ETV Bharat / state

ರಾಜ್ಯದೆಲ್ಲೆಡೆ ಪೊಲೀಸರಿಂದ ಲಾಠಿ ಏಟು : ಗಂಗಾವತಿಯಲ್ಲಿ ಮಾತ್ರ 'ಹೂವಿನ ಗಿಫ್ಟ್​'!! - Flower Gift for corona rules breakers

ಗಂಗಾವತಿಯಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಮನೆಯಿಂದ ಹೊರ ಬಂದ ಸವಾರರಿಗೆ ಪೊಲೀಸರು ಹೂವು ಕೊಟ್ಟು ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿ ಮಾದರಿಯಾಗಿದ್ದಾರೆ..

flower-gift-for-corona-rules-breakers-by-police-in-gangavathi
ವಾಹನ ಸವಾರರಿಗೆ ಹೂ ನೀಡಿ ಮನವಿ ಮಾಡಿದ ಪೊಲೀಸರು
author img

By

Published : May 11, 2021, 5:35 PM IST

ಗಂಗಾವತಿ : ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಲಾಕ್​ಡೌನ್ಮೊರೆ ಹೋಗಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆಂದು ಮನೆಯಿಂದ ಹೊರ ಬಂದ ಬಹುತೇಕರಿಗೆ ರಾಜ್ಯದೆಲ್ಲೆಡೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತಾಲೂಕಿನ ಪೊಲೀಸರು ಮಾತ್ರ ಹೂವು ಕೊಟ್ಟು ಸವಾರರನ್ನು ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿ ಗಮನ ಸೆಳೆದಿದ್ದಾರೆ.

ವಾಹನ ಸವಾರರಿಗೆ ಹೂ ನೀಡಿ ಮನವಿ ಮಾಡಿದ ಪೊಲೀಸರು..

ಇಲ್ಲಿನ ಮಹಾತ್ಮಗಾಂಧಿ ವೃತ್ತ, ಮಹಾವೀರ ವೃತ್ತ, ಜುಲಾಯಿನಗರ, ಸಿಬಿಎಸ್ ಸರ್ಕಲ್ ಸೇರಿ ನಗರದ ನಾನಾ ಪ್ರಮುಖ ರಸ್ತೆ, ವೃತ್ತಗಳಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ವಾಹನ ಸವಾರರಿಗೆ ಗುಲಾಬಿ ನೀಡುವ ಮೂಲಕ ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ, ನಗರಠಾಣೆಯ ಪಿಐ ವೆಂಕಟಸ್ವಾಮಿ ನೇತೃತ್ವದಲ್ಲಿ ನಗರಠಾಣೆ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಹೂವಿನ ಸ್ವಾಗತ ನೀಡಿ, ಅನಗತ್ಯ ಹೊರಗೆ ಓಡಾಡಬೇಡಿ.

ಇದು ಹೂವಿನ ಮನವಿ, ಮಾತು ತಪ್ಪಿದರೆ ಲಾಠಿ ರುಚಿ ಕಾಣುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿ ಅರಿವು ಮೂಡಿಸಿದ್ದಾರೆ.

ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!

ಗಂಗಾವತಿ : ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಲಾಕ್​ಡೌನ್ಮೊರೆ ಹೋಗಿರುವ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆಂದು ಮನೆಯಿಂದ ಹೊರ ಬಂದ ಬಹುತೇಕರಿಗೆ ರಾಜ್ಯದೆಲ್ಲೆಡೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತಾಲೂಕಿನ ಪೊಲೀಸರು ಮಾತ್ರ ಹೂವು ಕೊಟ್ಟು ಸವಾರರನ್ನು ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿ ಗಮನ ಸೆಳೆದಿದ್ದಾರೆ.

ವಾಹನ ಸವಾರರಿಗೆ ಹೂ ನೀಡಿ ಮನವಿ ಮಾಡಿದ ಪೊಲೀಸರು..

ಇಲ್ಲಿನ ಮಹಾತ್ಮಗಾಂಧಿ ವೃತ್ತ, ಮಹಾವೀರ ವೃತ್ತ, ಜುಲಾಯಿನಗರ, ಸಿಬಿಎಸ್ ಸರ್ಕಲ್ ಸೇರಿ ನಗರದ ನಾನಾ ಪ್ರಮುಖ ರಸ್ತೆ, ವೃತ್ತಗಳಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ವಾಹನ ಸವಾರರಿಗೆ ಗುಲಾಬಿ ನೀಡುವ ಮೂಲಕ ಸುರಕ್ಷಿತವಾಗಿ ಮನೆ ಸೇರಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ, ನಗರಠಾಣೆಯ ಪಿಐ ವೆಂಕಟಸ್ವಾಮಿ ನೇತೃತ್ವದಲ್ಲಿ ನಗರಠಾಣೆ ಹಾಗೂ ಸಂಚಾರಿ ಪೊಲೀಸ್ ಸಿಬ್ಬಂದಿ ಹೂವಿನ ಸ್ವಾಗತ ನೀಡಿ, ಅನಗತ್ಯ ಹೊರಗೆ ಓಡಾಡಬೇಡಿ.

ಇದು ಹೂವಿನ ಮನವಿ, ಮಾತು ತಪ್ಪಿದರೆ ಲಾಠಿ ರುಚಿ ಕಾಣುತ್ತದೆ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿ ಅರಿವು ಮೂಡಿಸಿದ್ದಾರೆ.

ಓದಿ: ಸಿಗದ ಆಂಬ್ಯುಲೆನ್ಸ್: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಬೈಕ್ ಮೇಲೆಯೇ ಕೊಂಡೊಯ್ದರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.