ETV Bharat / state

ಸ್ವಂತ ಸೂರಿಗಾಗಿ ಮಂಜೂರಾಗದ ಸಾಲ : ಮನೆಯಿಲ್ಲದೆ ಫಲಾನುಭವಿಗಳ ಪರದಾಟ - undefined

2008 ರಿಂದ 13 ರವರೆಗೆ ಇದ್ದ ರಾಜ್ಯ ಬಿಜೆಪಿ ಸರ್ಕಾರ ವಸತಿ ರಹಿತ ನಗರದ ಬಡ ಜನರಿಗೆ ಸೂರು ಕಟ್ಟಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ರೂಪಿಸಿತ್ತು. ಅದರಂತೆ ಸ್ವಂತ ಮನೆಗಾಗಿ ಜನರು ಸಾಲ ಮಾಡಿಕೊಂಡು ವಂತಿಗೆಯನ್ನು ಪಾವತಿಸಿದ್ದರು. ಆದರೆ ವರ್ಷಗಳು ಉರುಳಿದರು ಮನೆ ಕಟ್ಟಲು ಹಣ ಮಾತ್ರ ಮಂಜೂರಾಗಿಲ್ಲ.

Koppal
author img

By

Published : Jul 22, 2019, 10:14 PM IST

ಕೊಪ್ಪಳ: ಮನೆ ಇಲ್ಲದ ಆ ಬಡ ವಸತಿ ರಹಿತರು ತಮಗೂ ಒಂದು ಸ್ವಂತ ಸೂರು ಸಿಗಲೆಂದು ಸರ್ಕಾರದ ವಾಜಪೇಯಿ ನಗರ ವಸತಿ ಯೋಜನೆಗೆ 30 ಸಾವಿರ ರೂ. ವಂತಿಗೆಯನ್ನು ಪಾವತಿಸಿದ್ದರು. ಹಣ ಪಾವತಿಸಿ ವರ್ಷಗಳೇ ಕಳೆದಿದೆ. ಆದರೆ ಮನೆ ನಿರ್ಮಾಣಕ್ಕೆ ಹಣ ಮಂಜೂರಾಗಿಲ್ಲ. ಇತ್ತ ಸೂರಿಲ್ಲದೇ ಅತ್ತ ಹಣವೂ ಇಲ್ಲದೇ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ.

2008 ರಿಂದ 13 ರವರೆಗೆ ಇದ್ದ ರಾಜ್ಯ ಬಿಜೆಪಿ ಸರ್ಕಾರ ವಸತಿ ರಹಿತ ನಗರದ ಬಡ ಜನರಿಗೆ ಸೂರು ಕಟ್ಟಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ರೂಪಿಸಿತ್ತು. ಅದರಂತೆ ಜಿಲ್ಲಾ ಕೇಂದ್ರ ನಗರದಲ್ಲಿಯೂ ಸಹ 2000 ಜಿ+1 ಮನೆ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆದು ಅವರಿಂದ 30 ಸಾವಿರ ರೂಪಾಯಿ ಹಣವನ್ನು ವಂತಿಗೆಯಾಗಿ ಸಹ ಪಡೆದಿತ್ತು.

