ETV Bharat / state

ಕೊಪ್ಪಳ: ಕೊರೊನಾ ಕಾಟದಿಂದ ನೆಲಕಚ್ಚಿದ ಕ್ಯಾಟರಿಂಗ್ ಉದ್ಯಮ

ಕೋವಿಡ್​ ಹಿನ್ನೆಲೆ ನಿಶ್ಚಿತಾರ್ಥ, ಮದುವೆ ಸೇರಿದಂತೆ ಸಭೆ ಸಮಾರಂಭಗಳಿಗೆ ಇಂತಿಷ್ಟು ಜನರಿಗೆ ಮಾತ್ರ ಅವಕಾಶ ಎಂದು ನಿಗದಿಪಡಿಸಲಾಗಿದೆ. ಪರಿಣಾಮ ಅನೇಕ ಕಾರ್ಯಕ್ರಮಗಳು ಮನೆ ಮಟ್ಟಿಗೆ ನಡೆಯುತ್ತಿದ್ದು, ಕ್ಯಾಟರಿಂಗ್ ಉದ್ಯಮ ನಂಬಿದವರ ಜೀವನ ಸಂಕಷ್ಟಕ್ಕೊಳಗಾಗಿದೆ.

author img

By

Published : Jun 4, 2021, 8:52 AM IST

covid effects on catering business
ಕ್ಯಾಟರಿಂಗ್ ಉದ್ಯಮದ ಮೇಲೆ ಕೋವಿಡ್​ ಎಫೆಕ್ಟ್​​

ಕೊಪ್ಪಳ: ಕೊರೊನಾ ಸೋಂಕು ಹರಡುವಿಕೆ ಭೀತಿ ಹಾಗೂ ಲಾಕ್​​ಡೌನ್ ಪರಿಣಾಮದಿಂದ ಬಹುತೇಕ ಎಲ್ಲ ವರ್ಗಗಳ ಜನರ ಬದುಕು ದುಸ್ತರವಾಗಿದೆ. ಕ್ಯಾಟರಿಂಗ್ ಉದ್ಯೋಗ ಮಾಡುತ್ತಿದ್ದವರ ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದವರ ಬದುಕು ಸಹ ಬೀದಿಗೆ ಬೀಳುವಂತಾಗಿದೆ. ಜಿಲ್ಲೆಯಲ್ಲಿಯೂ ಸಹ ಕ್ಯಾಟರಿಂಗ್ ಉದ್ಯಮ ಈಗ ಸಂಪೂರ್ಣ ನೆಲಕಚ್ಚಿದೆ.

ಹೌದು, ಮದುವೆ, ನಿಶ್ಚಿತಾರ್ಥ ಸೇರಿದಂತೆ ಅನೇಕ ಸಭೆ ಸಮಾರಂಭಗಳಿಗೆ ಬಗೆ ಬಗೆಯ, ರುಚಿಕರವಾದ ಭೋಜನ, ಉಪಹಾರ ತಯಾರಿಸಿ ಪೂರೈಸುವ ಉದ್ಯೋಗ ಮಾಡುತ್ತಿದ್ದವರ ಬದುಕೀಗ ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್​ ಹಿನ್ನೆಲೆ ಹೆಚ್ಚು ಜನ ಸೇರಿಸಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಕೆಲವರು ಕಾರ್ಯಕ್ರಮಗಳನ್ನು ಮುಂದೂಡಿದ್ದರೆ, ಮತ್ತೆ ಕೆಲವರು ಮನೆ ಮಟ್ಟಿಗೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದ್ರಿಂದ ಕ್ಯಾಟರಿಂಗ್ ಉದ್ಯಮ ನಷ್ಟ ಅನುಭವಿಸುತ್ತಿದೆ.

