ETV Bharat / state

ಗೃಹರಕ್ಷಕರಿಗೆ ಬಿಜೆಪಿಯಿಂದ ದಿನಸಿ ಕಿಟ್​ ವಿತರಣೆ - Distribution of groceries kit

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಬಿಜೆಪಿ ವತಿಯಿಂದ ದಿನಸಿ ಕಿಟ್​ ನೀಡಲಾಯಿತು.

Distribution of groceries kit by BJP for home guards
ಗೃಹ ರಕ್ಷಕರಿಗೆ ಬಿಜೆಪಿಯಿಂದ ದಿನಸಿ ಕಿಟ್​ ವಿತರಣೆ
author img

By

Published : Apr 24, 2020, 9:09 PM IST

ಕುಷ್ಟಗಿ: ಲಾಕ್​ಡೌನ್​ ಹಿನ್ನೆಲೆ ನಿರಂತರವಾಗಿ ಶ್ರಮಿಸುತ್ತಿರುವ ಗೃಹರಕ್ಷಕ ದಳಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ದಿನಸಿ ಕಿಟ್​ಗಳನ್ನು ವಿತರಿಸಲಾಯಿತು.

ಗೃಹರಕ್ಷಕರಿಗೆ ಬಿಜೆಪಿಯಿಂದ ದಿನಸಿ ಕಿಟ್​ ವಿತರಣೆ

ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ದಿನಸಿ ಕಿಟ್​ಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪಕ್ಷದ ಆದೇಶದ ಮೇರೆಗೆ ಗೃಹರಕ್ಷಕರು ಸೇರಿದಂತೆ ವಿವಿಧ ವರ್ಗದ ಸೇವಾನಿರತರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಮಹಾಮಾರಿ ಕೊರೊನಾ ತೊಲಗಿ, ಜನಸಾಮಾನ್ಯರು ಸಹಜ ಸ್ಥಿತಿಗೆ ಮರಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಮಾಜಿ ಉಪಾಧ್ಯಕ್ಷ ವಿನಯ ಮೇಲಿನಮನಿ, ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರು, ಗೃಹರಕ್ಷಕ ಘಟಕಾಧಿಕಾರಿ ರವೀಂದ್ರ ಬಾಕಳೆ ಇದ್ದರು.

ಕುಷ್ಟಗಿ: ಲಾಕ್​ಡೌನ್​ ಹಿನ್ನೆಲೆ ನಿರಂತರವಾಗಿ ಶ್ರಮಿಸುತ್ತಿರುವ ಗೃಹರಕ್ಷಕ ದಳಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ದಿನಸಿ ಕಿಟ್​ಗಳನ್ನು ವಿತರಿಸಲಾಯಿತು.

ಗೃಹರಕ್ಷಕರಿಗೆ ಬಿಜೆಪಿಯಿಂದ ದಿನಸಿ ಕಿಟ್​ ವಿತರಣೆ

ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ದಿನಸಿ ಕಿಟ್​ಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪಕ್ಷದ ಆದೇಶದ ಮೇರೆಗೆ ಗೃಹರಕ್ಷಕರು ಸೇರಿದಂತೆ ವಿವಿಧ ವರ್ಗದ ಸೇವಾನಿರತರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಮಹಾಮಾರಿ ಕೊರೊನಾ ತೊಲಗಿ, ಜನಸಾಮಾನ್ಯರು ಸಹಜ ಸ್ಥಿತಿಗೆ ಮರಳಲಿ ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಮಾಜಿ ಉಪಾಧ್ಯಕ್ಷ ವಿನಯ ಮೇಲಿನಮನಿ, ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರು, ಗೃಹರಕ್ಷಕ ಘಟಕಾಧಿಕಾರಿ ರವೀಂದ್ರ ಬಾಕಳೆ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.