್ಭದಲ್ಲಿ ದೇವೇಗೌಡ ಹಾಗೂ ರಾಯರಡ್ಡಿ ಅವರನ್ನು ನಾವು ಸ್ಮರಿಸಬೇಕು. ಈ ನಡುವೆ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಮಗಾರಿಯ ವೇಗಪಡಿದುಕೊಂಡು ಈಗ ಗಂಗಾವತಿವರೆಗೆ ಪೂರ್ಣಗೊಂಡು ಇಂದಿನಿಂದ‌ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿದೆ. ಕೊಪ್ಪಳ‌ ಲೋಕಸಭಾ ವ್ಯಾಪ್ತಿಯಲ್ಲಿನ ಸಿಂಧನೂರುವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆ‌ ಪೂರ್ಣಗೊಳ್ಳಲಿದೆ. ಯೋಜನೆಗೆ ಭೂಮಿ ಕೊಟ್ಟ ರೈತರನ್ನು ನಾವು ಸ್ಮರಿಸಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಮಾತನಾಡಿದರು. ಇನ್ನು ಈಗ ಗಂಗಾವತಿ ವರೆಗೆ ರೈಲು ಆರಂಭಗೊಂಡಿರೋದು ಈ ಭಾಗದ ಜನರಿಗೆ ತುಂಬಾ ಸಂತಸ ನೀಡಿದೆ ಎಂದರು. ಇದಕ್ಕೂ‌ ಮೊದಲು ಗಂಗಾವತಿ ರೇಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಆಗಮಿಸಿದ ಸಂಸದ ಸಂಗಣ್ಣ ಕರಡಿ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಅಭಿಮಾನಿಗಳು ಎತ್ತಿಕೊಂಡು ಅಭಿಮಾನ ವ್ಯಕ್ತಪಡಿಸಿದರು. ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಸೇರಿದಂತೆ ರೇಲ್ವೆ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ರು. ಇನ್ನು ಮೊದಲ ಬಾರಿಗೆ ತಮ್ಮೂರಿಗೆ ಬಂದ ರೇಲ್ವೆ ನೋಡಲು ಮಕ್ಕಳಾದಿಯಾಗಿ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.