ಗಂಗಾವತಿ(ಕೊಪ್ಪಳ): ಅನಾಥ ಮತ್ತು ಬಿಡಾಡಿ ಜಾನುವಾರುಗಳ ಸಂರಕ್ಷಣೆಯ ತಾಣವಾಗಿರುವ ತಾಲ್ಲೂಕಿನ ಆನೆಗೊಂದಿ ಬಳಿಯ ದುರ್ಗಾಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಸಿಎಂ ನಿಗದಿತ ಕಾರ್ಯಕ್ರಮದ ಪಟ್ಟಿಯಲ್ಲಿ ಗೋಶಾಲೆ ಭೇಟಿ ಇರದಿದ್ದರೂ ಅಲ್ಲಿಗೆ ತೆರಳಿ ಅಚ್ಚರಿ ಮೂಡಿಸಿದರು.
ಈ ಸಂದರ್ಭದಲ್ಲಿ ಗೋಶಾಲೆಯ ಗೋವೊಂದಕ್ಕೆ ಮುತ್ತಿಟ್ಟು ಪೂಜೆ ಸಲ್ಲಿಸಿದ ಬೊಮ್ಮಾಯಿ, ಗೋ ಗ್ರಾಸ ನೀಡಿ ಕಾಣಿಕೆ ತಲುಪಿಸಿದರು. ಗೋಶಾಲೆಯಲ್ಲಿನ ಸುಮಾರು ಐನೂರಕ್ಕೂ ಹೆಚ್ಚು ಹಸುಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು, ನಿರ್ವಹಣೆಯೇ ಸವಾಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಸಿಎಂ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಗೋಶಾಲೆ ಸರ್ಕಾರದಿಂದ ನಿರ್ವಹಣೆ ಅಥವಾ ಸರ್ಕಾರದ ಸುಪರ್ದಿಗೆ ಪಡೆಯುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಮಂಜೂರು ಮಾಡುವ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.
![basavaraj-bommai-did-go-puja-in-koppal](https://etvbharatimages.akamaized.net/etvbharat/prod-images/15987343_thu.jpg)
ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸುಧಾಕರ್, ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸ್ಗೂರು, ಶಶೀಲ್ ನಮೋಶಿ ಹಾಗು ಮಾಲತಿ ನಾಯಕ್ ಇದ್ದರು.
ಇದನ್ನೂ ಓದಿ : ಅಂಜನಾದ್ರಿಯೇ ಹನುಮನ ಜನ್ಮಸ್ಥಾನ, ಈ ಬಗ್ಗೆ ಘೋಷಣೆ ಅಗತ್ಯವಿಲ್ಲ : ಸಿಎಂ ಬೊಮ್ಮಾಯಿ