ಸ್ವಂತ ಮನೆಯಿಲ್ಲದೆ ಪರದಾಡುತ್ತಿರುವ ಫಲಾನುಭವಿಗಳು

ಅದರಂತೆ 2.10 ಲಕ್ಷದ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು‌. ಉದ್ದೇಶಿತ ಯೋಜನೆಯಂತೆ ಫಲಾನುಭವಿಗಳಿಂದ 30 ಸಾವಿರ ರೂಪಾಯಿ ವಂತಿಗೆ, 70 ಸಾವಿರ ರೂಪಾಯಿ ರಾಜ್ಯ ಸರ್ಕಾರದ ಸಹಾಯಧನ ಹಾಗೂ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ವ್ಯವಸ್ಥೆ ಕಲ್ಪಿಸಿ ಒಟ್ಟು 2.10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿವೇಶನ ಸಹಿತ ಮನೆ ನಿರ್ಮಾಣ ಯೋಜನೆ ಇದಾಗಿದ್ದು, ನೆತ್ತಿಯ ಮೇಲೊಂದು ಸೂರು ಇಲ್ಲದ ಅನೇಕ ಅರ್ಹ ಫಲಾನುಭವಿಗಳು ಸುಮಾರು ಆರೇಳು ವರ್ಷಗಳ ಹಿಂದೆಯೇ ತಮಗೊಂದು ಮನೆ ಸಿಗುತ್ತದೆ ಎಂಬ ಆಸೆಯಿಂದ ಸಾಲಸೂಲ ಮಾಡಿ ಅರ್ಜಿ ಭರ್ತಿ ಮಾಡಿ 30 ಸಾವಿರ ರೂಪಾಯಿ ತಮ್ಮ ಪಾಲಿನ ವಂತಿಗೆ ಹಣವನ್ನು ಸಹ ಪಾವತಿಸಿದ್ದಾರೆ. ಆದರೆ ಈ ಮನೆಗಳು ಇನ್ನೂ ನಿರ್ಮಾಣವಾಗದೆ ಇರೋದು ಫಲಾನುಭವಿಗಳಿಗೆ ಸ್ವಂತ ಮನೆಯ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಯೋಜನೆಯ ಆರಂಭದಲ್ಲಿ ನಗರದ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಸಲು ಪ್ರಾರಂಭವಾಯಿತು. ಆದರೆ ಆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೇವಲ 200 ರಿಂದ 300 ಮನೆಗಳನ್ನು ಮಾತ್ರ ನಿರ್ಮಿಸಿ ಕೈ ಬಿಡಲಾಗಿದೆ. ಇದರಿಂದಾಗಿ ಅಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿದೆ. ಇನ್ನು ಕೆಲವೆಡೆ ಅರೆಬರೆ ಮನೆಗಳನ್ನು ನಿರ್ಮಾಣ ಮಾಡಿ ಕೈಬಿಡಲಾಗಿದೆ. ಹೀಗಾಗಿ ಮನೆ ನಿರ್ಮಾಣವಾಗುತ್ತವೆಯೋ, ಇಲ್ಲವೋ ಎಂಬ ಅನುಮಾನ ಜನರಲ್ಲಿ ಕಾಡಲಾರಂಭಿಸಿದೆ.

ಇತ್ತ ಮನೆಯೂ ಇಲ್ಲದೆ ಮನೆಗಾಗಿ ಮಾಡಿರುವ ಸಾಲವು ಏರುತ್ತಿರೋದು ಫಲಾನುಭವಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಬೇಗನೆ ನಿರ್ಮಾಣ ಮಾಡಿಕೊಡಲು ಮುಂದಾಗಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

ಕೊಪ್ಪಳ: ಮನೆ ಇಲ್ಲದ ಆ ಬಡ ವಸತಿ ರಹಿತರು ತಮಗೂ ಒಂದು ಸ್ವಂತ ಸೂರು ಸಿಗಲೆಂದು ಸರ್ಕಾರದ ವಾಜಪೇಯಿ ನಗರ ವಸತಿ ಯೋಜನೆಗೆ 30 ಸಾವಿರ ರೂ. ವಂತಿಗೆಯನ್ನು ಪಾವತಿಸಿದ್ದರು. ಹಣ ಪಾವತಿಸಿ ವರ್ಷಗಳೇ ಕಳೆದಿದೆ. ಆದರೆ ಮನೆ ನಿರ್ಮಾಣಕ್ಕೆ ಹಣ ಮಂಜೂರಾಗಿಲ್ಲ. ಇತ್ತ ಸೂರಿಲ್ಲದೇ ಅತ್ತ ಹಣವೂ ಇಲ್ಲದೇ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ.

