ETV Bharat / state

ಕೊರೊನಾದಿಂದ ಸತ್ತರೆ ನಮ್ಮವರಿಗೆ ಮೃತದೇಹ ಸಹ ಸಿಗಲ್ಲ... ವಲಸೆ ಕಾರ್ಮಿಕರ ಅಳಲು

ಕುಷ್ಟಗಿ ತಾಲೂಕಿನ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಮೇ.15 ರಂದು ರಾಜಸ್ಥಾನಕ್ಕೆ 60 ಜನರನ್ನು, ಮೇ.16 ರಂದು ಉತ್ತರ ಪ್ರದೇಶಕ್ಕೆ 60 ಜನರನ್ನು ಹುಬ್ಬಳ್ಳಿಗೆ ಬಸ್​ ಮೂಲಕ ಕರೆದೊಯ್ದು ಅಲ್ಲಿಂದ ರೈಲಿನಲ್ಲಿ ಅವರ ರಾಜ್ಯಕ್ಕೆ ಕಳುಹಿಸಲಾಗಿದೆ.

author img

By

Published : May 17, 2020, 5:49 PM IST

granaite labours
ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಬಲದೇವ ಪ್ರಜಾಪತಿ

ಕುಷ್ಟಗಿ(ಕೊಪ್ಪಳ): ಕೊರೊನಾದಿಂದ ಸತ್ತರೆ, ನಮ್ಮವರಿಗೆ ನಮ್ಮ ಮೃತದೇಹ ಕೂಡ ಸಿಗುವುದಿಲ್ಲ. ಸೇವಾ ಸಿಂಧು ಆ್ಯಪ್​ ಮೂಲಕ ಊರಿಗೆ ತೆರಳಲು ಇದು ಸರಿಯಾದ ಸಮಯ, ಸಿಕ್ಕಿರುವ ಈ ಅವಕಾಶದಲ್ಲೇ ನಾವು ನಮ್ಮ ಊರುಗಳಿಗೆ ತೆರಳಬೇಕು ಎಂದು ತಾಲೂಕಿನ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

35 ಕ್ಕೂ ಅಧಿಕ ಗ್ರಾನೈಟ್​ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು, ಮೇ.15 ರಂದು ರಾಜಸ್ಥಾನಕ್ಕೆ 60 ಜನರನ್ನು, ಮೇ.16 ರಂದು ಉತ್ತರ ಪ್ರದೇಶಕ್ಕೆ 60 ಜನರನ್ನು ಹುಬ್ಬಳ್ಳಿಗೆ ಬಸ್​ನಲ್ಲಿ ಕರೆದೊಯ್ದು, ಅಲ್ಲಿಂದ ರೈಲಿನಲ್ಲಿ ಅವರ ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಕುಷ್ಟಗಿ ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಬಲದೇವ ಪ್ರಜಾಪತಿ ಮಾಹಿತಿ ನೀಡಿದರು.

ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳಿಸಿದ ಗ್ರಾನೈಟ್ ಮಾಲೀಕರು

ಕೆಎಸ್​ಎಫ್​ಸಿ ಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಗ್ರಾನೈಟ್ ಫ್ಯಾಕ್ಟರಿ ಆರಂಭಿಸಿದ್ದೇವೆ. ತಿಂಗಳಿಗೆ 30ಸಾವಿರ ಸರಾಸರಿ ವಿದ್ಯುತ್ ಬಿಲ್ ಬರುತ್ತಿದೆ. ಕೆಲಸಗಾರರಿಲ್ಲದೇ ಕೆಲಸ ನಿಂತಿದೆ. ಕನಿಷ್ಠ ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲ. ಸರ್ಕಾರ ಈ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರಬೇಕೆಂದು ಪ್ರಜಾಪತಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಷ್ಟಗಿ(ಕೊಪ್ಪಳ): ಕೊರೊನಾದಿಂದ ಸತ್ತರೆ, ನಮ್ಮವರಿಗೆ ನಮ್ಮ ಮೃತದೇಹ ಕೂಡ ಸಿಗುವುದಿಲ್ಲ. ಸೇವಾ ಸಿಂಧು ಆ್ಯಪ್​ ಮೂಲಕ ಊರಿಗೆ ತೆರಳಲು ಇದು ಸರಿಯಾದ ಸಮಯ, ಸಿಕ್ಕಿರುವ ಈ ಅವಕಾಶದಲ್ಲೇ ನಾವು ನಮ್ಮ ಊರುಗಳಿಗೆ ತೆರಳಬೇಕು ಎಂದು ತಾಲೂಕಿನ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

35 ಕ್ಕೂ ಅಧಿಕ ಗ್ರಾನೈಟ್​ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು, ಮೇ.15 ರಂದು ರಾಜಸ್ಥಾನಕ್ಕೆ 60 ಜನರನ್ನು, ಮೇ.16 ರಂದು ಉತ್ತರ ಪ್ರದೇಶಕ್ಕೆ 60 ಜನರನ್ನು ಹುಬ್ಬಳ್ಳಿಗೆ ಬಸ್​ನಲ್ಲಿ ಕರೆದೊಯ್ದು, ಅಲ್ಲಿಂದ ರೈಲಿನಲ್ಲಿ ಅವರ ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಕುಷ್ಟಗಿ ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಬಲದೇವ ಪ್ರಜಾಪತಿ ಮಾಹಿತಿ ನೀಡಿದರು.

ವಲಸೆ ಕಾರ್ಮಿಕರನ್ನು ತವರು ರಾಜ್ಯಕ್ಕೆ ಕಳಿಸಿದ ಗ್ರಾನೈಟ್ ಮಾಲೀಕರು

ಕೆಎಸ್​ಎಫ್​ಸಿ ಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಗ್ರಾನೈಟ್ ಫ್ಯಾಕ್ಟರಿ ಆರಂಭಿಸಿದ್ದೇವೆ. ತಿಂಗಳಿಗೆ 30ಸಾವಿರ ಸರಾಸರಿ ವಿದ್ಯುತ್ ಬಿಲ್ ಬರುತ್ತಿದೆ. ಕೆಲಸಗಾರರಿಲ್ಲದೇ ಕೆಲಸ ನಿಂತಿದೆ. ಕನಿಷ್ಠ ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲ. ಸರ್ಕಾರ ಈ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರಬೇಕೆಂದು ಪ್ರಜಾಪತಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.