ETV Bharat / state

ಕ್ಯಾಶಿಯರ್​ಗೆ ಕೊರೊನಾ: ಕುಷ್ಟಗಿಯ ಎಸ್​ಬಿಐ ಬ್ಯಾಂಕ್​ ಸೀಲ್​​ಡೌನ್

author img

By

Published : May 1, 2021, 9:43 AM IST

ಕುಷ್ಟಗಿಯ ಮಾರುತಿ ವೃತ್ತದಲ್ಲಿರುವ ಎಸ್​ಬಿಐ ಬ್ಯಾಂಕ್​ನ ಕ್ಯಾಶಿಯರ್​ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್​ನ್ನು ಸೀಲ್​​ಡೌನ್ ಮಾಡಲಾಗಿದೆ.

kushtagi
ಕುಷ್ಟಗಿಯ ಎಸ್​ಬಿಐ ಬ್ಯಾಂಕ್​ ಸೀಲ್​​ಡೌನ್

ಕುಷ್ಟಗಿ (ಕೊಪ್ಪಳ): ಇಲ್ಲಿನ ಮಾರುತಿ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನ ಕ್ಯಾಶಿಯರ್​ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್​ನ್ನು ಸೀಲ್​​ಡೌನ್ ಮಾಡಲಾಗಿದೆ.

ಕುಷ್ಟಗಿಯಲ್ಲಿ ಜನರ ಅನಗತ್ಯ ಓಡಾಟ ಹೆಚ್ಚಳ

ಕಳೆದ ಏಪ್ರಿಲ್​ 12ರಂದು ಬ್ಯಾಂಕ್​ನ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಮ್​ ಐಸೋಲೇಷನ್​​ನಲ್ಲಿದ್ದರು. ಏ. 28ರಂದು ಬ್ಯಾಂಕ್​ನ ಕ್ಯಾಶಿಯರ್​ಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದ್ದರು. ಶುಕ್ರವಾರ ಅವರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಹೀಗಾಗಿ, ಬ್ಯಾಂಕ್​ಗೆ ಸ್ಯಾನಿಟೈಸರ್​ ಸಿಂಪಡಿಸಿ ಸೀಲ್​​ಡೌನ್ ಮಾಡಲಾಗಿದೆ.

ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾ.ಪಂ. ಪಿಡಿಒ ಹಾಗೂ ಬಿಜಕಲ್ ಗ್ರಾ.ಪಂ.ಕಾರ್ಯದರ್ಶಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಅನಗತ್ಯ ಓಡಾಟ ಹೆಚ್ಚಳ:

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಕುಂಟು ನೆಪ ಹೇಳಿ ಓಡಾಡುವ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಓದಿ: ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಇ ಕೋವಿಡ್​​ಗೆ ಬಲಿ

ಕುಷ್ಟಗಿ (ಕೊಪ್ಪಳ): ಇಲ್ಲಿನ ಮಾರುತಿ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನ ಕ್ಯಾಶಿಯರ್​ಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಬ್ಯಾಂಕ್​ನ್ನು ಸೀಲ್​​ಡೌನ್ ಮಾಡಲಾಗಿದೆ.

ಕುಷ್ಟಗಿಯಲ್ಲಿ ಜನರ ಅನಗತ್ಯ ಓಡಾಟ ಹೆಚ್ಚಳ

ಕಳೆದ ಏಪ್ರಿಲ್​ 12ರಂದು ಬ್ಯಾಂಕ್​ನ ವ್ಯವಸ್ಥಾಪಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಹೋಮ್​ ಐಸೋಲೇಷನ್​​ನಲ್ಲಿದ್ದರು. ಏ. 28ರಂದು ಬ್ಯಾಂಕ್​ನ ಕ್ಯಾಶಿಯರ್​ಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದ್ದರು. ಶುಕ್ರವಾರ ಅವರ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಹೀಗಾಗಿ, ಬ್ಯಾಂಕ್​ಗೆ ಸ್ಯಾನಿಟೈಸರ್​ ಸಿಂಪಡಿಸಿ ಸೀಲ್​​ಡೌನ್ ಮಾಡಲಾಗಿದೆ.

ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾ.ಪಂ. ಪಿಡಿಒ ಹಾಗೂ ಬಿಜಕಲ್ ಗ್ರಾ.ಪಂ.ಕಾರ್ಯದರ್ಶಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಅನಗತ್ಯ ಓಡಾಟ ಹೆಚ್ಚಳ:

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಕುಂಟು ನೆಪ ಹೇಳಿ ಓಡಾಡುವ ಜನರ ಸಂಖ್ಯೆ ಹೆಚ್ಚಳವಾಗಿದ್ದು, ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಓದಿ: ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಇ ಕೋವಿಡ್​​ಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.