ಕ್ಯಾಟರಿಂಗ್ ಉದ್ಯಮದ ಮೇಲೆ ಕೋವಿಡ್​ ಎಫೆಕ್ಟ್​​

ಜಿಲ್ಲೆಯಲ್ಲಿ ಕ್ಯಾಟರಿಂಗ್ ಉದ್ಯೋಗ ಮಾಡುವವರು ಸುಮಾರು 20 ಮಂದಿ ಇದ್ದಾರೆ. ಕ್ಯಾಟರಿಂಗ್​​ಗೆ ಪೂರಕವಾಗಿ ಕೆಲಸ ಮಾಡುವ ಬಾಣಸಿಗರು, ಸಹಾಯಕರು, ಅಡುಗೆ ಬಡಿಸುವವರು, ಪಾತ್ರೆ ತೊಳೆಯುವವರು ಸೇರಿ ನೂರಾರು ಜನರು ಇದ್ದಾರೆ. ಮದುವೆ, ನಿಶ್ಚಿತಾರ್ಥ, ಸಭೆ ಸಮಾರಂಭಗಳಿಗೆ ರುಚಿಯಾದ ಆಹಾರ ತಯಾರಿಸಿ, ಅದನ್ನು ಪೂರೈಸಿ ದುಡಿಮೆ ಮಾಡಿಕೊಳ್ಳುತ್ತಿದ್ದೆವು. ಆದರೆ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವುದರಿಂದ ಯಾವುದೇ ಕಾರ್ಯಕ್ರಮಗಳು ಸಿಗದ ಪರಿಣಾಮ ನಷ್ಟ ಅನುಭವಿಸುವಂತಾಗಿದೆ ಎಂದು ಕ್ಯಾಟರರ್​ ಗಿರೀಶ ಪಾನಘಂಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಂಟಿಂಗ್ ಸ್ಪೆಷಲಿಸ್ಟ್ ‘ರಾಣಾ’ ಬಲೆಗೆ ಬಿದ್ದ ಮೊಲ ಬೇಟೆಗಾರರು!

ಕೆಲ ಕಾರ್ಯಕ್ರಮಗಳು ನಡೆದರೂ ಸಹ ಅವು ಮನೆ ಮಂದಿಗೆ ಮಾತ್ರ ಸೀಮಿತಗೊಂಡಿವೆ. ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಬಂದರೆ ಮಾತ್ರ ಕಾರ್ಯಕ್ರಮದ ಆಯೋಜಕರು ಕ್ಯಾಟರಿಂಗ್​ನವರಿಗೆ ಹೇಳುತ್ತಿದ್ದರು. ಆದರೆ ಈಗ ಕಾರ್ಯಕ್ರಮಗಳು ಮನೆ ಮಂದಿಗೆ ಮಾತ್ರ ಸೀಮಿತವಾಗಿರುವುದರಿಂದ ತಾವೇ ಮನೆಯಲ್ಲಿಯೇ ಅಡುಗೆ ತಯಾರಿಸುತ್ತಿದ್ದಾರೆ.

ಹೀಗಾಗಿ ಕ್ಯಾಟರಿಂಗ್ ಉದ್ಯಮವನ್ನೇ ನಂಬಿ ಬದುಕು ನಡೆಸುತ್ತಿದ್ದವರ ಕೈಗೆ ಕೆಲಸವಿಲ್ಲದೇ ಆದಾಯವೂ ಬರದಂತಾಗಿದೆ. ಬಾಣಸಿಗರು, ಊಟ ಬಡಿಸುವವರು, ತರಕಾರಿ ಹೆಚ್ಚುವವರು, ಪಾತ್ರೆ ತೊಳೆಯುವವರಿಗೂ ಇದರ ಬಿಸಿ ತಟ್ಟಿದೆ. ಹಾಗಾಗಿ ಸರ್ಕಾರ ತಮ್ಮ ನೆರವಿಗೆ ಬರಬೇಕೆಂಬುದು ಸಮಸ್ತ ಕ್ಯಾಟರರ್ಸ್​​ ವತಿಯಿಂದ ಕ್ಯಾಟರರ್ ಸತೀಶ ಮಂಗಳೂರು ಮನವಿ ಮಾಡಿದ್ದಾರೆ.

ಕೊಪ್ಪಳ: ಕೊರೊನಾ ಸೋಂಕು ಹರಡುವಿಕೆ ಭೀತಿ ಹಾಗೂ ಲಾಕ್​​ಡೌನ್ ಪರಿಣಾಮದಿಂದ ಬಹುತೇಕ ಎಲ್ಲ ವರ್ಗಗಳ ಜನರ ಬದುಕು ದುಸ್ತರವಾಗಿದೆ. ಕ್ಯಾಟರಿಂಗ್ ಉದ್ಯೋಗ ಮಾಡುತ್ತಿದ್ದವರ ಹಾಗೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದವರ ಬದುಕು ಸಹ ಬೀದಿಗೆ ಬೀಳುವಂತಾಗಿದೆ. ಜಿಲ್ಲೆಯಲ್ಲಿಯೂ ಸಹ ಕ್ಯಾಟರಿಂಗ್ ಉದ್ಯಮ ಈಗ ಸಂಪೂರ್ಣ ನೆಲಕಚ್ಚಿದೆ.

