ಕೊಪ್ಪಳ : ಕೆರೆಯಂಗಳದಿಂದ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ 10 ಟಿಪ್ಪರ್ ಸೇರಿದಂತೆ ಒಟ್ಟು 17 ವಾಹನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣಾ ಗ್ರಾಮದಲ್ಲಿ ಕೆರೆ ಹಾಗೂ ಇನ್ನಿತರೆ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಕಾರಟಗಿ ತಹಶೀಲ್ದಾರ್ ಆರ್. ಕವಿತಾ ನೇತೃತ್ವದ ಅಧಿಕಾರಿಗಳು ಮಣ್ಣು ಸಾಗಿಸುತ್ತಿದ್ದ 10 ಟಿಪ್ಪರ್, ಒಂದು ಲಾರಿ ಹಾಗೂ 6 ಹಿಟಾಚಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮ ಮಣ್ಣು ಸಾಗಾಣಿಕೆ ವಿರುದ್ಧ ಅಧಿಕಾರಿಗಳು ಹಾಗೂ ಪೊಲೀಸರು ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.