ಗಂಗಾವತಿ: ಬರೋಬ್ಬರಿ ಏಳು ತಿಂಗಳ ಸುಧೀರ್ಘ ಸಮಯದ ನಂತರ ಮೊದಲ ಬಾರಿಗೆ ಚಿತ್ರಮಂದಿರಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದ್ದರಿಂದ ನಗರದಲ್ಲಿಯೂ ಚಿತ್ರಮಂದಿರ ಆರಂಭಕ್ಕೆ ಚಟುವಟಿಕೆ ನಡೆದಿವೆ.
![Movie theater opened in Gangavathi after 7 months](https://etvbharatimages.akamaized.net/etvbharat/prod-images/kn-gvt-01-16-only-one-teater-open-among-17-after-covid-vis-kac10005_16102020180841_1610f_1602851921_1076.jpg)
ನಗರದ ಏಳು, ಶ್ರೀರಾಮನಗರ, ಸಿದ್ದಾಪುರ ತಲಾ ಒಂದು, ಕಾರಟಗಿ ಹಾಗೂ ಕನಕಗಿರಿಯ ತಲಾ ಎರಡು, ಒಟ್ಟು 13 ಚಿತ್ರ ಮಂದಿರಗಳ ಪೈಕಿ ಗಂಗಾವತಿ ನಗರದಲ್ಲಿ ಕೇವಲ ಒಂದೇ ಒಂದು ಚಿತ್ರಮಂದಿರ ಆರಂಭವಾಯಿತು.
ಮಹಾತ್ಮ ಗಾಂಧಿ ವೃತ್ತದ ಸಮೀಪ ಇರುವ ಹೆಚ್ಎಂಎಸ್ ಚಿತ್ರಮಂದಿರ ಎಂದಿನಂತೆ ದಿನಕ್ಕೆ ನಾಲ್ಕು ಶೋ ಆಯೋಜಿಸಿತ್ತು. ಮಾರ್ನಿಂಗ್ ಶೋಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. 50ಕ್ಕೂ ಹೆಚ್ಚು ಜನ ಟಿಕೆಟ್ ಖರೀದಿಸಿ ಮೊದಲ ಶೋ ನೋಡಿದರು.
ಇತ್ತೀಚೆಗೆ ನಿಧನವಾದ ನಟ ಚಿರಂಜೀವಿ ಸರ್ಜಾ ಅವರ ಶಿವಾರ್ಜುನ ಚಿತ್ರವು ಈ ಸಿನಿಮಾ ಮಂದಿರದಲ್ಲಿ ತೆರೆ ಕಂಡಿತ್ತು. ಕೇವಲ 50 ಪ್ರೇಕ್ಷಕರಿಂದ ಚಿತ್ರಮಂದಿರದ ನಿರ್ವಹಣೆಯ ಖರ್ಚು ಸಿಗದು. ಆದರೆ, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬಲ್ಲದು. ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂದು ಮಾಲೀಕ ಮಂಜುನಾಥ ಹೇಳಿದರು.