2008 ರಿಂದ 13 ರವರೆಗೆ ಇದ್ದ ರಾಜ್ಯ ಬಿಜೆಪಿ ಸರ್ಕಾರ ವಸತಿ ರಹಿತ ನಗರದ ಬಡ ಜನರಿಗೆ ಸೂರು ಕಟ್ಟಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ರೂಪಿಸಿತ್ತು. ಅದರಂತೆ ಜಿಲ್ಲಾ ಕೇಂದ್ರ ನಗರದಲ್ಲಿಯೂ ಸಹ 2000 ಜಿ+1 ಮನೆ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆದು ಅವರಿಂದ 30 ಸಾವಿರ ರೂಪಾಯಿ ಹಣವನ್ನು ವಂತಿಗೆಯಾಗಿ ಸಹ ಪಡೆದಿತ್ತು.

ಸ್ವಂತ ಮನೆಯಿಲ್ಲದೆ ಪರದಾಡುತ್ತಿರುವ ಫಲಾನುಭವಿಗಳು

ಅದರಂತೆ 2.10 ಲಕ್ಷದ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು‌. ಉದ್ದೇಶಿತ ಯೋಜನೆಯಂತೆ ಫಲಾನುಭವಿಗಳಿಂದ 30 ಸಾವಿರ ರೂಪಾಯಿ ವಂತಿಗೆ, 70 ಸಾವಿರ ರೂಪಾಯಿ ರಾಜ್ಯ ಸರ್ಕಾರದ ಸಹಾಯಧನ ಹಾಗೂ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ವ್ಯವಸ್ಥೆ ಕಲ್ಪಿಸಿ ಒಟ್ಟು 2.10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿವೇಶನ ಸಹಿತ ಮನೆ ನಿರ್ಮಾಣ ಯೋಜನೆ ಇದಾಗಿದ್ದು, ನೆತ್ತಿಯ ಮೇಲೊಂದು ಸೂರು ಇಲ್ಲದ ಅನೇಕ ಅರ್ಹ ಫಲಾನುಭವಿಗಳು ಸುಮಾರು ಆರೇಳು ವರ್ಷಗಳ ಹಿಂದೆಯೇ ತಮಗೊಂದು ಮನೆ ಸಿಗುತ್ತದೆ ಎಂಬ ಆಸೆಯಿಂದ ಸಾಲಸೂಲ ಮಾಡಿ ಅರ್ಜಿ ಭರ್ತಿ ಮಾಡಿ 30 ಸಾವಿರ ರೂಪಾಯಿ ತಮ್ಮ ಪಾಲಿನ ವಂತಿಗೆ ಹಣವನ್ನು ಸಹ ಪಾವತಿಸಿದ್ದಾರೆ. ಆದರೆ ಈ ಮನೆಗಳು ಇನ್ನೂ ನಿರ್ಮಾಣವಾಗದೆ ಇರೋದು ಫಲಾನುಭವಿಗಳಿಗೆ ಸ್ವಂತ ಮನೆಯ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಯೋಜನೆಯ ಆರಂಭದಲ್ಲಿ ನಗರದ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಸಲು ಪ್ರಾರಂಭವಾಯಿತು. ಆದರೆ ಆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೇವಲ 200 ರಿಂದ 300 ಮನೆಗಳನ್ನು ಮಾತ್ರ ನಿರ್ಮಿಸಿ ಕೈ ಬಿಡಲಾಗಿದೆ. ಇದರಿಂದಾಗಿ ಅಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿದೆ. ಇನ್ನು ಕೆಲವೆಡೆ ಅರೆಬರೆ ಮನೆಗಳನ್ನು ನಿರ್ಮಾಣ ಮಾಡಿ ಕೈಬಿಡಲಾಗಿದೆ. ಹೀಗಾಗಿ ಮನೆ ನಿರ್ಮಾಣವಾಗುತ್ತವೆಯೋ, ಇಲ್ಲವೋ ಎಂಬ ಅನುಮಾನ ಜನರಲ್ಲಿ ಕಾಡಲಾರಂಭಿಸಿದೆ.

