ETV Bharat / state

ವಿರೂಪಾಪುರ ಗಡ್ಡೆಯಲ್ಲಿ ಚಿರತೆ ದಾಳಿ ಪ್ರಕರಣ: ಶೂಟ್ ಅಟ್ ಸೈಟ್ ಆದೇಶಕ್ಕೆ ಚಿಂತನೆ - Forest Minister Anand Singh

ಜನವಸತಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಯಿಂದಾಗಿ ಈಗಾಗಲೇ ಎರಡು ಜೀವ ಬಲಿಯಾಗಿದ್ದು, ಶೂಟ್ ಅಟ್ ಸೈಟ್​​ಗೆ ಚಿಂತನೆ‌ ನಡೆಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

minister anand sing talk about shoot at signt news
ಶೂಟ್ ಅಟ್ ಸೈಟ್ ಆದೇಶಕ್ಕೆ ಚಿಂತನೆ, ಆನಂದ್ ಸಿಂಗ್
author img

By

Published : Jan 2, 2021, 6:47 PM IST

ಗಂಗಾವತಿ: ತಾಲೂಕಿನ ವಿರೂಪಾಪುರ ಗಡ್ಡೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಆಗ್ರಹಕ್ಕೆ ಮಣಿದು ಸಚಿವ ಆನಂದ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ‌ ಅಹವಾಲು ಆಲಿಸಿದರು.

ಶೂಟ್ ಅಟ್ ಸೈಟ್ ಆದೇಶಕ್ಕೆ ಚಿಂತನೆ: ಆನಂದ್ ಸಿಂಗ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂಟ್ ಅಟ್ ಸೈಟ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೋಮವಾರ ಅಥವಾ ಮಂಗಳವಾರದೊಳಗೆ ಆದೇಶಕ್ಕೆ ಪ್ರಯತ್ನಿಸಲಾಗುವುದು. ಮೃತ ಯುವಕನ ಕುಟುಂಬಕ್ಕೆ ಇಲಾಖೆಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ಕೊಡಿಸಲಾಗುವುದು ಎಂದರು.

ಓದಿ: ಚಿರತೆ ದಾಳಿಗೆ ಯುವಕ ಬಲಿ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು

ಕೇವಲ ಗಂಗಾವತಿ ಮಾತ್ರವಲ್ಲ ಸಾಕಷ್ಟು ಕಡೆ ಹುಲಿ, ಚಿರತೆ, ಕರಡಿ ದಾಳಿ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರವೂ ಸಾಕಷ್ಟು ಬಾರಿ ಚರ್ಚಿಸಿದೆ. ಆದರೆ ಶೂಟ್ ಅಟ್ ಸೈಟ್ ಎಂದು ತಕ್ಷಣಕ್ಕೆ ಆದೇಶ ಮಾಡಲು ಆಗುವುದಿಲ್ಲ. ಇದಕ್ಕೆ ಕೆಲ ಕಾನೂನು ತೊಡಕು ಇದ್ದು, ಅದನ್ನು ಮಾಡಬೇಕಿದೆ ಎಂದರು.

ಗಂಗಾವತಿ: ತಾಲೂಕಿನ ವಿರೂಪಾಪುರ ಗಡ್ಡೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಆಗ್ರಹಕ್ಕೆ ಮಣಿದು ಸಚಿವ ಆನಂದ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ‌ ಅಹವಾಲು ಆಲಿಸಿದರು.

ಶೂಟ್ ಅಟ್ ಸೈಟ್ ಆದೇಶಕ್ಕೆ ಚಿಂತನೆ: ಆನಂದ್ ಸಿಂಗ್

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂಟ್ ಅಟ್ ಸೈಟ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೋಮವಾರ ಅಥವಾ ಮಂಗಳವಾರದೊಳಗೆ ಆದೇಶಕ್ಕೆ ಪ್ರಯತ್ನಿಸಲಾಗುವುದು. ಮೃತ ಯುವಕನ ಕುಟುಂಬಕ್ಕೆ ಇಲಾಖೆಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ಕೊಡಿಸಲಾಗುವುದು ಎಂದರು.

ಓದಿ: ಚಿರತೆ ದಾಳಿಗೆ ಯುವಕ ಬಲಿ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು

ಕೇವಲ ಗಂಗಾವತಿ ಮಾತ್ರವಲ್ಲ ಸಾಕಷ್ಟು ಕಡೆ ಹುಲಿ, ಚಿರತೆ, ಕರಡಿ ದಾಳಿ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರವೂ ಸಾಕಷ್ಟು ಬಾರಿ ಚರ್ಚಿಸಿದೆ. ಆದರೆ ಶೂಟ್ ಅಟ್ ಸೈಟ್ ಎಂದು ತಕ್ಷಣಕ್ಕೆ ಆದೇಶ ಮಾಡಲು ಆಗುವುದಿಲ್ಲ. ಇದಕ್ಕೆ ಕೆಲ ಕಾನೂನು ತೊಡಕು ಇದ್ದು, ಅದನ್ನು ಮಾಡಬೇಕಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.