ETV Bharat / state

ಎಸ್​ಬಿಐ ಬ್ಯಾಂಕ್​ನಲ್ಲಿ ಕನ್ನಡದಲ್ಲೇ ವ್ಯವಹರಿಸುವಂತೆ ಒತ್ತಾಯ

ಎಸ್​ಬಿಐ ಬ್ಯಾಂಕ್​​ನಲ್ಲಿ ಕನ್ನಡಿಗರನ್ನು ಕಡೆಗಾಣಿಸಲಾಗುತ್ತಿದ್ದು, ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿ ಹೇರುತ್ತಿದ್ದಾರೆ. ಅಲ್ಲದೇ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಚಲನ್ ಎಲ್ಲವೂ ಇಂಗ್ಲಿಷ್​ ಮತ್ತು ಹಿಂದಿಮಯವಾಗಿದ್ದು, ಕನ್ನಡದಲ್ಲಿ ಎಲ್ಲಿಯೂ ಸ್ಥಾನ ಕಲ್ಪಿಸಿಲ್ಲ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ದೂರಿದೆ.

author img

By

Published : May 27, 2020, 11:32 AM IST

Karnataka Nav nirman Sena forces to deal with Kannada in State Bank of India
ಕರ್ನಾಟಕ ನವ ನಿರ್ಮಾಣ ಸೇನೆ ಒತ್ತಾಯ

ಕುಷ್ಟಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನಲ್ಲಿ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸದೇ ನಿರ್ಲಕ್ಷ್ಯ ವಹಿಸಿರುವ ಕುರಿತು ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಬ್ಯಾಂಕ್​​ನ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಮನವಿ

ಬ್ಯಾಂಕ್​​ನಲ್ಲಿ ಕನ್ನಡಿಗರನ್ನು ಕಡೆಗಾಣಿಸಲಾಗುತ್ತಿದ್ದು, ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಚಲನ್ ಎಲ್ಲವೂ ಇಂಗ್ಲಿಷ್​ ಮತ್ತು ಹಿಂದಿಮಯವಾಗಿದ್ದು, ಕನ್ನಡದಲ್ಲಿ ಎಲ್ಲಿಯೂ ಸ್ಥಾನ ಕಲ್ಪಿಸಿಲ್ಲ ಎಂದು ದೂರಿದರು.

ಅಲ್ಲದೇ ಈ ಬ್ಯಾಂಕಿನ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುವ ಬದಲಿಗೆ ಹಿಂದಿ ಭಾಷೆಯಲ್ಲಿ ಸಂವಹನ ನಡೆಸುತ್ತಿರುವುದಕ್ಕೆ ಕಾರ್ಯಕರ್ತರು ಖಂಡಿಸಿದರು. ಇನ್ನು ಮುಂದೆ ಪಾಸ್​ ಬುಕ್​, ಚೆಕ್​ ಬುಕ್​ ಹಾಗೂ ರಸೀದಿ ಮೊದಲಾದವುಗಳು ಕನ್ನಡವಾಗಿರಬೇಕು. ಇಲ್ಲವಾದಲ್ಲಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಶ್ಯಾಂಮೂರ್ತಿ ಅಂಜಿ ಎಚ್ಚರಿಕೆ ನೀಡಿದರು.

ಕುಷ್ಟಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನಲ್ಲಿ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸದೇ ನಿರ್ಲಕ್ಷ್ಯ ವಹಿಸಿರುವ ಕುರಿತು ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಬ್ಯಾಂಕ್​​ನ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಮನವಿ

ಬ್ಯಾಂಕ್​​ನಲ್ಲಿ ಕನ್ನಡಿಗರನ್ನು ಕಡೆಗಾಣಿಸಲಾಗುತ್ತಿದ್ದು, ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಚಲನ್ ಎಲ್ಲವೂ ಇಂಗ್ಲಿಷ್​ ಮತ್ತು ಹಿಂದಿಮಯವಾಗಿದ್ದು, ಕನ್ನಡದಲ್ಲಿ ಎಲ್ಲಿಯೂ ಸ್ಥಾನ ಕಲ್ಪಿಸಿಲ್ಲ ಎಂದು ದೂರಿದರು.

ಅಲ್ಲದೇ ಈ ಬ್ಯಾಂಕಿನ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುವ ಬದಲಿಗೆ ಹಿಂದಿ ಭಾಷೆಯಲ್ಲಿ ಸಂವಹನ ನಡೆಸುತ್ತಿರುವುದಕ್ಕೆ ಕಾರ್ಯಕರ್ತರು ಖಂಡಿಸಿದರು. ಇನ್ನು ಮುಂದೆ ಪಾಸ್​ ಬುಕ್​, ಚೆಕ್​ ಬುಕ್​ ಹಾಗೂ ರಸೀದಿ ಮೊದಲಾದವುಗಳು ಕನ್ನಡವಾಗಿರಬೇಕು. ಇಲ್ಲವಾದಲ್ಲಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಶ್ಯಾಂಮೂರ್ತಿ ಅಂಜಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.