ಇತ್ತ ಮನೆಯೂ ಇಲ್ಲದೆ ಮನೆಗಾಗಿ ಮಾಡಿರುವ ಸಾಲವು ಏರುತ್ತಿರೋದು ಫಲಾನುಭವಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಬೇಗನೆ ನಿರ್ಮಾಣ ಮಾಡಿಕೊಡಲು ಮುಂದಾಗಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

Intro:


Body:ಕೊಪ್ಪಳ:- ನಿವೇಶನ ಹಾಗೂ ಮನೆ ಇಲ್ಲದ ಆ ಬಡ ವಸತಿರಹಿತರು ತಮಗೂ ಒಂದು ಸ್ವಂತ ಸೂರು ಬರುತ್ತದೆ ಎಂದುಕೊಂಡು ಸುಮಾರು ಆರೇಳು ವರ್ಷಗಳಿಂದ ಕಾಯುತ್ತಲೇ ಇದ್ದಾರೆ. ಸ್ವಂತ ಸೂರು ಹೊಂದಲು ಸರ್ಕಾರ ನಿಗದಿ ಮಾಡಿದ್ದ ವಂತಿಗೆ ಹಣವನ್ನು ಸಹ ಪಾವತಿಸಿದ್ದಾರೆ. ಆದರೂ ಸಹ ಆ ಬಡ ಫಲಾನುಭವಿಗಳಿಗೆ ಮನೆ ಅನ್ನೋದು ಇನ್ನೂ ಗಗನ ಕುಸುಮವಾಗಿಯೇ ಉಳಿದುಕೊಂಡಿದೆ. ಏನಿದು ಮನೆಮನೆ ರಾಮಾಯಣ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ...

ಹೌದು..., 2008 ರಿಂದ 13 ರವರೆಗೆ ಇದ್ದ ರಾಜ್ಯ ಬಿಜೆಪಿ ಸರ್ಕಾರ ವಸತಿರಹಿತ ನಗರದ ಬಡ ಜನರಿಗೆ ಸೂರು ಕಟ್ಟಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ರೂಪಿಸಿತು. ಅದರಂತೆ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿಯೂ ಸಹ 2000 ಜಿ+1 ಮನೆ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆದು ಅವರಿಂದ ಮೂವತ್ತು ಸಾವಿರ ರೂಪಾಯಿ ಹಣ ವಂತಿಗೆಯನ್ನು ಸಹ ಪಡೆಯಲಾಯಿತು. 2.10 ಲಕ್ಷದ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು‌. ಉದ್ದೇಶಿತ ಯೋಜನೆಯಂತೆ ಫಲಾನುಭವಿಗಳಿಂದ 30 ಸಾವಿರ ರುಪಾಯಿ ವಂತಿಗೆ, 70 ಸಾವಿರ ರೂಪಾಯಿ ರಾಜ್ಯ ಸರ್ಕಾರದ ಸಹಾಯಧನ ಹಾಗೂ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ವ್ಯವಸ್ಥೆ ಕಲ್ಪಿಸಿ ಒಟ್ಟು 2.10 ಲಕ್ಷ ರುಪಾಯಿ ವೆಚ್ಚದಲ್ಲಿ ನಿವೇಶನ ಸಹಿತ ಮನೆ ನಿರ್ಮಾಣ ಯೋಜನೆ ಇದಾಗಿತ್ತು. ನೆತ್ತಿಯ ಮೇಲೊಂದು ಸೂರು ಇಲ್ಲದ ಅನೇಕ ಅರ್ಹ ಫಲಾನುಭವಿಗಳು ಸುಮಾರು ಆರೇಳು ವರ್ಷಗಳ ಹಿಂದೆಯೇ ತಮಗೊಂದು ಮನೆ ಸಿಗುತ್ತದೆ ಎಂಬ ಆಸೆಯಿಂದ ಸಾಲಸೂಲ ಮಾಡಿ ಅರ್ಜಿ ಭರ್ತಿ ಮಾಡಿ 30 ಸಾವಿರ ರುಪಾಯಿ ತಮ್ಮ ಪಾಲಿನ ವಂತಿಗೆ ಹಣವನ್ನು ಸಹ ಪಾವತಿಸಿದ್ದಾರೆ. ಆದರೆ ಈ ಮನೆಗಳು ಇನ್ನೂ ನಿರ್ಮಾಣವಾಗದೆ ಇರೋದು ಫಲಾನುಭವಿಗಳಿಗೆ ಸ್ವಂತ ಮನೆಯ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಬೈಟ್1:- ಸುಭದ್ರಾ, ಮನೆಗಾಗಿ ಅರ್ಜಿ ಸಲ್ಲಿಸಿ ವಂತಿಗೆ ಹಣ ಪಾವತಿಸಿದ ಫಲಾನುಭವಿ.