ಹೌದು, ಮದುವೆ, ನಿಶ್ಚಿತಾರ್ಥ ಸೇರಿದಂತೆ ಅನೇಕ ಸಭೆ ಸಮಾರಂಭಗಳಿಗೆ ಬಗೆ ಬಗೆಯ, ರುಚಿಕರವಾದ ಭೋಜನ, ಉಪಹಾರ ತಯಾರಿಸಿ ಪೂರೈಸುವ ಉದ್ಯೋಗ ಮಾಡುತ್ತಿದ್ದವರ ಬದುಕೀಗ ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್​ ಹಿನ್ನೆಲೆ ಹೆಚ್ಚು ಜನ ಸೇರಿಸಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಕೆಲವರು ಕಾರ್ಯಕ್ರಮಗಳನ್ನು ಮುಂದೂಡಿದ್ದರೆ, ಮತ್ತೆ ಕೆಲವರು ಮನೆ ಮಟ್ಟಿಗೆ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದ್ರಿಂದ ಕ್ಯಾಟರಿಂಗ್ ಉದ್ಯಮ ನಷ್ಟ ಅನುಭವಿಸುತ್ತಿದೆ.

ಕ್ಯಾಟರಿಂಗ್ ಉದ್ಯಮದ ಮೇಲೆ ಕೋವಿಡ್​ ಎಫೆಕ್ಟ್​​

ಜಿಲ್ಲೆಯಲ್ಲಿ ಕ್ಯಾಟರಿಂಗ್ ಉದ್ಯೋಗ ಮಾಡುವವರು ಸುಮಾರು 20 ಮಂದಿ ಇದ್ದಾರೆ. ಕ್ಯಾಟರಿಂಗ್​​ಗೆ ಪೂರಕವಾಗಿ ಕೆಲಸ ಮಾಡುವ ಬಾಣಸಿಗರು, ಸಹಾಯಕರು, ಅಡುಗೆ ಬಡಿಸುವವರು, ಪಾತ್ರೆ ತೊಳೆಯುವವರು ಸೇರಿ ನೂರಾರು ಜನರು ಇದ್ದಾರೆ. ಮದುವೆ, ನಿಶ್ಚಿತಾರ್ಥ, ಸಭೆ ಸಮಾರಂಭಗಳಿಗೆ ರುಚಿಯಾದ ಆಹಾರ ತಯಾರಿಸಿ, ಅದನ್ನು ಪೂರೈಸಿ ದುಡಿಮೆ ಮಾಡಿಕೊಳ್ಳುತ್ತಿದ್ದೆವು. ಆದರೆ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವುದರಿಂದ ಯಾವುದೇ ಕಾರ್ಯಕ್ರಮಗಳು ಸಿಗದ ಪರಿಣಾಮ ನಷ್ಟ ಅನುಭವಿಸುವಂತಾಗಿದೆ ಎಂದು ಕ್ಯಾಟರರ್​ ಗಿರೀಶ ಪಾನಘಂಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಂಟಿಂಗ್ ಸ್ಪೆಷಲಿಸ್ಟ್ ‘ರಾಣಾ’ ಬಲೆಗೆ ಬಿದ್ದ ಮೊಲ ಬೇಟೆಗಾರರು!

ಕೆಲ ಕಾರ್ಯಕ್ರಮಗಳು ನಡೆದರೂ ಸಹ ಅವು ಮನೆ ಮಂದಿಗೆ ಮಾತ್ರ ಸೀಮಿತಗೊಂಡಿವೆ. ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಬಂದರೆ ಮಾತ್ರ ಕಾರ್ಯಕ್ರಮದ ಆಯೋಜಕರು ಕ್ಯಾಟರಿಂಗ್​ನವರಿಗೆ ಹೇಳುತ್ತಿದ್ದರು. ಆದರೆ ಈಗ ಕಾರ್ಯಕ್ರಮಗಳು ಮನೆ ಮಂದಿಗೆ ಮಾತ್ರ ಸೀಮಿತವಾಗಿರುವುದರಿಂದ ತಾವೇ ಮನೆಯಲ್ಲಿಯೇ ಅಡುಗೆ ತಯಾರಿಸುತ್ತಿದ್ದಾರೆ.

ಹೀಗಾಗಿ ಕ್ಯಾಟರಿಂಗ್ ಉದ್ಯಮವನ್ನೇ ನಂಬಿ ಬದುಕು ನಡೆಸುತ್ತಿದ್ದವರ ಕೈಗೆ ಕೆಲಸವಿಲ್ಲದೇ ಆದಾಯವೂ ಬರದಂತಾಗಿದೆ. ಬಾಣಸಿಗರು, ಊಟ ಬಡಿಸುವವರು, ತರಕಾರಿ ಹೆಚ್ಚುವವರು, ಪಾತ್ರೆ ತೊಳೆಯುವವರಿಗೂ ಇದರ ಬಿಸಿ ತಟ್ಟಿದೆ. ಹಾಗಾಗಿ ಸರ್ಕಾರ ತಮ್ಮ ನೆರವಿಗೆ ಬರಬೇಕೆಂಬುದು ಸಮಸ್ತ ಕ್ಯಾಟರರ್ಸ್​​ ವತಿಯಿಂದ ಕ್ಯಾಟರರ್ ಸತೀಶ ಮಂಗಳೂರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.