ETV Bharat / state

ಗಾಯಗಳಾದರೆ ಪ್ರಥಮ ಚಿಕಿತ್ಸೆ ನೀಡುವ ಆಪತ್ಬಾಂಧವ: ಯುವಕನ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

author img

By

Published : Sep 8, 2020, 2:25 PM IST

ಗಂಗಾವತಿಯ ಹೆಬ್ಬಾಳ ಗ್ರಾಮದ ಯುವಕನೋರ್ವ ಗ್ರಾಮದ ಜನರಿಗೆ ಗಾಯಗಳಾದರೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ.

Villagers appreciation for youth wo
ಉಮೇಶ್​ಗೆ ದೊರೆತ ಅಭಿನಂದನಾ ಪತ್ರ

ಗಂಗಾವತಿ : ಒಬ್ಬೊಬ್ಬರ ಹವ್ಯಾಸ ಒಂದೊಂದು ರೀತಿಯಾಗಿರುತ್ತದೆ. ವೃತ್ತಿಯ ಜೊತೆಗೆ ಪ್ರವೃತ್ತಿಯಲ್ಲಿ ಸಿಗುವ ಖುಷಿ ಅನುಭವಿಸಲು ಸಾಕಷ್ಟು ಜನ ನಾನಾ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ವಿಭಿನ್ನ ವ್ಯಕ್ತಿತ್ವ ಹೊಂದಿರುವವರೇ ತಾಲೂಕಿನ ಹೆಬ್ಬಾಳ ಗ್ರಾಮದ ಬಿ.ಉಮೇಶ.

ಉಮೇಶ ಜೀವನ ನಡೆಸಲು ಗ್ರಾಮದಲ್ಲಿ ಸಣ್ಣದೊಂದು ಪಾನ್​ ಬೀಡ ಅಂಗಡಿ ಮತ್ತು ಪಂಚರ್ ಶಾಪ್ ಇಟ್ಟುಕೊಂಡಿದ್ದಾರೆ. ಆದರೆ ಪ್ರವೃತ್ತಿಯಲ್ಲಿ ಗ್ರಾಮದ ಮಕ್ಕಳು, ಯುವಕರಿಗೆ ಆಪತ್ಬಾಂಧವ. ಯಾಕೆಂದರೆ ಊರಿನಲ್ಲಿ ಯಾರಿಗೆ ಏನೇ ಆಕಸ್ಮಿಕ ಗಾಯಗಳಾದರೂ ಉಮೇಶ ತಕ್ಷಣ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಅದರಲ್ಲೂ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Villagers appreciation for youth wo
ಉಮೇಶ್​ಗೆ ದೊರೆತ ಅಭಿನಂದನಾ ಪತ್ರ

ಉಮೇಶ ಅತೀ ವಿರಳವಾಗಿರುವ ಒ ಪಾಸಿಟಿವ್ ಬಾಂಬೆ ಗ್ರೂಪ್​ನ ರಕ್ತ ಹೊಂದಿದ್ದು, ಪ್ರಥಮ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ರಕ್ತದಾನ ಮಾಡುವ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗಂಗಾವತಿ : ಒಬ್ಬೊಬ್ಬರ ಹವ್ಯಾಸ ಒಂದೊಂದು ರೀತಿಯಾಗಿರುತ್ತದೆ. ವೃತ್ತಿಯ ಜೊತೆಗೆ ಪ್ರವೃತ್ತಿಯಲ್ಲಿ ಸಿಗುವ ಖುಷಿ ಅನುಭವಿಸಲು ಸಾಕಷ್ಟು ಜನ ನಾನಾ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಅಂತಹ ವಿಭಿನ್ನ ವ್ಯಕ್ತಿತ್ವ ಹೊಂದಿರುವವರೇ ತಾಲೂಕಿನ ಹೆಬ್ಬಾಳ ಗ್ರಾಮದ ಬಿ.ಉಮೇಶ.

ಉಮೇಶ ಜೀವನ ನಡೆಸಲು ಗ್ರಾಮದಲ್ಲಿ ಸಣ್ಣದೊಂದು ಪಾನ್​ ಬೀಡ ಅಂಗಡಿ ಮತ್ತು ಪಂಚರ್ ಶಾಪ್ ಇಟ್ಟುಕೊಂಡಿದ್ದಾರೆ. ಆದರೆ ಪ್ರವೃತ್ತಿಯಲ್ಲಿ ಗ್ರಾಮದ ಮಕ್ಕಳು, ಯುವಕರಿಗೆ ಆಪತ್ಬಾಂಧವ. ಯಾಕೆಂದರೆ ಊರಿನಲ್ಲಿ ಯಾರಿಗೆ ಏನೇ ಆಕಸ್ಮಿಕ ಗಾಯಗಳಾದರೂ ಉಮೇಶ ತಕ್ಷಣ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಅದರಲ್ಲೂ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Villagers appreciation for youth wo
ಉಮೇಶ್​ಗೆ ದೊರೆತ ಅಭಿನಂದನಾ ಪತ್ರ

ಉಮೇಶ ಅತೀ ವಿರಳವಾಗಿರುವ ಒ ಪಾಸಿಟಿವ್ ಬಾಂಬೆ ಗ್ರೂಪ್​ನ ರಕ್ತ ಹೊಂದಿದ್ದು, ಪ್ರಥಮ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ರಕ್ತದಾನ ಮಾಡುವ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.