ಯೋಜನೆಯ ಆರಂಭದಲ್ಲಿ ನಗರದ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಸಲು ಪ್ರಾರಂಭವಾಯಿತು. ಆದರೆ ಆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಅಂದರೆ ಅಲ್ಲಿ ಸುಮಾರು ಕೇವಲ ಸುಮಾರು 200 ರಿಂದ 300 ಮನೆಗಳನ್ನು ಮಾತ್ರ ನಿರ್ಮಿಸಿ ಕೈಬಿಡಲಾಗಿದೆ. ಇದರಿಂದಾಗಿ ಅಲ್ಲಿ ಜಾಲಿ ಬೆಳೆದು ನಿಂತಿದೆ. ಇನ್ನು ಕೆಲವೆಡೆ ಅರ್ಧಂಬರ್ಧ ಮನೆಗಳನ್ನು ನಿರ್ಮಾಣ ಮಾಡಿ ಕೈಬಿಡಲಾಗಿದೆ. ಹೀಗಾಗಿ, ಮನೆ ನಿರ್ಮಾಣವಾಗುತ್ತವೆಯೋ, ಇಲ್ಲವೋ ಎಂಬ ಅನುಮಾನ ಕಾಡಲಾರಂಭಿಸಿದೆ. ಸುಮಾರು ವರ್ಷಗಳಿಂದ ಈ ಯೋಜನೆಯು ನೆನೆಗುದಿಗೆ ಬಿದ್ದಿರುವುದು ಫಲಾನುಭವಿಗಳಲ್ಲಿ ನಿರಾಸೆ ಮೂಡಿಸಿದೆ. ಮನೆ ಸಿಗುತ್ತದೆ ಎಂಬ ಮಹದಾಸೆಯಿಂದ ಸಾಲಸೂಲ ಮಾಡಿ ಫಲಾನುಭವಿಗಳು 30 ಸಾವಿರ ರುಪಾಯಿ ಹಣ ಪಾವತಿಸಿದ್ದಾರೆ. ಇತ್ತ ಮನೆಯೂ ಇಲ್ಲ ಸಾಲವು ಏರುತ್ತಿರೋದು ಫಲಾನುಭವಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ, ಈ ಬಗ್ಗೆ ನಿಗಾ ವಹಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಬೇಗನೆ ನಿರ್ಮಾಣ ಮಾಡಿಕೊಡಲು ಸಂಬಂಧಿಸಿದವರು ಮುಂದಾಗಬೇಕು ಎಂಬುದು ಫಲಾನುಭವಿಗಳು ಸೇರಿದಂತೆ ಸ್ಥಳಿಯರ ಅಗ್ರಹವಾಗಿದೆ.

ಬೈಟ್2:- ಮುನೀರ್ ಸಿದ್ಧಿಕಿ, ಸ್ಥಳೀಯ ಮುಖಂಡ.

ಸುಮಾರು ಆರೇಳು ವರ್ಷಗಳ ಹಿಂದೆ ಮನೆಗಾಗಿ ಹಂಬಲಿಸಿ ಕಾಯುತ್ತಿರುವ ಫಲಾನುಭವಿಗಳಿಗೆ ಏನೊಂದು ಅರ್ಥವಾಗದೆ ಕುಳಿತಿದ್ದಾರೆ. ನಗರಸಭೆ, ಜಿಲ್ಲಾಡಳಿತ ಈ ಬಗ್ಗೆ ತನ್ನ ಜವಾಬ್ದಾರಿಯನ್ನು ಮೆರೆಯುವ ಮೂಲಕ ಬಡವರ ಸೂರಿನ ಕನಸು ನನಸು ಮಾಡಬೇಕಿದೆ.






Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.