ETV Bharat / state

ರಿಪೇರಿ ಮಾಡುತ್ತಿದ್ದಾಗಲೇ ಟಿಪ್ಪರ್​ ಚಲಾಯಿಸಿದ ಡ್ರೈವರ್​: ಮೆಕ್ಯಾನಿಕ್​ ಸ್ಥಳದಲ್ಲೇ ಸಾವು - ಟಿಪ್ಪರ್​ ಹರಿದು ಮೆಕ್ಯಾನಿಕ್​ ಸ್ಥಳದಲ್ಲೇ ಸಾವು

ಟಿಪ್ಪರ್​ ಚಾಲಕನ ಯಡವಟ್ಟಿಗೆ ಮೆಕ್ಯಾನಿಕ್​ ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣ ಹೊರವಲಯದ ಕೃಷ್ಣಗಿರಿ ಕಾಲೋನಿಯ ಬಳಿ ನಡೆದಿದೆ.

mechanic-killed-on-the-spot-in-kushtagi
ಮೆಕ್ಯಾನಿಕ್​ ಸಾವು
author img

By

Published : Jun 16, 2022, 9:38 PM IST

ಕುಷ್ಟಗಿ(ಕೊಪ್ಪಳ): ಬ್ರೇಕ್ ರಿಪೇರಿ ಮಾಡುತ್ತಿರುವಾಗಲೇ ಟಿಪ್ಪರ್ ಹರಿದು ಮೆಕ್ಯಾನಿಕ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣ ಹೊರವಲಯದ ಕೃಷ್ಣಗಿರಿ ಕಾಲೋನಿಯ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪರಶುರಾಮ್ ಗ್ಯಾರೇಜ್​ನ ಶಿವಪ್ಪ ರಾಮಣ್ಣ ಬೂದರ (33) ಮೃತ ಮೆಕ್ಯಾನಿಕ್​ ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ಶಿವಪ್ಪ ಟಿಪ್ಪರ್ ಅಡಿಯಲ್ಲಿ ಮಲಗಿ ಬ್ರೇಕ್ ರಿಪೇರಿ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಟಿಪ್ಪರ್ ಚಾಲಕ ವಾಹನವನ್ನು ಸ್ಟಾರ್ಟ್​​ ಮಾಡಿದ್ದರಿಂದ ಟಿಪ್ಪರ್ 30 ಅಡಿ ಮುಂದೆ ಚಲಿಸಿದ್ದು, ಟೈರ್ ತಲೆ ಮೇಲೆ ಹರಿದು ಮೆಕ್ಯಾನಿಕ್ ಸ್ಥಳದಲ್ಲೇ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮೆಕ್ಯಾನಿಕ್ ಶಿವಪ್ಪನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಬದಿ ಡ್ರಗ್ಸ್ ಮಾರುತ್ತಿದ್ದ ತಾಂಜೇನಿಯಾದ ಮಹಿಳೆ ಬಂಧನ

ಕುಷ್ಟಗಿ(ಕೊಪ್ಪಳ): ಬ್ರೇಕ್ ರಿಪೇರಿ ಮಾಡುತ್ತಿರುವಾಗಲೇ ಟಿಪ್ಪರ್ ಹರಿದು ಮೆಕ್ಯಾನಿಕ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣ ಹೊರವಲಯದ ಕೃಷ್ಣಗಿರಿ ಕಾಲೋನಿಯ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪರಶುರಾಮ್ ಗ್ಯಾರೇಜ್​ನ ಶಿವಪ್ಪ ರಾಮಣ್ಣ ಬೂದರ (33) ಮೃತ ಮೆಕ್ಯಾನಿಕ್​ ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ಶಿವಪ್ಪ ಟಿಪ್ಪರ್ ಅಡಿಯಲ್ಲಿ ಮಲಗಿ ಬ್ರೇಕ್ ರಿಪೇರಿ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಟಿಪ್ಪರ್ ಚಾಲಕ ವಾಹನವನ್ನು ಸ್ಟಾರ್ಟ್​​ ಮಾಡಿದ್ದರಿಂದ ಟಿಪ್ಪರ್ 30 ಅಡಿ ಮುಂದೆ ಚಲಿಸಿದ್ದು, ಟೈರ್ ತಲೆ ಮೇಲೆ ಹರಿದು ಮೆಕ್ಯಾನಿಕ್ ಸ್ಥಳದಲ್ಲೇ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮೆಕ್ಯಾನಿಕ್ ಶಿವಪ್ಪನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಬದಿ ಡ್ರಗ್ಸ್ ಮಾರುತ್ತಿದ್ದ ತಾಂಜೇನಿಯಾದ ಮಹಿಳೆ ಬಂಧನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.