ETV Bharat / state

ಪುರಿ ಜಗನ್ನಾಥನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೊರಟ ವ್ಯಕ್ತಿ - Nagabhushana shivacharya swamiji news

ಮುಂಡರಗಿ ತಾಲೂಕಿನ ಕಪ್ಪತಗುಡ್ಡದಿಂದ ಅರಣ್ಯಗಿರಿ ಎಂಬ 51 ವರ್ಷದ ವ್ಯಕ್ತಿ ಕಾಲ್ನಡಿಗೆ ಮೂಲಕ ಸುಮಾರು 1,600 ಕಿ.ಮೀ ದೂರದಲ್ಲಿರುವ ಪುರಿಯ ಜಗನ್ನಾಥನ ದೇಗುಲ ತಲುಪಲು ಮುಂದಾಗಿದ್ದಾರೆ.

Koppal
Koppal
author img

By

Published : Jul 17, 2020, 2:40 PM IST

Updated : Jul 17, 2020, 3:53 PM IST

ಗಂಗಾವತಿ: ಕಾಲ್ನಡಿಗೆ ಮೂಲಕ ಪುರಿಯ ಜಗನ್ನಾಥನ ದರ್ಶನ ಪಡೆಯಲು ಹೊರಟ ವ್ಯಕ್ತಿಯನ್ನು ಮರಳಿ ಸಮೀಪ ಹೆಬ್ಬಾಳದ ಬೋಳಾಡಿ ಬಸವೇಶ್ವರ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಮ್ಮ ಮಠಕ್ಕೆ ಕರೆಯಿಸಿಕೊಂಡು ಗೌರವಿಸಿದರು.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡದಿಂದ ಅದೇ ಗ್ರಾಮದ ಅರಣ್ಯಗಿರಿ ಎಂಬ 51 ವರ್ಷದ ವ್ಯಕ್ತಿ ಕಾಲ್ನಡಿಗೆ ಮೂಲಕ ಪುರಿಯ ಜಗನ್ನಾಥನ ದೇಗುಲಕ್ಕೆ ಹೊರಟು ನಿಂತ ಮಾಹಿತಿ ತಿಳಿದ ಸ್ವಾಮೀಜಿ, ಹೆಬ್ಬಾಳದಲ್ಲಿರುವ ತಮ್ಮ ಮಠಕ್ಕೆ ವ್ಯಕ್ತಿಯನ್ನು ಆಹ್ವಾನಿಸಿದರು.

ಬಳಿಕ ಆತನಿಗೆ ಶಾಲು ಹೊದಿಸಿ, ರುದ್ರಾಕ್ಷಿ ಹಾಗೂ ಅಗತ್ಯ ವಸ್ತುಗಳನ್ನು ನೀಡಿ ಗೌರವಿಸಿ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು. ಗದಗದಿಂದ ಗಂಗಾವತಿಗೆ ಬರಲು ಒಂದು ವಾರದ ಸಮಯ ಹಿಡಿದಿದ್ದು, ಆಗಸ್ಟ್ ಕೊನೇಯ ವಾರಕ್ಕೆ ಪುರಿ ದೇಗುಲ ತಲುಪುವುದಾಗಿ ಅರಣ್ಯಗಿರಿ ಈ ಸಂದರ್ಭದಲ್ಲಿ ಹೇಳಿದರು.

ಗಂಗಾವತಿ: ಕಾಲ್ನಡಿಗೆ ಮೂಲಕ ಪುರಿಯ ಜಗನ್ನಾಥನ ದರ್ಶನ ಪಡೆಯಲು ಹೊರಟ ವ್ಯಕ್ತಿಯನ್ನು ಮರಳಿ ಸಮೀಪ ಹೆಬ್ಬಾಳದ ಬೋಳಾಡಿ ಬಸವೇಶ್ವರ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಮ್ಮ ಮಠಕ್ಕೆ ಕರೆಯಿಸಿಕೊಂಡು ಗೌರವಿಸಿದರು.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡದಿಂದ ಅದೇ ಗ್ರಾಮದ ಅರಣ್ಯಗಿರಿ ಎಂಬ 51 ವರ್ಷದ ವ್ಯಕ್ತಿ ಕಾಲ್ನಡಿಗೆ ಮೂಲಕ ಪುರಿಯ ಜಗನ್ನಾಥನ ದೇಗುಲಕ್ಕೆ ಹೊರಟು ನಿಂತ ಮಾಹಿತಿ ತಿಳಿದ ಸ್ವಾಮೀಜಿ, ಹೆಬ್ಬಾಳದಲ್ಲಿರುವ ತಮ್ಮ ಮಠಕ್ಕೆ ವ್ಯಕ್ತಿಯನ್ನು ಆಹ್ವಾನಿಸಿದರು.

ಬಳಿಕ ಆತನಿಗೆ ಶಾಲು ಹೊದಿಸಿ, ರುದ್ರಾಕ್ಷಿ ಹಾಗೂ ಅಗತ್ಯ ವಸ್ತುಗಳನ್ನು ನೀಡಿ ಗೌರವಿಸಿ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು. ಗದಗದಿಂದ ಗಂಗಾವತಿಗೆ ಬರಲು ಒಂದು ವಾರದ ಸಮಯ ಹಿಡಿದಿದ್ದು, ಆಗಸ್ಟ್ ಕೊನೇಯ ವಾರಕ್ಕೆ ಪುರಿ ದೇಗುಲ ತಲುಪುವುದಾಗಿ ಅರಣ್ಯಗಿರಿ ಈ ಸಂದರ್ಭದಲ್ಲಿ ಹೇಳಿದರು.

Last Updated : Jul 17, 2020, 3:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.